ನವದೆಹಲಿ:ಸರ್ಕಾರದ ಎಲ್ಲ ನೀತಿಗಳು ಯುವಜನ ಕೇಂದ್ರಿತವಾಗಿವೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರು ‘ವೋಕಲ್ ಫಾರ್ ಲೋಕಲ್’ ನೀತಿಗೆ ಬೆಂಬಲ ನೀಡಬೇಕು. ಈ ನಿಟ್ಟಿನಲ್ಲಿ ಮಕ್ಕಳು ಮನೆಗಳಲ್ಲಿರುವ ವಿದೇಶಿ ಮೂಲದ ವಸ್ತುಗಳನ್ನು ಪಟ್ಟಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಬಾಲ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವ ಮಕ್ಕಳೊಂದಿಗೆ ಸೋಮವಾರ ವರ್ಚುವಲ್ ಸಂವಾದ ನಡೆಸಿದ ಮೋದಿ, ಪುರಸ್ಕೃತರಿಗೆ ಡಿಜಿಟಲ್ ಸರ್ಟಿಫಿಕೆಟ್​ಗಳನ್ನು ಪ್ರದಾನ ಮಾಡಿದರು. ಇದಕ್ಕಾಗಿ ಬ್ಲಾಕ್​ಚೈನ್ ತಂತ್ರಜ್ಞಾನವನ್ನು ಬಳಸಲಾಗಿತ್ತು. ಕರ್ತವ್ಯ ಮತ್ತು ದೇಶ ಮೊದಲು ಎಂಬುದು ನೇತಾಜಿಯಿಂದ ನಾವು ಕಲಿಯುವ ದೊಡ್ಡ ಸ್ಪೂರ್ತಿ ಪಾಠ. ದೇಶಕ್ಕಾಗಿನ ಕರ್ತವ್ಯದಲ್ಲಿ ನಿಮ್ಮ ಹಾದಿಯಲ್ಲಿ ಮುನ್ನಡೆಯಬೇಕು ಎಂದ ಅವರು, ಬಾಲ ಪುರಸ್ಕಾರ ವಿಜೇತ ಮಕ್ಕಳು ಇಡೀ ದೇಶಕ್ಕೇ ಸ್ಪೂರ್ತಿ. ಜನವರಿ 3ರಿಂದ ಇದುವರೆಗೆ 4 ಕೋಟಿಗೂ ಅಧಿಕ ಮಕ್ಕಳು ಕರೊನಾ ವ್ಯಾಕ್ಸಿನ್ ಪಡೆದಿದ್ದಾರೆ ಎಂದರು.
29 ಮಕ್ಕಳು:ಆವಿಷ್ಕಾರ, ರ್ತಾಕ ಸಾಧನೆ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಾಮಾಜಿಕ ಸೇವೆ ಹಾಗೂ ಶೌರ್ಯ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ 15-18 ವಯೋಮಿತಿಯ ಮಕ್ಕಳಿಗೆ ಬಾಲ ಪುರಸ್ಕಾರ ನೀಡಲಾಗುತ್ತದೆ. ಈ ವರ್ಷ 29 ಮಕ್ಕಳು ಈ ಗೌರವಕ್ಕೆ ಭಾಜನರಾದರು.
ಭಾರತದ ಯುವಜನರು ನವೀನ ಆವಿಷ್ಕಾರಗಳನ್ನು ಮಾಡಿ ದೇಶವನ್ನು ಮುನ್ನಡೆಸುತ್ತಿರುವುದನ್ನು, ಜಾಗತಿಕ ಸ್ಟಾರ್ಟಪ್ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದನ್ನು ನೋಡಿ ಹೆಮ್ಮೆಯಾಗುತ್ತಿದೆ
|ನರೇಂದ್ರ ಮೋದಿಪ್ರಧಾನಿ
ಒಡೆದ ಗಾಜಿನ ಮೇಲೆ ನೃತ್ಯ!:13 ವರ್ಷಗಳಿಂದ ಭರತನಾಟ್ಯ ಪಟು ಆಗಿರುವ ರೆಮೋನಾ, ಒಡೆದ ಗಾಜಿನ ಮೇಲೆ ನೃತ್ಯ, ಮಡಕೆ ಮೇಲೆ ಸಮತೋಲನದ ನೃತ್ಯ, ಕೋಲಿನ ಮೇಲೆ ನೃತ್ಯ ಇತ್ಯಾದಿ ಆವಿಷ್ಕಾರಿ ನೃತ್ಯಗಳನ್ನೂ ಮಾಡಿದವರು. 16 ರಾಜ್ಯಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ 20 ಪ್ರಶಸ್ತಿ ಪಡೆದುಕೊಂಡಿದ್ದಾರೆ. ಡಾ.ಶ್ರೀವಿದ್ಯಾ ಮುರಳೀಧರ್ ಅವರ ಶಿಷ್ಯೆ. ಒಡಿಸ್ಸಿ, ಮೋಹಿನಿಯಾಟ್ಟಂ ಅಲ್ಲದೆ ಯಕ್ಷಗಾನದಲ್ಲೂ ತರಬೇತಿ ಪಡೆಯುತ್ತಿದ್ದಾರೆ. ಗೌತಮ ಭಟ್ಟಾಚಾರ್ಯರಿಂದ ಪಾಶ್ಚಿಮಾತ್ಯ ನೃತ್ಯವನ್ನೂ ಅಭ್ಯಸಿಸುತ್ತಿದ್ದಾರೆ.
ಮಂಗಳೂರಿನ ಪದುವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ರೆಮೋನಾ ಇವೆಟ್ ಪಿರೇರಾಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 1 ಲಕ್ಷ ರೂ. ನಗದು ಒಳಗೊಂಡಿದೆ. ವಿಡಿಯೋ ಕಾನ್ಪರೆನ್ಸ್​ನಲ್ಲಿ ಪ್ರಧಾನಿ ಅವರೊಂದಿಗೆ ರೆಮೋನಾ ಮಾತುಕತೆ ನಡೆಸಿದರು. ಅವರ ತಾಯಿ ಗ್ಲಾಡಿಸ್ ಪಿರೇರಾ ಜತೆಗಿದ್ದರು. ‘ಮೂರನೇ ವರ್ಷದಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದೀರಿ, ಹೇಗೆ ಅಭ್ಯಾಸ ಮಾಡಿದ್ದೀರಿ? ನೀವೇ ಸ್ವಯಂ ಆಗಿ ಅಭ್ಯಾಸ ಮಾಡುತ್ತಿದ್ದಿರಾ ಅಥವಾ ಹೆತ್ತವರು ಕಾಳಜಿ ವಹಿಸಿದ್ದರೇ’ ಎಂಬ ಪ್ರಧಾನಿ ಪ್ರಶ್ನಿಸಿದರು. ‘ನನ್ನ ತಾಯಿಯವರಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಆಸಕ್ತಿ. ಹಾಗಾಗಿ ನಾನು ಇದರಲ್ಲಿ ಆಸಕ್ತಿ ಬೆಳೆಸಿಕೊಂಡೆ’ ಎಂದು ರೆಮೋನಾ ಉತ್ತರಿಸಿದರು. ‘ಚಿಕ್ಕಂದಿನಿಂದಲೇ ಏನಾದರೂ ಕಠಿಣ ಪರಿಸ್ಥಿತಿ ಎದುರಾಗಿತ್ತೇ’ ಎಂಬ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ರೆಮೋನಾ, ‘ಚಿಕ್ಕಂದಿನಲ್ಲೇ ತಂದೆ ಕಳೆದುಕೊಂಡೆ, ಹಾಗಾಗಿ ತಾಯಿ ಬಹಳ ಕಷ್ಟದಲ್ಲೇ ನನ್ನನ್ನು ಓದಿಸಿದರು, ನೃತ್ಯ ತರಬೇತಿಗೆ ಸೇರಿಸಿದರು’ ಎಂದರು.
ಶಿವರಾಜಕುಮಾರ್​ಗೆ ‘ಬುದ್ಧಿವಂತ’ ನಿರ್ದೇಶಕನ ನಿರ್ದೇಶನ; ಬರಲಿದೆ ಪ್ಯಾನ್ ಇಂಡಿಯಾ ಸಿನಿಮಾ…

ನಾಯಕರಾಗಿ ಚಿತ್ರರಂಗಕ್ಕೆ ಬಂದ ಅಶ್ವತ್ಥ್​ ಕೆಲವೇ ವರ್ಷಗಳಲ್ಲಿ ಪೋಷಕ ನಟ ಆಗಿದ್ಯಾಕೆ? ಏನದು ರಹಸ್ಯ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 9 =
Remember me
