ನವದೆಹಲಿ:ಕೇಂದ್ರ ಬಜೆಟ್​ ಇರಲಿ, ರಾಜ್ಯದ ಬಜೆಟ್​ ಇರಲಿ ಜನಸಾಮಾನ್ಯರಿಗೆ ಒಂದು ಕುತೂಹಲ, ಅವರದ್ದೇ ಆದ ನಿರೀಕ್ಷೆಗಳು ಇದ್ದೇ ಇರುತ್ತವೆ. ಅದರಲ್ಲೂ ಕೇಂದ್ರ ಬಜೆಟ್​ ಮಂಡನೆಯ ದಿನ ಹತ್ತಿರ ಬಂದರೆ ಇನ್ನೂ ಒಂದು ಪಟ್ಟು ಜಾಸ್ತಿಯೇ ಕುತೂಹಲ.
ಮುಂಬರುವ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್​ಗೆ ಸಲಹೆ, ಸೂಚನೆಗಳನ್ನು ನೀಡುವ ಅವಕಾಶವನ್ನು ದೇಶದ ಪ್ರಜೆಗಳಿಗೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡುವ ಮೂಲಕ ಸಲಹೆಗಳನ್ನು ಆಹ್ವಾನಿಸಿದ್ದಾರೆ. ದೇಶದ ನಾಗರಿಕರು ಹಾಗೂ ಕೇಂದ್ರ ಸರ್ಕಾರದ ಕೊಂಡಿಯಾಗಿರುವ ಮೈ ಗೌ (ನನ್ನ ಸರ್ಕಾರ) ವೆಬ್​ ಪೋರ್ಟ್​ಲ್​ ಮೂಲಕ ಬಜೆಟ್​ಗೆ ಸಂಬಂಧಿಸಿದ ಸಲಹೆಗಳನ್ನು ಯಾರು ಬೇಕಾದರೂ ನೀಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಬಜೆಟ್​ ಈ ದೇಶದ 130 ಕೋಟಿ ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಈ ದೇಶದ ಅಭಿವೃದ್ಧಿಯ ದಾರಿಯನ್ನು ರೂಪಿಸುತ್ತದೆ. ಹಾಗಾಗಿ ನೀವೆಲ್ಲರೂ ಬಜೆಟ್​ ಬಗ್ಗೆ ನಿಮ್ಮ ಕಲ್ಪನೆ, ಸಲಹೆಗಳನ್ನು ಮೌ ಗೌ ವೆಬ್​ನಲ್ಲಿ ಬರೆಯಿರಿ ಎಂದು ನರೇಂದ್ರ ಮೋದಿಯವರು ಟ್ವೀಟ್​ ಮಾಡಿದ್ದಾರೆ.
ಕೆಲವೇ ದಿನಗಳ ಹಿಂದೆ ಮೈ ಗೌ ಇಂಡಿಯಾ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ತಿಳಿಸಿತ್ತು. ನಿಮ್ಮ ಸಲಹೆಗಳನ್ನು ನಮ್ಮೊಂದಿಗೆ ಶೇರ್​ ಮಾಡಿಕೊಳ್ಳಿ ಎಂದು 12 ಸೆಕೆಂಡ್​​ಗಳ ವಿಡಿಯೋ ಶೇರ್​ ಮಾಡಿತ್ತು. ಆ ವಿಡಿಯೋವನ್ನು ರೀಟ್ವೀಟ್ ಮಾಡಿದ ಮೋದಿಯವರೂ ಸಲಹೆಗಳಿಗೆ ಆಹ್ವಾನಿಸಿದ್ದಾರೆ.
ಅಲ್ಲದೆ, ಭಾರತದ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳು, ಬೆಳವಣಿಗೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಉದ್ಯೋಗ ಸೃಷ್ಟಿಯ ಬಗ್ಗೆ ದೇಶದ ಪ್ರಮುಖ ಉದ್ಯಮಿಗಳೊಂದಿಗೆ ನರೇಂದ್ರ ಮೋದಿಯವರು ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಚರ್ಚೆಯಲ್ಲಿ ಮುಖೇಶ್​ ಅಂಬಾನಿ, ಟಾಟಾ ಗ್ರೂಪ್​ನ ರತನ್​ ಟಾಟಾ, ಸುನೀಲ್​ ಭಾರ್ತಿ ಮಿತ್ತಲ್​, ಗೌತಮ್​ ಅದಾನಿ, ಆನಂದ್​ ಮಹೀಂದ್ರಾ ಇತರರು ಇದ್ದರು ಎನ್ನಲಾಗಿದೆ. (ಏಜೆನ್ಸೀಸ್​)
The Union Budget represents the aspirations of 130 crore Indians and lays out the path towards India’s development.
I invite you all to share your ideas and suggestions for this year’s Budget on MyGov.https://t.co/zVCL06TdLn
— Narendra Modi (@narendramodi)January 8, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
