ಪುಣೆ:ಪ್ರಸ್ತುತ ಭಾರತವು ವಿಶ್ವದ ಮುಂಚೂಣಿ ದೇಶಗಳೊಂದಿಗೆ ಸ್ಪರ್ಧಿಸುತ್ತದೆ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಪವಾಡಗಳನ್ನು ಸೃಷ್ಟಿಸುತ್ತದೆ. ಚಂದ್ರಯಾನ 3 ಉಪಗ್ರಹ ಚಂದ್ರನ ನೆಲವನ್ನು ಸ್ಪರ್ಶಿಸಿದಾಗ ಎಲ್ಲ ದೇಶಗಳು ಭಾರತದತ್ತ ನೋಡಿದವು. ಇಷ್ಟೆಲ್ಲ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಇನ್ನೂ ಕೆಲವು ಭಾಗಗಳ ಜನರು ಜಾತಿ, ಧರ್ಮಗಳ ಆಧಾರದಲ್ಲಿ ಜಗಳವಾಡುತ್ತಿದ್ದಾರೆ. ದೇಶದಲ್ಲಿ ಎಲ್ಲೋ ಒಂದು ಕಡೆ ಮರ್ಯಾದೆ ಹತ್ಯೆಗಳು ನಡೆಯುತ್ತಿವೆ. ಜಾತಿ ಹೆಸರಲ್ಲಿ ವಿವಾಹಿತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆಗೈದ ಘಟನೆಗಳು ಸಾಕಷ್ಟು ನಡೆಯುತ್ತಿವೆ. ಇತ್ತೀಚೆಗಷ್ಟೇ ಇಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದಲ್ಲಿ ಮತ್ತೊಂದು ಮರ್ಯಾದೆ ಹತ್ಯೆ ನಡೆದಿದೆ. ಛತ್ರಪತಿ ಶಂಭಾಜಿ ನಗರದಲ್ಲಿ ವಾಸವಾಗಿರುವ ವಿದ್ಯಾ, ಪತಿ ಅಮಿತ್ ಸಾಳುಂಕೆ ನಿಧನದಿಂದ ಕಣ್ಣೀರು ಹಾಕುತ್ತಿದ್ದಾಳೆ. ವಿದ್ಯಾ ಕೀರ್ತಿ ಶಾಹಿ ಮತ್ತು ಅಮಿತ್ ಸಾಳುಂಕೆ ಕೆಲವು ಸಮಯದಿಂದ ಲವ್​ ಮಾಡುತ್ತಿದ್ದರು. ಆದರೆ, ಅಮಿತ್​ನನ್ನು ಮದುವೆಯಾಗುವುದಕ್ಕೆ ವಿದ್ಯಾಳ ಪಾಲಕರು ಮತ್ತು ಸಂಬಂಧಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ವಿರೋಧವನ್ನು ಲೆಕ್ಕಿಸದೆ 2024ರ ಮೇ 2ರಂದು ಪುಣೆಗೆ ಹೋಗಿ ದೇವಸ್ಥಾನವೊಂದರಲ್ಲಿ ಇಬ್ಬರು ಮದುವೆಯಾದರು.
ಈ ಬಗ್ಗೆ ಮಾತನಾಡಿರುವ ವಿದ್ಯಾ, ಮದುವೆಯಾದ ಬಳಿಕ ಒಂದು ತಿಂಗಳು ಪುಣೆಯಲ್ಲಿದ್ದೆವು. ಈ ವೇಳೆ ನಮಗೆ ಹಲವು ಬೆದರಿಕೆ ಕರೆಗಳು ಬಂದಿದ್ದವು. ಹಳ್ಳಿಯಲ್ಲದ ಹಳ್ಳಿಯಲ್ಲಿ ನಮಗೇನಾದರೂ ಸಂಭವಿಸಿದರೆ ದಿಕ್ಕು ತೋಚದಂತಾಗುತ್ತದೆ ಎಂಬ ಭಯದಲ್ಲಿ ಶಂಭಾಜಿನಗರಕ್ಕೆ ಮರಳಿದೆವು. ಅಮಿತ್ ಸಾಳುಂಕೆ ಅವರ ಕುಟುಂಬಸ್ಥರು ನಮ್ಮ ಮದುವೆಗೆ ಒಪ್ಪಿಗೆ ಸೂಚಿಸಿದರು. ಬಳಿಕ ನಾವಿಬ್ಬರು ಮತ್ತೆ ಮದುವೆಯಾದೆವು ಎಂದಿದ್ದಾರೆ.
ಈ ತಿಂಗಳ ಜುಲೈ 14ರಂದು ಅಮಿತ್ ಮನೆಯಲ್ಲಿದ್ದಾಗ ಕೆಲವು ಹುಡುಗರು ವಿಡಿಯೋ ಗೇಮ್ ಆಡುವ ನೆಪದಲ್ಲಿ ಅಮಿತ್​ಗೆ ಕರೆ ಮಾಡಿದ್ದಾರೆ. ಅಮಿತ್ ಕೂಡ ಹೋದ. ನನ್ನ ತಂದೆ ಗೀತಾರಾಮ್​ ಕೀರ್ತಿ ಶಾಹಿ, ಹಿಂದಿನಿಂದ ಬಂದು ನನ್ನ ಗಂಡನಿಗೆ 8 ಬಾರಿ ಇರಿದು ಕೊಲೆ ಮಾಡಿದ್ದಾರೆ. ನನ್ನ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ನಾವು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು. 12 ದಿನಗಳ ಕಾಲ ಸಾವಿನೊಂದಿಗೆ ಹೋರಾಡಿದ. ಆದರೆ, ಚಿಕಿತ್ಸೆ ಫಲಿಸದೇ ಜುಲೈ 25 ರಂದು ನಿಧನರಾದರು. ಸಾಯುವ ಮುನ್ನ ನನ್ನ ಪತಿ ನನ್ನ ಕೈ ಹಿಡಿದು ತುಂಬಾ ಅಳುತ್ತಿದ್ದ. ಜುಲೈ 26 ರಂದು ಅಂತ್ಯಕ್ರಿಯೆ ನಡೆಸಲಾಯಿತು. ನನ್ನ ಗಂಡನನ್ನು ಕೊಂದವರ ವಿರುದ್ಧ ನಾನು ಪೊಲೀಸ್ ದೂರು ನೀಡಿದ್ದೇನೆ. ಛತ್ರಪತಿ ಶಂಭಾಜಿನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ವಿದ್ಯಾ ಹೇಳಿದರು.
ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳ ಪತ್ತೆಗೆ ಎರಡು ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತನಿಖಾಧಿಕಾರಿ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಹೊಸದಾಗಿ ಎಂಟ್ರಿ ಕೊಟ್ಟಿರೋ ಆ ಕ್ರಿಕೆಟಿಗನಿಂದಲೇ ಸಂಜು ಸ್ಥಾನಕ್ಕೆ ಕುತ್ತು! ಇರ್ಫಾನ್​ ಪಠಾಣ್​ ಸ್ಫೋಟಕ ಹೇಳಿಕೆ

ಆ ವಿಚಾರದಲ್ಲಿ ನನಗೆ ನಾಚಿಕೆಯಾಗುವುದಿಲ್ಲ: ಸೌತ್​ ಬ್ಯೂಟಿ ಶ್ರುತಿ ಹಾಸನ್​ ಓಪನ್​ ಟಾಕ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × two =
Remember me
