ನವದೆಹಲಿ:ಮಕರ ಸಂಕ್ರಾಂತಿ ಹಬ್ಬಕ್ಕೆ ಇನ್ನೆರೆಡು ದಿನಗಳು ಬಾಕಿ. ಈ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಈ ದಿನ ಬ್ಯಾಂಕ್‌ಗಳು ಕ್ಲೋಸ್​​​ ಆಗಿರುತ್ತವೆ. ಅಷ್ಟೇ ಅಲ್ಲ, ನಾಳೆ ಅಂದರೆ ಜನವರಿ 13 ರಂದು ಎರಡನೇ ಶನಿವಾರ ಮತ್ತು ಜನವರಿ 14 ರಂದು ಭಾನುವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಇದಲ್ಲದೆ, ವಿವಿಧ ರಾಜ್ಯಗಳಲ್ಲಿ ವಿವಿಧ ಹಬ್ಬಗಳು ಮತ್ತು ಆಚರಣೆಗಳ ಕಾರಣ ಜನವರಿ 16 ಮತ್ತು 17 ರಂದು ಬ್ಯಾಂಕುಗಳು ತೆರೆದಿರುವುದಿಲ್ಲ. ಹಾಗಾಗಿ ಸತತ ಐದು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ನೀವು ಪೂರ್ಣಗೊಳಿಸಬೇಕಾದರೆ, ಇಂದು ನಿಮಗೆ ಕೊನೆಯ ಅವಕಾಶವಾಗಿದೆ.
ಬ್ಯಾಂಕ್ ಅತ್ಯಗತ್ಯ ಹಣಕಾಸು ಸಂಸ್ಥೆಯಾಗಿದೆ. ಆದರೆ ಬ್ಯಾಂಕ್‌ಗಳಿಗೆ ರಜೆ ಇರುವುದರಿಂದ ಗ್ರಾಹಕರು ಇಷ್ಟು ದಿನಗಳ ಕಾಲ ತೊಂದರೆ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕಾಗಿ, ಯಾವುದೇ ರೀತಿಯ ಸಮಸ್ಯೆ ಬಾರದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮುಂಚಿತವಾಗಿ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದರೊಂದಿಗೆ, ನೀವು ಅದಕ್ಕೆ ಅನುಗುಣವಾಗಿ ಬ್ಯಾಂಕ್‌ಗೆ ಹೋಗಲು ಯೋಜಿಸಬೇಕು. ಮುಂದಿನ ವಾರ ಯಾವ ರಾಜ್ಯಗಳಲ್ಲಿ ಎಷ್ಟು ದಿನ ಬ್ಯಾಂಕ್‌ಗಳು ಓಪನ್ ಇರುವುದಿಲ್ಲ ಎಂಬುದನ್ನು ನಾವಿಲ್ಲಿ ಹೇಳಲಿದ್ದೇವೆ.
ಮುಂದಿನ ವಾರ ಈ ರಾಜ್ಯಗಳಲ್ಲಿ ಬ್ಯಾಂಕ್​​​​ ರಜೆ ಇರುತ್ತದೆಜನವರಿ 13, 2024- 2ನೇ ಶನಿವಾರಜನವರಿ 14, 2024- ಭಾನುವಾರಜನವರಿ 15, 2024- ಪೊಂಗಲ್/ತಿರುವಳ್ಳುವರ್ ದಿನ/ಮಕರ ಸಂಕ್ರಾಂತಿ/ ‘ಮಾಘ್ ಬಿಹು’ ಕಾರಣ ಬೆಂಗಳೂರು, ಚೆನ್ನೈ, ಗ್ಯಾಂಗ್‌ಟಕ್, ಗುವಾಹಟಿ ಮತ್ತು ಹೈದರಾಬಾದ್‌ನಲ್ಲಿ ಬ್ಯಾಂಕ್‌ಗಳು ಕ್ಲೋಸ್​​ ಆಗಿರುತ್ತವೆ.ಜನವರಿ 16, 2024- ತಿರುವಳ್ಳುವರ್ ದಿನದ ಕಾರಣ ಚೆನ್ನೈನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.ಜನವರಿ 17, 2024- ಉಳವರ ತಿರುನಾಳ್‌ನಿಂದಾಗಿ ಚೆನ್ನೈನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.ಜನವರಿ 21, 2024- ಭಾನುವಾರಜನವರಿ 22, 2024- Imoinu Irapta ಕಾರಣದಿಂದಾಗಿ ಇಂಫಾಲ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.ಜನವರಿ 23, 2024- ಇಂಫಾಲ್‌ನಲ್ಲಿ ಹಾಡುಗಾರಿಕೆ ಮತ್ತು ನೃತ್ಯದ ಕಾರಣ ಬ್ಯಾಂಕ್ ರಜೆ ಇರುತ್ತದೆ.ಜನವರಿ 25, 2024- ಥಾಯ್ ಪೋಷಮ್/ಹಜರತ್ ಮೊಹಮ್ಮದ್ ಅಲಿ ಅವರ ಜನ್ಮದಿನದ ಕಾರಣ ಚೆನ್ನೈ, ಕಾನ್ಪುರ ಮತ್ತು ಲಕ್ನೋ ಬ್ಯಾಂಕ್‌ಗಳಲ್ಲಿ ರಜೆ ಇರುತ್ತದೆ.ಜನವರಿ 26, 2024- ಗಣರಾಜ್ಯೋತ್ಸವದ ಕಾರಣ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಜನವರಿ 27, 2024- ನಾಲ್ಕನೇ ಶನಿವಾರಜನವರಿ 28, 2024- ಭಾನುವಾರ
ದೀರ್ಘ ರಜಾದಿನಗಳಲ್ಲಿ ಕೆಲಸವನ್ನು ಹೇಗೆ ಪೂರ್ಣಗೊಳಿಸುವುದು?ನಾಳೆ ಅಂದರೆ ಜನವರಿ 13 ರಿಂದ ಜನವರಿ 17 ರವರೆಗೆ ಎರಡನೇ ಶನಿವಾರ, ಭಾನುವಾರ, ಮಕರ ಸಂಕ್ರಾಂತಿ, ಮಾಘ್ ಬಿಹು, ತಿರುವಳ್ಳುವರ್ ದಿನ ಮುಂತಾದ ಹಬ್ಬಗಳ ಕಾರಣ ಬ್ಯಾಂಕ್‌ಗಳು ಸತತ ಐದು ದಿನಗಳವರೆಗೆ ಕ್ಲೋಸ್​​ ಆಗಿರುತ್ತವೆ. ನೀವು ಈ ಮಧ್ಯೆ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ವರ್ಗಾಯಿಸಲು ಬಯಸಿದರೆ, ನೀವು UPI, ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಅನ್ನು ಬಳಸಬಹುದು. ಅದೇ ಸಮಯದಲ್ಲಿ, ನೀವು ನಗದು ಹಿಂಪಡೆಯಲು ATM ಅನ್ನು ಬಳಸಬಹುದು.
ದೇಶದ ಅತಿ ದೊಡ್ಡ ಸಾಗರ ಸೇತುವೆ ಇಂದು ಲೋಕಾರ್ಪಣೆ



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
