ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ವಿಕಲಚೇತನ ಕ್ರಿಕೆಟಿಗನಿಗೆ ನೆರವಾಗಲು ಅದಾನಿ ಫೌಂಡೇಶನ್ ಮುಂದಾಗಿದೆ.
ಈ ಕುರಿತು ಎಕ್ಸ್‌ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು, ಕ್ರಿಕೆಟಿಗ ಅಮೀರ್ ಹುಸೇನ್ ಲೋನ್ ಅವರ “ಹೋರಾಟವು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ” ಎಂದು ಹೇಳಿದ್ದಾರೆ.
34 ವರ್ಷದ ಲೋನ್ ಅವರು ಕೇಂದ್ರಾಡಳಿತ ಪ್ರದೇಶದ ಪ್ಯಾರಾ (ವಿಕಲಚೇತನ) ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಅವರ ಆಟದ ಶೈಲಿ ವಿಶಿಷ್ಟವಾದುದು. ಶಿಕ್ಷಕರು ಅವರ ಪ್ರತಿಭೆಯನ್ನು ಕಂಡುಹಿಡಿಡು, ಪ್ಯಾರಾ ಕ್ರಿಕೆಟ್​ನಲ್ಲಿ ಮುಂದುವರಿಯಲು ಮಾರ್ಗದರ್ಶನ ನೀಡಿದ ನಂತರ 2013 ರಿಂದ ವೃತ್ತಿಪರ ಕ್ರಿಕೆಟಿಗರಾಗಿದ್ದಾರೆ.
“ಅಮೀರ್ ಅವರ ಈ ಭಾವನಾತ್ಮಕ ಕಥೆ ಅದ್ಭುತವಾಗಿದೆ. ನಿಮ್ಮ ಧೈರ್ಯ, ಆಟದ ಮೇಲಿನ ಸಮರ್ಪಣೆ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಎಂದಿಗೂ ಬಿಡುವ ಮನೋಭಾವಕ್ಕೆ ನಾವು ನಮಸ್ಕರಿಸುತ್ತೇವೆ. ಅದಾನಿ ಫೌಂಡೇಶನ್ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತದೆ ಮತ್ತು ಈ ಅನನ್ಯ ಪ್ರಯಾಣದಲ್ಲಿ ನಿಮಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತದೆ. ನಿಮ್ಮ ಹೋರಾಟ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ” ಎಂದು ಅದಾನಿ ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಲೋನ್ ಅವರು ಎಂಟು ವರ್ಷದವರಾಗಿದ್ದಾಗ ಅವರ ತಂದೆಯ ಗಿರಣಿಯಲ್ಲಿ ಅಪಘಾತದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಅವರು ತಮ್ಮ ಪಾದಗಳನ್ನು ಬಳಸಿ ಬೌಲ್ ಮಾಡುತ್ತಾರೆ. ಬ್ಯಾಟ್ ಅನ್ನು ತಮ್ಮ ಭುಜ ಮತ್ತು ಕತ್ತಿನ ನಡುವೆ ಹಿಡಿದುಕೊಂಡು ಬಾಲ್​ ಹೊಡೆಯುತ್ತಾರೆ.
ಸುದ್ದಿ ಸಂಸ್ಥೆ ಜತೆ ಮಾತನಾಡಿದ ಲೋನ್​ ಅವರು, “ಅಪಘಾತದ ನಂತರ, ನಾನು ಭರವಸೆ ಕಳೆದುಕೊಳ್ಳಲಿಲ್ಲ. ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಎಲ್ಲವನ್ನೂ ನಾನೇ ಮಾಡಬಲ್ಲೆ. ಯಾರ ಮೇಲೂ ಅವಲಂಬಿತವಾಗಿಲ್ಲ. ಸರ್ಕಾರವೂ ಸಹ ನನಗೆ ಬೆಂಬಲ ನೀಡಲಿಲ್ಲ, ಆದರೆ, ನನ್ನ ಕುಟುಂಬವು ಯಾವಾಗಲೂ ನನ್ನೊಂದಿಗೆ ಇತ್ತು” ಎಂದು ಹೇಳಿದ್ದಾರೆ.
ಎರಡೂ ಕೈಗಳಿಲ್ಲದಿದ್ದರೂ ತಾವು ಆಡುವುದನ್ನು ನೋಡಿ ಎಲ್ಲರೂ ಬೆಚ್ಚಿಬಿದಿದ್ದರು ಎಂದೂ ಅವರು ಹೇಳಿದ್ದಾರೆ.
“ನಾನು 2013 ರಲ್ಲಿ ದೆಹಲಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಆಡಿದೆ. 2018 ರಲ್ಲಿ ನಾನು ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದೇನೆ. ನಂತರ ನಾನು ನೇಪಾಳ, ಶಾರ್ಜಾ ಮತ್ತು ದುಬೈನಲ್ಲಿ ಆಡಿದ್ದೇನೆ. ನಾನು ನನ್ನ ಕಾಲಿನಿಂದ ಬೌಲಿಂಗ್ ಮತ್ತು ಭುಜ ಮತ್ತು ಕುತ್ತಿಗೆಯಿಂದ ಬ್ಯಾಟಿಂಗ್ ಮಾಡುವುದನ್ನು ನೋಡಿ ಎಲ್ಲರೂ ಅಚ್ಚರಿಗೊಳಗಾಗಿದ್ದರು. ನನಗೆ ಕ್ರಿಕೆಟ್ ಆಡಲು ಶಕ್ತಿ ನೀಡಿದ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಲೋನ್ ಹೇಳಿದ್ದಾರೆ.
“ಪಿಕಲ್ ಎಂಟರ್ಟೈನ್ಮೆಂಟ್​ನವರು ನನ್ನ ಕುರಿತು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ನಾನು ವಿಕ್ಕಿ ಕೌಶಲ್ ಕೂಡ ಇದ್ದ ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ಜೀವನ ಪ್ರಯಾಣವನ್ನು ನೋಡಿ ಅವರು ದಿಗ್ಭ್ರಮೆಗೊಂಡರು. ಅವರು ನನ್ನ ಬಗ್ಗೆ ಚಲನಚಿತ್ರ ಮಾಡುವುದಾಗಿ ಹೇಳಿದರು” ಎಂದು ಲೋನ್​ ವಿವರಿಸಿದರು.
“ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ನಮ್ಮ ನೆಚ್ಚಿನ ಆಟಗಾರರು, ದೇವರು ಬಯಸಿದರೆ, ನಾವು ಶೀಘ್ರದಲ್ಲೇ ಅವರನ್ನು ಭೇಟಿ ಮಾಡುತ್ತೇವೆ” ಎಂದು ಅವರು ಅಭಿಲಾಷೆ ವ್ಯಕ್ತಪಡಿಸಿದರು.

ದೆಹಲಿಯನ್ನು ಹಿಂದಿಕ್ಕಿ ಮುಂಚೂಣಿಯಲ್ಲಿ ರಾಜ್ಯದ ರಾಜಧಾನಿ: ಬೆಂಗಳೂರು ಈಗ ಕಾರುಗಳ ನಗರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
