ಸೂರತ್​:ಸಚಿವರೊಬ್ಬರ ಮಗ ಕರೊನಾ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದ. ಆತ ತನ್ನ ಸ್ನೇಹಿತರೊಂದಿಗೆ ವಾಹನದಲ್ಲಿ ತೆರಳುತ್ತಿದ್ದ. ಆದರೆ ಮಾಸ್ಕ್​ ಧರಿಸಿರಲಿಲ್ಲ. ಅದನ್ನು ಮಹಿಳಾ ಪೊಲೀಸ್​ ಪೇದೆಯೋರ್ವರು ಪ್ರಶ್ನಿಸಿದ್ದರು. ಆದರೆ ಹಾಗೇ ಪ್ರಶ್ನೆ ಮಾಡಿದ್ದೇ ತಪ್ಪಾಗಿ ಹೋಯ್ತು. ಆ ಮಹಿಳಾ ಪೇದೆ ಕೆಲಸವನ್ನೇ ಬಿಡಬೇಕಾದ ಪರಿಸ್ಥಿತಿ ಎದುರಾಯ್ತು…
ಈ ಘಟನೆ ನಡೆದದ್ದು ಗುಜರಾತ್​ನ ಸೂರತ್​​ನಲ್ಲಿ. ಗುಜರಾತ್​ನ ಆರೋಗ್ಯ ಸಚಿವರಾದ ಕುಮಾರ್​ ಕನನಿ ಅವರ ಮಗ ಪ್ರಕಾಶ್ ಮತ್ತು ಮಹಿಳಾ ಪೇದೆ ಸುನಿತಾ ಯಾದವ್​ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್​ ಕೂಡ ವೈರಲ್​ ಆಗಿದೆ. ರಾತ್ರಿ 10.30 ಗಂಟೆಗೆ ಮಾಸ್ಕ್​ ಧರಿಸದೆ ವಾಹನದಲ್ಲಿ ಬಂದ ಪ್ರಕಾಶ್​ ಅವರನ್ನು ಸುನಿತಾ ಪ್ರಶ್ನೆ ಮಾಡಿದಾಗ, ತಿರುಗಿ ಆಕೆಗೆ ಬೆದರಿಕೆಯೊಡ್ಡಿದ್ದು, ನಾನ್ಯಾರು ಗೊತ್ತಾ ಎಂದು ಧಮ್ಕಿ ಹಾಕಿದ್ದು ಆಡಿಯೋದಿಂದ ಬಹಿರಂಗವಾಗಿದೆ.
ಪ್ರಕಾಶ್​ ಬೆದರಿಕೆಯಿಂದ ಏನೂ ಮಾಡಲು ತೋಚದ ಪೇದೆ ಸುನೀತಾ ಯಾದವ್​, ಅಲ್ಲಿಯೇ ಇದ್ದ ತನ್ನ ಮೇಲಧಿಕಾರಿಯನ್ನು ಕರೆದು ವಿಷಯ ಹೇಳಿದ್ದಾರೆ. ಆದರೆ ಆ ಪೊಲೀಸ್​ ಅಧಿಕಾರಿ ಕೂಡ ಸುನಿತಾ ಅವರ ವಿರುದ್ಧವೇ ರೇಗಿ, ಕಠಿಣವಾಗಿ ಮಾತನಾಡಿದ್ದಾರೆ. ಇಲ್ಲಿಂದ ಹೊರಡಿ, ನೀವು ರಿಸೈನ್ ಮಾಡಿ ಎಂದು ಹೇಳಿದ್ದಾರೆ. ಇದರಿಂದಾಗಿ ಮಹಿಳಾ ಪೇದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು.ಇದನ್ನೂ ಓದಿ:ಬೆಂಗಳೂರು ಒಂದು ವಾರ ಲಾಕ್‌ಡೌನ್ ಖಚಿತ; ಮಂಗಳವಾರದಿಂದ ಜಾರಿ
ಆಡಿಯೋ ಕ್ಲಿಪ್​ ನನ್ನ ಗಮನಕ್ಕೂ ಬಂದಿದೆ. ವಿಚಾರಣೆಗೆ ಆದೇಶಿಸಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸೂರತ್​ ಪೊಲೀಸ್ ಕಮಿಷನರ್​ ತಿಳಿಸಿದ್ದಾರೆ.
ರಾತ್ರಿ 10.30 ರ ಸಮಯದಲ್ಲಿ ಮಾಸ್ಕ್​ ಧರಿಸದೆ ಐವರು ಒಂದೇ ಕಾರಿನಲ್ಲಿ ಬರುತ್ತಿದ್ದರು. ಆಗ ಸುನಿತಾ ಯಾದವ್​ ಕಾರನ್ನು ನಿಲ್ಲಿಸಿ, ಮಾಸ್ಕ್​ ಧರಿಸದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಪ್ರಕಾಶ್​, ನಾವು ಯಾರೆಂದುಕೊಂಡಿದ್ದೀರಿ..ನಮ್ಮ ಅಧಿಕಾರ ಉಪಯೋಗಿಸಿ ನೀವು ಇನ್ನೂ 365 ದಿನ ಇಲ್ಲಿಯೇ ನಿಂತಿರುವಂತೆ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸುನಿತಾ ಅವರೂ ಕೂಡ ಸ್ವಲ್ಪ ಧ್ವನಿ ಎತ್ತರಿಸಿ, ಹಾಗೆಲ್ಲ ನಿಮ್ಮ ಬೆದರಿಕೆಗೆ ಹೆದರಲು ನಾನು ನಿಮ್ಮ ಗುಲಾಮಳಲ್ಲ ಎಂದು ಕೂಗಿದ್ದಾರೆ. ಅಷ್ಟಾದ ಬಳಿಕ ತನ್ನ ಮೇಲಧಿಕಾರಿಗೆ ವಿಷಯ ತಿಳಿಸಿದ್ದಾರೆ. ಆದರೆ ಅವರು ಸುನಿತಾ ಪರ ನಿಲ್ಲದೆ, ಅವಳಿಗೇ ರಾಜೀನಾಮೆ ಕೊಡುವಂತೆ ಹೇಳಿದ್ದಾರೆ. ಇದೆಲ್ಲವೂ ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ತನಿಖೆ ನಡೆಸುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ.ಇದನ್ನೂ ಓದಿ:‘ನನಗೆ ಕರೊನಾ ಲಕ್ಷಣಗಳಿಲ್ಲ…ಕ್ಷೇಮವಾಗಿದ್ದೇನೆ…’: ಸಚಿವ ಸಿ.ಟಿ.ರವಿ ಟ್ವೀಟ್​
ಇನ್ನು ಈ ಬಗ್ಗೆ ಕುಮಾರ್ ಕನನಿ ಪ್ರತಿಕ್ರಿಯೆ ನೀಡಿದ್ದು, ತನ್ನ ಮಗ ಅವನ ಸ್ನೇಹಿತನೊಟ್ಟಿಗೆ ಸಿವಿಲ್​ ಆಸ್ಪತ್ರೆಗೆ ತೆರಳುತ್ತಿದ್ದ. ಅಲ್ಲಿ ಅವನ ಮಾವನಿಗೆ ಕರೊನಾ ಟ್ರೀಟ್​ಮೆಂಟ್​ ನೀಡಲಾಗುತ್ತಿದೆ. ಅವರ ಸ್ಥಿತಿ ಗಂಭೀರವಾಗಿತ್ತು. ಹಾಗಾಗಿ ಅರ್ಜೆಂಟ್​ನಲ್ಲಿ ತೆರಳುತ್ತಿದ್ದ ಎಂದು ತಿಳಿಸಿದ್ದಾರೆ.
ಅವನು ನನ್ನದೇ ವಾಹನದಲ್ಲಿ ಹೋಗುತ್ತಿದ್ದ. ಕಾರಿನ ಮೇಲೆ ಎಂಎಲ್​ಎ ಎಂದು ಬರೆದುಕೊಂಡಿದ್ದರೂ ಪೊಲೀಸ್​ ಪೇದೆ ಯಾಕೆ ತಡೆಯಬೇಕಿತ್ತು. ನನ್ನ ಮಗ ಏನು ಹೇಳುತ್ತಿದ್ದಾನೆ ಎಂಬುದನ್ನು ಕೇಳುವ ತಾಳ್ಮೆ ಅವಳಿಗೆ ಇರಬೇಕಿತ್ತು ಎಂದಿದ್ದಾರೆ. (ಏಜೆನ್ಸೀಸ್​)
ಕ್ರೈಂ ಮತ್ತು ಭ್ರಷ್ಟಾಚಾರ ಕೊನೆಗಾಣಿಸಲು ಯಾವುದೇ ಕ್ರಮಕ್ಕೂ ಹಿಂಜರಿಯುವುದಿಲ್ಲ: ಸಿಎಂ ಯೋಗಿ ಖಡಕ್​ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twelve =
Remember me
