ಚಂಡೀಗಢ:ವೈದ್ಯರು ಭೂಮಿ ಮೇಲಿರುವ ದೇವರು ಎನ್ನುತ್ತಾರೆ. ಆದರೆ ಕೆಲವೊಮ್ಮೆ ಅದೇ ದೇವರಿಂದ ಆಗಬಾರದ ತಪ್ಪು ಆಗಿಬಿಡುತ್ತದೆ. ಅದೇ ರೀತಿ ಇದೀಗ ಹರಿಯಾಣದ ಭಿವಾನಿಯಲ್ಲಿರುವ ಹೌದರಿ ಬನ್ಸಿಲಾಲ್ ಸಿವಿಲ್ ಆಸ್ಪತ್ರೆಯಲ್ಲೂ ಒಂದು ಆಗಬಾರದ ತಪ್ಪು ಆಗಿಬಿಟ್ಟಿದೆ.
ರನಿಲಾ ಗ್ರಾಮದ ವೃದ್ಧ ಮಹಿಳೆಯೊಬ್ಬರು ಮನೆಯಲ್ಲಿ ಬಿದ್ದು ಬಲ ಭಾಗದ ಸೊಂಟ ಗಾಯ ಮಾಡಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ಹೌದರಿ ಬನ್ಸಿಲಾಲ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೃದ್ಧೆಗೆ ಆಪರೇಷನ್​ ಅಗತ್ಯತೆ ಇದೆ ಎಂದ ವೈದ್ಯರು, ಆಕೆಯ ಕುಟುಂಬದವರಿಂದ 15 ಸಾವಿರ ಆಪರೇಷನ್​ ಶುಲ್ಕ ಪಡೆದು, ಆಪರೇಷನ್​ ಮಾಡಿದ್ದಾರೆ. ಆದರೆ ಬಲ ಭಾಗದಲ್ಲಿ ಆಗಿದ್ದ ಗಾಯಕ್ಕೆ ಸೊಂಟದ ಎಡ ಭಾಗದಲ್ಲಿ ಆಪರೇಷನ್​ ಮಾಡಲಾಗಿದೆ.
ಆಪರೇಷನ್​ ಆದ ಕೆಲ ಗಂಟೆಗಳಲ್ಲಿ ಈ ವಿಚಾರ ಕುಟುಂಬ ಹಾಗೂ ವೈದ್ಯರ ಅರಿವಿಗೂ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ವೈದ್ಯ ಬಳಗ ವೃದ್ಧೆಯನ್ನು ಪ್ರೈವೇಟ್​ ಕೋಣೆಗೆ ಶಿಫ್ಟ್​ ಮಾಡಿಸಿದೆ. ಅದಕ್ಕೆ ಯಾವುದೇ ಶುಲ್ಕವನ್ನು ಹಾಕಿಲ್ಲ. ಹಾಗೆಯೇ ಮತ್ತೊಮ್ಮೆ ಸೊಂಟದ ಬಲಭಾಗಕ್ಕೆ ಆಪರೇಷನ್​ ಮಾಡಲಾಗಿದೆ. ಅದಕ್ಕೂ ಶುಲ್ಕ ವಿಧಿಸಲಾಗಿದೆ.ಆದರೆ ಇದೀಗ ವೃದ್ಧೆ ಸಾವನ್ನಪ್ಪಿದ್ದಾಳೆ. ಆಕೆಯ ಸಾವಿಗೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬ ದೂರಿದೆ. ಅವರು ತಪ್ಪಾಗಿ ಆಪರೇಷನ್​ ಮಾಡಿದ್ದಕ್ಕೇ ಆಕೆಯನ್ನು ಪ್ರೈವೇಟ್​ ರೂಮಿಗೆ ಶಿಫ್ಟ್​ ಮಾಡಿದರು ಹಾಗೂ ಮತ್ತೊಮ್ಮೆ ಉಚಿತವಾಗಿ ಆಪರೇಷನ್​ ಮಾಡಿದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಸಂಬಂಧ ಇದೀಗ ಮುಖ್ಯ ಆರೋಗ್ಯಾಧಿಕಾರಿ ಡಾ. ಸಪ್ನಾ ಗೆಹ್ಲಾವತ್ ತನಿಖೆ ನಡೆಸಲು ಆದೇಶಿಸಿದ್ದಾರೆ. (ಏಜೆನ್ಸೀಸ್​)
‘ಪ್ರಧಾನಿಗೆ ಪಾಕ್​, ಚೀನಾಕ್ಕೆ ಹೋಗೋಕೆ ಟೈಂ ಇದೆ, ಆದರೆ ನಮ್ಮ ರೈತರನ್ನು ಭೇಟಿ ಮಾಡಲು ಸಮಯವಿಲ್ಲ’

ಹೆಂಡತಿಯ ಮೇಲಿನ ಕೋಪಕ್ಕೆ ನಾಲ್ಕು ಗಂಡು ಮಕ್ಕಳನ್ನು ಕೊಂದ ಅಪ್ಪ! ಸ್ವಲ್ಪ ಸಮಯದಲ್ಲಿ ತಾನೂ ಹೆಣವಾದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − one =
Remember me
