ಅಹಮದಾಬಾದ್​:ತಾನು ಮಾಡಿದ ಆಲೂಗಡ್ಡೆ ಪಲ್ಯವನ್ನು ತಿನ್ನಲು ನಿರಾಕರಿಸಿದ ಎಂಬ ಕಾರಣಕ್ಕಾಗಿ ಪತ್ನಿಯೊಬ್ಬಳು ಪತಿಯನ್ನು ಬಟ್ಟೆ ಒಗೆಯುವ ಕೋಲಿನಿಂದ ಮನಸೋಇಚ್ಛೆ ಬಡದಿದ್ದಾಳೆ. ಈ ದಾಳಿಯಲ್ಲಿ ಪತಿಯ ಬಲ ಹೆಗಲು ಫ್ರಾಕ್ಚರ್​ ಆಗಿದೆ.ಅಹಮದಾಬಾದ್​ನ ವಾಸ್ನಾದ ಸೋರೈನಗರ್​ ನಿವಾಸಿ ಹರ್ಷದ್​ ಗೋಯೆಲ್​ (40) ಹಲ್ಲೆಗೆ ಒಳಗಾದ ಪತಿ. ತಾರಾ ಗೋಯೆಲ್​ ಹಲ್ಲೆ ಮಾಡಿದಾಕೆ. ಇದೀಗ ತಾರಾ ವಿರುದ್ಧ ಹರ್ಷದ್​ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನು ಆಧರಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹರ್ಷದ್​ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಲೂಗಡ್ಡೆಯನ್ನು ಸೇವಿಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ಶುಕ್ರವಾರದ ರಾತ್ರಿಯ ಭೋಜನಕ್ಕೆ ತಾರಾ ಆಲೂಗಡ್ಡೆ ಪಲ್ಯವನ್ನು ತಯಾರಿಸಿದ್ದಳು. ಊಟಕ್ಕೆ ಏನೆಂದು ಹರ್ಷದ್​ ಕೇಳಿದಾಗ ಆಕೆ ಆಲೂಗಡ್ಡೆ ಪಲ್ಯ ಮತ್ತು ಚಪಾತಿ ಮಾಡಿರುವುದಾಗಿ ಹೇಳಿದ್ದಳು.
ವೈದ್ಯರ ಸಲಹೆಯನ್ನು ಉದ್ಗರಿಸುತ್ತಾ, ಆಲೂಗಡ್ಡೆ ಪಲ್ಯ ತಿನ್ನುವುದಿಲ್ಲ. ಬೇರೆ ಯಾವುದಾದರೂ ಪಲ್ಯ ಮಾಡುವಂತೆ ಪತ್ನಿಗೆ ಹೇಳಿದ್ದರು. ಆದರೆ ಇದರಿಂದ ಸಿಟ್ಟಿಗೆದ್ದ ಆಕೆ, ಅವರೊಂದಿಗೆ ಜಗಳ ತೆಗೆದಿದ್ದಳು. ತೀರಾ ಸಿಟ್ಟಿಗೆದ್ದ ಆಕೆ ಬಚ್ಚಲು ಮನೆಗೆ ಹೋಗಿ, ಅಲ್ಲಿಟ್ಟಿದ್ದ ಬಟ್ಟೆ ಹೊಗೆಯುವ ಕೋಲನ್ನು ತಂದು ಹರ್ಷದ್​ ಮೇಲೆ ಹಠಾತ್ತನೆ ಹಲ್ಲೆ ಮಾಡಿದ್ದಳು.
ಇದನ್ನೂ ಓದಿ:ದುಬಾರಿ ಆಗಲಿವೆ ಲ್ಯಾಪ್​ಟಾಪ್​, ಕ್ಯಾಮರಾ; ಚೀನಾದ ಜವಳಿ ಮೇಲೂ ಕರ ಹೆಚ್ಚಳಕ್ಕೆ ಚಿಂತನೆ
ಹರ್ಷದ್​ನ ಕೂಗಾಟ ಕೇಳಿ ಕುಟುಂಬದ ಸದಸ್ಯರು ಆತನ ನೆರವಿಗೆ ಧಾವಿಸಿದ್ದರು. ಪತಿ-ಪತ್ನಿಯರನ್ನು ದೂರ ಮಾಡಿ, ತೀವ್ರ ಅಸ್ವಸ್ಥಗೊಂಡಿದ್ದ ಹರ್ಷದ್​ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಎಕ್ಸ್​ರೇ ಮಾಡಿದಾಗ ಹರ್ಷದ್​ ಅವರ ಬಲ ಹೆಗಲಿಗೆ ಗಂಭೀರ ಗಾಯವಾಗಿದ್ದು, ಮೂಳೆ ಮುರಿದಿದೆ ಎಂದು ವೈದ್ಯರು ತಿಳಿಸಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಇದೀಗ ಪ್ರಕರಣ ದಾಖಲಿಸಿಕೊಂಡಿರುವ ವಾಸ್ನಾ ಪೊಲೀಸರು, ತನಿಖೆಯನ್ನು ಆರಂಭಿಸಿದ್ದಾರೆ. ತಾರಾ ವಿರುದ್ಧ ಪತಿಯ ಮೇಲೆ ದೌರ್ಜನ್ಯ ಹಾಗೂ ಹಲ್ಲೆ ಮಾಡಿದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಸೂಕ್ತ ಕಾನೂನಿನ ಪ್ರಕಾರ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮಾನ್ವಿತಾ ಕನಸು ನನಸು, ಆನಿಮೇಷನ್ ಸಂಸ್ಥೆ ಪ್ರಾರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − five =
Remember me
