ಶ್ರೀಕಾಕುಲಂ:ಕರೊನಾ ವೈರಸ್ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಲವರ ಬದುಕನ್ನು ಕಿತ್ತುಕೊಂಡಿದ್ದೆ. ಬಡವರ ತುತ್ತನ್ನೂ ಕಸಿದುಕೊಂಡಿದೆ. ಆದರೇನಂತೆ… ನಿರ್ಗತಿಕರಿಗೆ ದಾನ ನೀಡುವ ಕೈಗಳಿನ್ನೂ ಬಲಶಾಲಿಯಾಗಿವೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ…ಲಾಕ್​ಡೌನ್ ಅವಧಿಯಲ್ಲಿ ಭಿಕ್ಷುಕರು ಹಸಿವಿನಿಂದ ಬಳಲುತ್ತಿರುವುದನ್ನು ನೋಡಿ, ನಿವೃತ್ತ ಎಂಜಿನಿಯರ್ ಒಬ್ಬರು ಕಳೆದ ನಾಲ್ಕು ತಿಂಗಳಿನಿಂದ ಸಿ.ವಿ.ನಾಗಜ್ಯೋತಿ ಚಾರಿಟೇಬಲ್ ಟ್ರಸ್ಟ್‌ ಅಡಿ ಅನ್ನದಾನ ಮಾಡುತ್ತಿದ್ದಾರೆ.ಶ್ರೀಕಾಕುಲಂನಲ್ಲಿರುವ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ಐಆರ್​​ಸಿಎಸ್) ಇದನ್ನು ನಿರ್ವಹಿಸುತ್ತಿದೆ. ರೆಡ್ ಕ್ರಾಸ್ ಸ್ವಯಂಸೇವಕರು ಶ್ರೀಕಾಕುಲಂನಲ್ಲಿ ಭಿಕ್ಷುಕರು ಮತ್ತು ಕುಷ್ಠರೋಗ ರೋಗಿಗಳಿಗೆ ನಿಯಮಿತವಾಗಿ ಅನ್ನದಾನ ಮಾಡುತ್ತಿದ್ದು, ನೂರಾರು ಭಿಕ್ಷುಕರಿಗೆ ಇದು ವರದಾನವಾದಂತಾಗಿದೆ.
ಇದನ್ನೂ ಓದಿ:ಶ್ರೀ ರಾಮ ಮಂದಿರಕ್ಕಾಗಿ 28 ವರ್ಷದಿಂದ ನಿರಶನ; ದೇಗುಲದ ಪ್ರಸಾದ ಸ್ವೀಕರಿಸಿ ಉಪವಾಸ ಮುರಿದ ಶಬರಿ
ಲಾಕ್‌ಡೌನ್‌ ಆರಂಭಿಕ ಅವಧಿಯಲ್ಲಿ, ಹಸಿವಿನಿಂದ ಬಳಲುತ್ತಿದ್ದ ಅಸಹಾಯಕರಿಗೆ ಅನ್ನದಾನ ಮಾಡುತ್ತಿದ್ದ  ಹಲವು ಸ್ವಯಂಪ್ರೇರಿತ ಸಂಸ್ಥೆಗಳು ಲಾಕ್​ಡೌನ್ ತೆರವುಗೊಂಡ ಅವುಗಳ ಪೈಕಿ ಹಲವು ಸಂಘಗಳು ಅನ್ನದಾನ ಮಾಡುವುದನ್ನು ನಿಲ್ಲಿಸಿದವು, ಆದರೆ ಈ ಟ್ರಸ್ಟ್ ಮಾತ್ರ ತನ್ನ ಸೇವೆಯನ್ನು ಮುಂದುವರಿಸಿದೆ.ಭಿಕ್ಷುಕರು ಭಿಕ್ಷೆಗಾಗಿ ಸೇರುವ ದೇವಾಲಯಗಳೂ ಮುಚ್ಚಲ್ಪಟ್ಟಿದ್ದರಿಂದ ಅವರು ಆಹಾರವಿಲ್ಲದೆ ಕಂಗೆಟ್ಟಂತಾಗಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಬಡವರಿಗೆ ಆಹಾರವನ್ನು ನೀಡುತ್ತಿರುವ ನಿವೃತ್ತ ಮುಖ್ಯ ಎಂಜಿನಿಯರ್ ಸಿವಿಎನ್ ಮೂರ್ತಿಯನ್ನು ಸಂಪರ್ಕಿಸಿ ಈ ಕುರಿತು ಪ್ರಸ್ತಾಪಿಸಿದ್ದೆವು. ಇದಕ್ಕೆ ಸ್ಪಂದಿಸಿದ ಅವರು ಭಿಕ್ಷುಕರು ಮತ್ತು ಇತರರಿಗೆ ಆಹಾರ ನಿಡಲು ಪ್ರತಿ ತಿಂಗಳು ತಮ್ಮ ಪಿಂಚಣಿ ಮೊತ್ತದಿಂದ 50,000 ರೂ. ನೀಡುತ್ತಿದ್ದಾರೆ.
ಇದನ್ನೂ ಓದಿ:ಎಂಟು ನಗರಗಳಲ್ಲಿ ಜಾರಿಯಲ್ಲಿದೆ ದೇಶೀಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಹೇಗಿದೆ ವ್ಯಾಕ್ಸಿನ್​ ಪಡೆದವರ ಆರೋಗ್ಯ?
ಶ್ರೀಕಾಕುಲಂನ ಪಿ.ಎನ್ ಕಾಲೋನಿಯಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಆಹಾರವನ್ನು ತಯಾರಿಸಲಾಗುತ್ತಿದ್ದು, ಶ್ರೀಕಾಕುಲಂನಲ್ಲಿ ನಾವು ಪ್ರತಿದಿನ ನೂರಾರು ಜನರಿಗೆ ಆಹಾರವನ್ನು ನೀಡುತ್ತೇವೆ ಐಆರ್​ಸಿಎಸ್ ಮುಖ್ಯಸ್ಥ ಪಿ. ಜಗನ್​ಮೋಹನ್ ರಾವ್ ತಿಳಿಸಿದ್ದಾರೆ.ನಾವು ಪ್ರತಿ ತಿಂಗಳು 65 ಸಾವಿರ ರೂ. ವಿನಿಯೋಗಿಸುತ್ತಿದ್ದೇವೆ. 50 ಸಾವಿರ ರೂ. ಗಳನ್ನು ಮೂರ್ತಿಯವರು ಭರಿಸುತ್ತಿದ್ದಾರೆ. ಉಳಿದ ಮೊತ್ತವನ್ನು ಭಾರತೀಯ ರೆಡ್​ಕ್ರಾಸ್ ಸಂಸ್ಥೆಯ ದಾನಿಗಳು ಭರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಮಹಿಳೆಯರ ಶೌಚಗೃಹ ಶುಚಿಗೊಳಿಸಿ ಅಧಿಕಾರಿಗಳಿಗೆ ಪಾಠ ಕಲಿಸಿದ ಸಚಿವ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:9 + 20 =
Remember me
