ನವದೆಹಲಿ:ನಿಮ್ಮ ಕಾರಿನ ಡೀಸೆಲ್​ ಅಥವಾ ಪೆಟ್ರೋಲ್​ ವೆಚ್ಚವನ್ನು ಕಡಿಮೆ ಮಾಡಲು ಗೂಗಲ್​ ಮ್ಯಾಪ್​ ಹೊಸ ಫೀಚರ್​ ಒಂದನ್ನು ಪರಿಚಯಿಸಿದೆ. ಈ ಹೊಸ ಫೀಚರ್​ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಹೈದರಾಬಾದ್​ ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಒಂದು ಲೀಟರ್​ ಪೆಟ್ರೋಲ್​ ಬೆಲೆ 100 ರೂ. ಮತ್ತು ಡೀಸೆಲ್​ ಬೆಲೆ 95 ರೂ. ದಾಟಿದೆ. ಇನ್ನು ನಮ್ಮ ವಾಹನಗಳ ಸ್ಥಿತಿಯನ್ನು ನೋಡಿದರೆ ಮೈಲೇಜ್ ತುಂಬಾ ಕಡಿಮೆ ಇವೆ. ಇದರಿಂದಾಗಿ ನಮ್ಮ ಜೇಬಿಗೆ ನಿರಂತರವಾಗಿ ಕತ್ತರಿ ಬೀಳುತ್ತಲೇ ಇದೆ. ಹಾಗಾಗಿ ನೀವು ಪೆಟ್ರೋಲ್​ ವೆಚ್ಚವನ್ನು ಕಡಿಮೆ ಮಾಡಲು ಬಯಸುವುದಾದರೆ ಗೂಗಲ್​ ಮ್ಯಾಪ್​ನ ಈ ಹೊಸ ಫೀಚರ್​ ನಿಮಗೆ ಸಹಾಯ ಮಾಡಲಿದೆ.
ಟೆಕ್​ ಲೋಕದ ದೈತ್ಯ ಕಂಪನಿ ಗೂಗಲ್​ ತನ್ನ ಗೂಗಲ್​ ಮ್ಯಾಪ್​ನಲ್ಲಿ ಫ್ಯುಯೆಲ್ ಎಫಿಸಿಯಂಟ್ ಡ್ರೈವ್​ (ಇಂಧನ​​ ಸಮರ್ಥ ಚಾಲನೆ) ಹೆಸರಿನ ಹೊಸ ಫೀಚರ್​ ತಂದಿದೆ. ಆದರೆ, ಪ್ರಸ್ತುತ ಇದು ಕೆಲವೇ ದೇಶಗಳಲ್ಲಿ ಮಾತ್ರ ಬಳಕೆಯಲ್ಲಿದೆ. ಭಾರತದಲ್ಲಿ ಶೀಘ್ರದಲ್ಲೇ ಈ ಆ್ಯಪ್​ ದೊರೆಯಲಿದೆ.
ನೀವು ಯಾವುದಾದರೊಂದು ಪ್ರವಾಸ ಕೈಗೊಂಡರೆ ಗೂಗಲ್​ ಮ್ಯಾಪ್​, ಫ್ಯುಯೆಲ್ ಎಫಿಸಿಯಂಟ್ ಮಾರ್ಗವನ್ನು ನಿಮಗೆ ಸೂಚಿಸಲಿದೆ. ಈಗಾಗಲೇ ಈ ಫೀಚರ್​ ಕೆನಡಾ, ಯುಕೆ ಮತ್ತು ಯುರೋಪಿಯನ್​​ ದೇಶಗಳಲ್ಲಿ ಚಾಲ್ತಿಯಲ್ಲಿದೆ. ಈ ಫೀಚರ್​ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಿಗೂ ಕಾರ್ಯನಿರ್ವಹಿಸುತ್ತದೆ ಎಂಬುದು ಗಮನಾರ್ಹವಾಗಿದೆ.
ಈ ಫೀಚರ್​ ಗೂಗಲ್​ ಮ್ಯಾಪ್ಸ್​ ಸೆಟ್ಟಿಂಗ್​ನಲ್ಲಿ ದೊರೆಯಲಿದೆ. ನಾವು ಚಾಲನೆ ಮಾಡುತ್ತಿರುವ ಕಾರಿನ ಎಂಜಿನ್ ವಿವರಗಳನ್ನು ಆಯ್ಕೆ ಮಾಡಬೇಕು. ನಂತರ, ಸ್ವಯಂಚಾಲಿತವಾಗಿ ಅದು ಅತ್ಯುತ್ತಮ ಫ್ಯುಯೆಲ್ ಎಫಿಸಿಯಂಟ್ ಮಾರ್ಗವನ್ನು ಕಂಡುಕೊಳ್ಳುತ್ತದೆ ಮತ್ತು ನಮಗೆ ಸೂಚನೆ ನೀಡುತ್ತದೆ. ಈ ಫೀಚರ್​ ಅನ್ನು ಆನ್ ಮಾಡಿದರೆ ಗೂಗಲ್ ಮ್ಯಾಪ್​ ಕೇವಲ ಇಂಧನ ದಕ್ಷತೆಯ ಮೇಲೆ ಮಾತ್ರ ಗಮನಹರಿಸುತ್ತದೆ. ಆದರೆ, ಇದು ನೈಜ ಸಮಯದ ಸಂಚಾರವನ್ನು ಹೊರತುಪಡಿಸಿ ಇತರ ಅಂಶಗಳನ್ನು ಪರಿಗಣಿಸುವುದಿಲ್ಲ ಎಂದು ಗೂಗಲ್​ ಹೇಳಿದೆ.
ಆ್ಯಕ್ಟಿವೇಟ್​ ಮಾಡುವುದು ಹೀಗೆ….* ಗೂಗಲ್​ ಮ್ಯಾಪ್​ ಓಪನ್​ ಮಾಡಿ* ಗೂಗಲ್​ ಮ್ಯಾಪ್​ನಲ್ಲಿರುವ ನಿಮ್ಮ ಪ್ರೊಫೈಲ್​ ಐಕಾನ್​ ಮೇಲೆ ಕ್ಲಿಕ್​ ಮಾಡಿ* ನ್ಯಾವಿಗೇಶನ್​ ಸೆಟ್ಟಿಂಗ್ಸ್​ಗೆ ಹೋಗಿ. ಅಲ್ಲಿ ನೀವು ರೂಟ್​ ಆಪ್ಷನ್ಸ್​ ನೋಡುತ್ತೀರಿ* ಆಪ್ಷನ್​ಗಳಲ್ಲಿ ಫ್ಯುಯೆಲ್ ಎಫಿಸಿಯಂಟ್ ರೂಟ್​ ಮೇಲೆ ಕ್ಲಿಕ್​ ಮಾಡಿ. ನಂತರ ಪರಿಸರ ಸ್ನೇಹಿ ರೂಟಿಂಗ್​ ಮೇಲೆ ಕ್ಲಿಕ್​ ಮಾಡಿ.* ಇದಾದ ಬಳಿಕ ವಾಹನದ ಇಂಜಿನ್​ ಆಯ್ಕೆ ಮಾಡಿದರೆ ಆ್ಯಪ್​ ಆ್ಯಕ್ಟಿವೇಟ್​ ಆದಂತೆ!
ನೀವು ನಿಮ್ಮ ವಾಹನದ ಎಂಜಿನ್ ವಿವರಗಳನ್ನು ಸರಿಯಾದ ತಿಳಿಸದಿದ್ದರೆ, ಗೂಗಲ್​ ಮ್ಯಾಪ್​ ಸ್ವಯಂಚಾಲಿತವಾಗಿ ಪೆಟ್ರೋಲ್ ಆಯ್ಕೆಯನ್ನು ಆರಿಸಿಕೊಳ್ಳುತ್ತದೆ. ತಮಗೆ ಲಭ್ಯವಿರುವ ಡೇಟಾವನ್ನು ಬಳಸಿಕೊಂಡು ಇಂಧನ ದಕ್ಷತೆಯನ್ನು ಲೆಕ್ಕಹಾಕಿ ಉತ್ತಮ ಮಾರ್ಗವನ್ನು ನೀಡುತ್ತದೆ ಎಂದು ಗೂಗಲ್ ಹೇಳುತ್ತದೆ. ಮತ್ತು ಇದು ಭಾರತೀಯ ರಸ್ತೆಗಳಲ್ಲಿ ಹೇಗೆ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.(ಏಜೆನ್ಸೀಸ್​)
ಶಿಕ್ಷಕಿ ಜತೆ ಸರಸದಲ್ಲಿ ತೊಡಗಿದ್ದ ಪುತ್ರನನ್ನು ಹಿಡಿದುಕೊಟ್ಟ Life 360 ಆ್ಯಪ್​ ಹಿಂದಿದೆ ವಿವಾದದ ಕರಿನೆರಳು!

ಮಹಿಳೆಯ ಕಿಡ್ನಿಯಲ್ಲಿತ್ತು 300ಕ್ಕೂ ಅಧಿಕ ಕಲ್ಲುಗಳು! ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − seven =
Remember me
