ನವದೆಹಲಿ:ಪ್ರಧಾನಿ ಮೋದಿ ಅವರು ಆರ್​ಎಸ್​ಎಸ್​ನ ಪ್ರಚಾರಕ್​ ಸಂಸ್ಕಾರಕ್ಕೆ ಬದ್ಧರಾಗಿ 75ನೇ ವರ್ಷಕ್ಕೆ ನಿವೃತ್ತಿ ಘೋಷಿಸಬೇಕು ಇಲ್ಲವಾದಲ್ಲಿ ಅವರು ತಮ್ಮ ಕುರ್ಚಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಎಚ್ಚರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಮೋದಿ ಅವರು RSS ಪ್ರಚಾರಕ್​ ಸಂಸ್ಕಾರಕ್ಕೆ ಬದ್ಧರಾಗಿ, ಸೆಪ್ಟೆಂಬರ್ 17 ರಂದು ತಮ್ಮ 75 ನೇ ವರ್ಷದ ಹುಟ್ಟುಹಬ್ಬದ ನಂತರ ಮಾರ್ಗದರ್ಶನ ಮಂಡಲಕ್ಕೆ ನಿವೃತ್ತಿ ಘೋಷಿಸದಿದ್ದರೆ, ಅವರು ಇತರ ವಿಧಾನಗಳಿಂದ ತಮ್ಮ ಪ್ರಧಾನಿ ಕುರ್ಚಿಯನ್ನು ಕಳೆದುಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ.
If Modi does not, as committed to RSS Pracharak’s sanskaar, announce his retiring to Marg Darshan Mandal after his 75 th year birthday on Sept 17 th, then he will lose his PM chair by other methods.
ಇದನ್ನೂ ಓದಿ:VIDEO| ಎಂ.ಕೆ. ಸ್ಟಾಲಿನ್​ ಬಗ್ಗೆ ನಾನು ಕೇಳಿಲ್ಲ, ಆದ್ರೆ ಈ ವ್ಯಕ್ತಿ ಯಾರೆಂಬುದು ನನಗೆ ಗೊತ್ತು; ಅವಳಿ ಕಂಚಿನ ತಾರೆ ಮನು ಭಾಕರ್​ ಹೇಳಿಕೆ ವೈರಲ್​
ಪ್ರಧಾನಿ ಮೋದಿ ವಿರುದ್ಧದ ಟೀಕೆಗೆ ಹೆಸರುವಾಗಿಯಾಗಿರುವ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್​ ಸ್ವಾಮಿ, ಮೋದಿ ಸರ್ಕಾರದ GDP ಬೆಳವಣಿಗೆಯ ಹಕ್ಕು ಸಾರ್ವಜನಿಕರಿಗೆ ದೊಡ್ಡ ವಂಚನೆಯಾಗಿದೆ. ಕೆಳಗಿನ ಅಂಕಿಅಂಶಗಳು 2014 ರಿಂದ ಸರಾಸರಿ GDP ಬೆಳವಣಿಗೆಯನ್ನು ವರ್ಷಕ್ಕೆ ಕೇವಲ 5 % ಮತ್ತು 2016 ರಿಂದ ವರ್ಷಕ್ಕೆ 3.7 %ಗೆ ಇಳಿದಿದೆ ಎಂದು ಟ್ವೀಟ್​ ಮಾಡಿ ಮೋದಿ ಸರ್ಕಾರ ಹಾಗೂ ಅದರ ನೀತಿಗಳ ವಿರುದ್ಧ ಗುಡುಗಿದ್ದರು. ಇದೀಗ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರ ಪೌರತ್ವ ಪ್ರಶ್ನಿಸಿ ಸುಬ್ರಮಣಿಯನ್​ ಸ್ವಾಮಿ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ನಾನು ಕೋರ್ಟ್​ ಮೆಟ್ಟಿಲೇರಿರುವುದು ವೈಯಕ್ತಿಕ ಲಾಭಕ್ಕಾಗಿ ಅಲ್ಲ, ರಾಷ್ಟ್ರೀಯ ಕಾಳಜಿಯ ವಿಷಯ ಎಂದು ಹಿರಿಯ ಬಿಜೆಪಿ ನಾಯಕ ಹೇಳಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + four =
Remember me
