ನವದೆಹಲಿ:ಲೋಕಸಭೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್​ ಸಂಸದ ಗೌರವ್​ ಗೊಗೊಯ್​, ಮಣಿಪುರಕ್ಕಾಗಿ ವಿಪಕ್ಷಗಳು ಈ ಅವಿಶ್ವಾಸವನ್ನು ತಂದಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೆ, ಆಗ ಭಾರತವು ಉರಿಯುತ್ತಿದೆ ಎನ್ನುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಗೊಗೊಯ್​ ಅವರು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಮೂರು ಪ್ರಶ್ನೆಗಳನ್ನು ಕೇಳಿದರು. ಆ ಪ್ರಶ್ನೆಗಳು ಯಾವುವೆಂದರೆ, ಮೊದಲನೆಯ ಪ್ರಶ್ನೆ ಇಲ್ಲಿಯವರೆಗೂ ಪ್ರಧಾನಿ ಮೋದಿ ಮಣಿಪುರಕ್ಕೆ ಏಕೆ ಭೇಟಿ ನೀಡಿಲ್ಲ? ಎರಡನೆಯದು, ಈ ವಿಚಾರದ ಬಗ್ಗೆ ಮಾತನಾಡಲು ಪ್ರಧಾನಿ ಅವರು 80 ದಿನಗಳನ್ನು ತೆಗೆದುಕೊಂಡಿದ್ದೇಕೆ? ಮೂರನೆಯ ಹಾಗೂ ಕೊನೆಯ ಪ್ರಶ್ನೆ, ಮಣಿಪುರ ಮುಖ್ಯಮಂತ್ರಿಯನ್ನು ಈವರೆಗೂ ಮೋದಿ ಯಾಕೆ ವಜಾಗೊಳಿಸಿಲ್ಲ ಎಂದು ಗೊಗೊಯ್​ ಪ್ರಶ್ನೆ ಮಾಡಿದರು.
ನಾವು ಅವಿಶ್ವಾಸ ನಿರ್ಣಯವನ್ನು ತರಲು ಒತ್ತಾಯಿಸಿದೆವು. ಇದು ಎಂದಿಗೂ ಸಂಖ್ಯೆಗಳ ಬಗ್ಗೆ ಅಲ್ಲ ಆದರೆ, ಇದು ಮಣಿಪುರಕ್ಕೆ ನ್ಯಾಯದ ಬಗ್ಗೆ. ಈ ಸದನವು ಸರ್ಕಾರದಲ್ಲಿ ಅವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಎಂಬ ಪ್ರಸ್ತಾವನೆಯನ್ನು ನಾನು ಮಂಡಿಸುತ್ತೇನೆ. ಐ.ಎನ್.ಡಿ.ಐ.ಎ. ಮಣಿಪುರಕ್ಕಾಗಿ ಈ ಅವಿಶ್ವಾಸವನ್ನು ಮತ್ತು ಮಣಿಪುರವು ನ್ಯಾಯವನ್ನು ಬಯಸುತ್ತದೆ ಎಂದು ಗೊಗೊಯ್​ ಹೇಳಿದರು.
ಸಂಸತ್ತಿನಲ್ಲಿ ಮಾತನಾಡದಿರಲು ಪ್ರಧಾನಿ ಮೋದಿ ಅವರು ಮೌನವ್ರತ ಕೈಗೊಂಡಿದ್ದಾರೆ. ಹೀಗಾಗಿ ಅವರ ಮೌನವನ್ನು ಮುರಿಯಲು ನಾವು ಅವಿಶ್ವಾಸ ನಿರ್ಣಯವನ್ನು ಮಂಡಿಸಬೇಕಾಯಿತು ಎಂದು ಗೊಗೊಯ್​ ಹೇಳಿದರು.
ಇದನ್ನೂ ಓದಿ:ಗಾರ್ಮೆಂಟ್ಸ್ ನೌಕರಿಗೆ ಹೊರಟ್ಟಿದ್ದ ಆಟೋ, ಬಸ್ ಮುಖಾಮುಖಿ; ಯುವತಿ ಮೃತ, 10 ಕಾರ್ಮಿಕರಿಗೆ ಗಾಯ
ಗುರುವಾರದವರೆಗೆ (ಆಗಸ್ಟ್ 10) ಅವಿಶ್ವಾಸದ ಮೇಲಿನ ಚರ್ಚೆ ಮುಂದುವರಿಯುವ ನಿರೀಕ್ಷೆಯಿದೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡುವ ನಿರೀಕ್ಷೆಯೂ ಇದೆ. ಚರ್ಚೆಯು ಒಟ್ಟು 16 ಗಂಟೆಗಳ ಕಾಲ ನಡೆಯಲಿದೆ.
ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೊದಲು ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂಡಿಯಾ ವಿಪಕ್ಷ ಒಕ್ಕೂಟ ಮಂಡಿಸಿದ ನಿರ್ಣಯವು ಅವರಿಗೆ ಕೇವಲ ಒಂದು ಕಾರ್ಯಕ್ರಮವಾಗಿದೆ, ಆದರೆ ನಮಗೆ ಇದು ಒಂದು ಅವಕಾಶ ಎಂದು ಹೇಳಿದರು. ಭಾರತವನ್ನು ಭ್ರಷ್ಟಾಚಾರ ಮತ್ತು ವಂಶಾಡಳಿತದಿಂದ ಮುಕ್ತವಾಗಿಡಬೇಕೆಂಬ ಆಡಳಿತಾರೂಢ ಎನ್‌ಡಿಎಯ ಘೋಷಣೆ ಹಾಗೆಯೇ ಉಳಿದಿದೆ ಮತ್ತು ಪ್ರತಿಪಕ್ಷಗಳ ಮೈತ್ರಿಯು ಪರಸ್ಪರ ಅಪನಂಬಿಕೆಯಿಂದ ಪೀಡಿತವಾಗಿದೆ ಎಂದು ಪ್ರಧಾನಿ ಹೇಳಿದರು.
ಮಣಿಪುರದಲ್ಲಿನ ಹಿಂಸಾತ್ಮಕ ಪರಿಸ್ಥಿತಿಯ ಕುರಿತಂತೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕೆಂದು ಮುಂಗಾರು ಅಧಿವೇಶನದ ಆರಂಭದಿಂದಲೂ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಹಲವು ದಿನಗಳ ಪ್ರತಿಭಟನೆಗಳು ಮತ್ತು ಸಭಾತ್ಯಾಗಗಳ ನಂತರ ಪ್ರತಿಪಕ್ಷಗಳು ಜುಲೈ 26ರಂದು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಎರಡು ಪ್ರತ್ಯೇಕ ನೋಟಿಸ್​ಗಳನ್ನು ನೀಡಿದವು.(ಏಜೆನ್ಸೀಸ್​)
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಿಂದ ಹಿಂದೆ ಸರಿದ ರಾಹುಲ್​ ಗಾಂಧಿಯನ್ನು ಅಣಕಿಸಿದ ಬಿಜೆಪಿ

ರಾಹುಲ್​ ಗಾಂಧಿಯನ್ನು ಮದುವೆಯಾಗಲು ನಾನು ರೆಡಿ ಆದ್ರೆ ಒಂದು ಕಂಡೀಷನ್​ ಎಂದ ನಟಿ ಶೆರ್ಲಿನ್​ ಚೋಪ್ರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 7 =
Remember me
