ಭೋಪಾಲ್​:ಗಂಡನಿಂದ ಏನಾದರೂ ಪಡೆಯಬೇಕೆಂದರೆ ಏನು ಮಾಡಬೇಕು? ಕೆಲವರು ಪ್ರೀತಿಯಿಂದ ಕೇಳುತ್ತಾರೆ. ಕೆಲವು ಹೆಂಡತಿಯರು ಜಗಳವಾಡಿ ತರಿಸಿಕೊಳ್ಳುತ್ತಾರೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಭಯ ಪಡಿಸಿ ಪಡೆಯುತ್ತಾರೆ. ಅದೇ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ಭಯ ಹುಟ್ಟಿಸಿದ ಹೆಂಡತಿಗೆ ಗಂಡ ವಿಚ್ಛೇದನ ನೀಡಿ ಮನೆಗೆ ಕಳುಹಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಜೈಲಿನ ಬಾತ್​ರೂಂನಲ್ಲಿ ಕ್ಯಾಮೆರಾ ಹಾಕಿದ್ದರು- ಪಾಕ್​ನ ಕರಾಳ ಮುಖ ಬಿಚ್ಚಿಟ್ಟ ನವಾಜ್​ ಷರೀಫ್​ ಪುತ್ರಿ
ಅವರಿಬ್ಬರದ್ದು ಪ್ರೇಮ ವಿವಾಹ. ಸೋಶಿಯಲ್​ ಮೀಡಿಯಾದಲ್ಲಿ ಪರಿಚಯವಾಗಿದ್ದ ಜೋಡಿ, ಪ್ರೀತಿಸಿ, 2014ರಲ್ಲಿ ಮದುವೆಯಾಗಿದ್ದರು. ಆದರೆ ಮೊದಲಿನಿಂದಲೂ ಸಣ್ಣ ಪುಟ್ಟ ವಿಚಾರಕ್ಕೂ ದಾಂಪತ್ಯದಲ್ಲಿ ಜಗಳವಾಗುತ್ತಿತ್ತು. ಈ ರೀತಿಯಾದಾಗಲೆಲ್ಲ ಹೆಂಡತಿ ಸಾಯುವುದಾಗಿ ಹೆದರಿಸುತ್ತಿದ್ದಳಂತೆ.
ಇತ್ತೀಚೆಗೆ ಇದೇ ರೀತಿ ಜಗಳವೊಂದು ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ ಪತ್ನಿ ಮಹಡಿ ಮೇಲಿನಿಂದ ಕೆಳಕ್ಕೆ ಹಾರಿದ್ದಾಳೆ. ಆದರೆ ಕೆಳಗೆ ಬೀಳದೆ, ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಸಕ್ಕಿಹಾಕಿಕೊಂಡಿದ್ದಾಳೆ. ಪತಿ ಮತ್ತು ಅತ್ತೆ ಸೇರಿ ಆಕೆಯನ್ನು ರಕ್ಷಿಸಿದ್ದಾರೆ. ಆದರೆ ಅದಾಗಲೇ ಮನ ನೊಂದಿದ್ದ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಕುಟುಂಬ ನ್ಯಾಯಾಲಯವು ಅರ್ಜಿಯನ್ನು ಸ್ವೀಕರಿಸಿದೆ ಕೂಡ.
ಇದನ್ನೂ ಓದಿ:ವಿದ್ಯುತ್ ಬರ ನೀಗಿ ಬೇರೆ ರಾಜ್ಯಗಳಿಗೂ ಸರಬರಾಜು ಮಾಡುವ ಸಾಮರ್ಥ್ಯ ನಮ್ಮ ರಾಜ್ಯಕ್ಕಿದೆ
ತನ್ನ ತಪ್ಪಿನಿಂದಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಾದಾಗ ಹೆಂಡತಿಗೆ ಅವಮಾನವಾದಂತಾಗಿದೆ. ನನಗೆ ತಪ್ಪಿನ ಅರಿವಾಗಿದೆ, ತಿದ್ದಿಕೊಂಡು ಬದುಕುತ್ತೇನೆ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾಳೆ. ಆದರೆ ಆಕೆಯೊಂದಿಗೆ ಬದುಕುವುದಕ್ಕೆ ಪತಿ ನಿರಾಕರಿಸಿದ್ದಾನೆ. ಈ ವಿಚಾರದಲ್ಲಿ ತನ್ನ ಮಗಳದ್ದೇ ತಪ್ಪಿದೆ ಎಂದು ಆಕೆಯ ತಂದೆ ಕೂಡ ಹೇಳಿದ್ದಾರೆ.
ಇದೀಗ ಇಬ್ಬರಿಗೂ ಕೌನ್ಸೆಲಿಂಗ್​ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಕೌನ್ಸೆಲಿಂಗ್​ ವರದಿ ಸಿಕ್ಕ ನಂತರ ತೀರ್ಪನ್ನು ನೀಡಲಾಗುವುದು. (ಏಜೆನ್ಸೀಸ್)
ಗಡಿಯಲ್ಲಿ ಸೇನೆಯ ದೀಪಾವಳಿ; ಪಾಕಿಸ್ತಾನದ ಬಂಕರ್​, ಲಾಂಚ್​ ಪ್ಯಾಡ್​ಗಳು ಪುಡಿಪುಡಿ

ರೋಹಿತ್​ ಆರ್​ಸಿಬಿಯ ನಾಯಕನಾಗಿದ್ದರೆ ಹೀಗೇ ಗೆಲ್ಲುತ್ತಿದ್ದರಾ? ಗೌತಮ್​ ಗಂಭೀರ್​ಗೆ ಆಕಾಶ್​ ಛೋಪ್ರಾ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − two =
Remember me
