ತಿರುವನಂತಪುರಂ:ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಚಿತ್ರಮಂದಿರಗಳನ್ನು ಪ್ರವೇಶಿಸಿ, ಅರೆಬೆತ್ತಲಾಗಿ ಪ್ರೇಕ್ಷಕರ ಪರ್ಸ್ ಕದಿಯುತ್ತಿದ್ದ ಖತರ್ನಾಕ್​ ಖದೀಮನ್ನು ಕೇರಳ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ. ​
ಬಂಧಿತ ಖದೀಮನನ್ನು ವಿಪಿನ್​ (34) ಎಂದು ಗುರುತಿಸಲಾಗಿದೆ. ಈತ ವಯನಾಡು ಮೂಲದವ. ಕಜಕುಟ್ಟಂ ನಗರದ ಚಿತ್ರಮಂದಿರದಲ್ಲಿ ತನ್ನ ಕೈಚಳಕ ತೋರಿಸುವಾಗ ಸಿಕ್ಕಿಬಿದ್ದಿದ್ದಾನೆ. ಅಟ್ಟಿಂಗಲ್​ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕಜಕುಟ್ಟಂನ ಹರಿಶ್ರೀ ಚಿತ್ರಮಂದಿರದಲ್ಲಿ ಅರೆಬೆತ್ತಲೆಯಾಗಿ ಪರ್ಸ್​ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಥಿಯೇಟರ್ ಉದ್ಯೋಗಿಗಳು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಕಳೆದ ದಿನ ಅಟ್ಟಿಂಗಲ್ ಗಂಗಾ ಥಿಯೇಟರ್‌ನಲ್ಲಿ ಸೆಕೆಂಡ್ ಶೋ ವೀಕ್ಷಿಸಲು ಬಂದವರಿಂದ ವಾಲೆಟ್‌ಗಳು ಕಾಣೆಯಾಗಿರುವ ಬಗ್ಗೆ ಅಟ್ಟಿಂಗಲ್ ಪೊಲೀಸರಿಗೆ ದೂರು ಬಂದಿತ್ತು. ಈ ದೂರಿನ ಮೇರೆಗೆ ಹತ್ತಿರದ ಎಲ್ಲ ಥಿಯೇಟರ್‌ಗಳಲ್ಲಿ ಸಮಗ್ರ ಹುಡುಕಾಟ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದರು. ಕಜಕುಟ್ಟಂನಲ್ಲಿ ಇದೇ ಶೈಲಿಯಲ್ಲಿ ಕಳ್ಳತನವನ್ನು ಮಾಡುವಾಗ ಅಲ್ಲಿನ ನೌಕರರು ರೆಡ್‌ಹ್ಯಾಂಡ್ ಆಗಿ ವಿಪಿನ್​ನನ್ನು ಹಿಡಿದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಹೋಗಿ ಆತನನ್ನು ಬಂಧಿಸಿದ್ದಾರೆ. ವಿಪಿನ್, ಅಪರಾಧ ಹಿನ್ನೆಲೆ ಹೊಂದಿದ್ದು, ಆತ ಓರ್ವ ರೌಡಿಶೀಟರ್ ಆಗಿದ್ದು, ತಂಪನೂರು ಪೊಲೀಸರ ವಶದಲ್ಲಿದ್ದ ಎಂದು ತಿಳಿದು ಬಂದಿದೆ.
ಕಳ್ಳತನ ಮಾಡುವಾಗ ವಿಪಿನ್ ವಿಚಿತ್ರ ಮಾರ್ಗಗಳನ್ನು ಅನುಸರಿಸುತ್ತಾನೆ. ಸಿನಿಮಾ ಟಿಕೆಟ್ ಖರೀದಿಸಿದ ನಂತರ ವಿಪಿನ್​, ಥಿಯೇಟರ್‌ನಲ್ಲಿ ಏಕಾಂತ ಪ್ರದೇಶಕ್ಕೆ ತೆರಳುತ್ತಾನೆ. ಅಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆಬೆತ್ತಲೆಯಾಗುತ್ತಾನೆ. ನಂತರ, ಪ್ರೇಕ್ಷಕರು ಇರುವ ಇತರರ ಆಸನಗಳ ಹಿಂದೆ ತೆವಳುತ್ತಾ ಹೋಗಿ ಗೊತ್ತಾಗದಂತೆ ಚಾಣಾಕ್ಷತನದಿಂದ ಪರ್ಸ್​ಗಳನ್ನು ಕದಿಯುತ್ತಿದ್ದ. ಕಳ್ಳತನ ಮಾಡಿದ ಬಳಿಕ ಆತ ಮತ್ತೆ ತನ್ನ ಸೀಟಿಗೆ ಮರಳುತ್ತಿದ್ದ. ಸಿನಿಮಾ ಮುಗಿದ ನಂತರ ಥಿಯೇಟರ್​ನಿಂದ ಬೇಗ ಪರಾರಿಯಾಗುತ್ತಿದ್ದ. ಸಿನಿಮಾದಲ್ಲಿ ಮಗ್ನರಾಗಿದ್ದ ಜನರು ಥಿಯೇಟರ್‌ನಿಂದ ಹೊರಬಂದ ನಂತರವೇ ತಮ್ಮ ಪರ್ಸ್​ ಕಳೆದುಹೋಗಿರುವುದು ತಿಳಿಯುತ್ತಿತ್ತು.
ಕೆಲ ದಿನಗಳ ಹಿಂದೆ ಅಟ್ಟಿಂಗಲ್ ಗಂಗಾ ಥಿಯೇಟರ್‌ನಲ್ಲಿ ಯುವತಿಯರು ತಮ್ಮ ಪರ್ಸ್ ಕಳೆದುಕೊಂಡಿದ್ದರು. ಅವರಿಂದ ಮಾಹಿತಿ ಪಡೆದ ನೌಕರರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ.(ಏಜೆನ್ಸೀಸ್​)
ಪ್ರಿಯಾಂಕಾ ಚೋಪ್ರಾ ಧರಿಸಿರುವ ವಾಚ್​​ ಎಷ್ಟು ಕೋಟಿ ಬೆಲೆಬಾಳುತ್ತದೆ ಗೊತ್ತಾ?

ಕಾಂಗ್ರೆಸ್​​ ಶಾಸಕನ ಕೊರಳಲ್ಲಿ ಹುಲಿ ಉಗುರು ಮಾದರಿ ಪೆಂಡೆಂಟ್; ಬಳ್ಳಾರಿ ಶಾಸಕ ಭರತ್ ರೆಡ್ಡಿ ಹೇಳಿದ್ದೇನು?

ಚಂದ್ರಗ್ರಹಣಕ್ಕೆ ಸಂಬಂಧಿಸಿದ ವಿಶೇಷ ಸಂಗತಿ; ಗ್ರಹಣದ ಸಮಯದಲ್ಲಿ ಪ್ರಯಾಣ ಮಾಡಬಹುದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − nine =
Remember me
