ನವದೆಹಲಿ:ಏಕದಿನ ವಿಶ್ವಕಪ್‌ 2023 ಮುಗಿದ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಾಮ್‌ ನಾಯಕತ್ವ ತ್ಯಜಿಸುವ ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿಯೊಂದು ಕ್ರಿಕೆಟ್​​ ವಲಯದಲ್ಲಿ ಹರಿದಾಡುತ್ತಿತ್ತು. ಈ ಕುರಿತಾಗಿ ಇದೀಗ ಸ್ಪಷ್ಟನೆ ಸಿಕ್ಕಿದೆ.
ವಿಶ್ವಕಪ್‌ 2023ರಲ್ಲಿ ಆಡಲು ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್‌ ತಂಡ ಈವರೆಗೆ ಮಿಶ್ರ ಫಲಿತಾಂಶ ಪಡೆದಿದೆ. ಲೀಗ್‌ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಬಾಬರ್‌ ಅಜಾಮ್‌ ಬಳಗದ ಸೆಮೀಸ್‌ ಹಾದಿ ಬಹುತೇಕ ಅಸಾಧ್ಯ ಎಂಬಂತಾಗಿದೆ. ಕಳಪೆ ಪ್ರದರ್ಶನದಿಂದಾಗಿ ತಮ್ಮ ದೇಶದ ಹಿರಿಯ ಆಟಗಾರರು ಹಾಗೂ ಅಭಿಮಾನಿಗಳ ಕಟು ಟೀಕೆಗಳಿಂದ ನಾಯಕ ಬಾಬರ್‌ ಹಾಗೂ ತಂಡದ ಆಟಗಾರರು ಬೇಸತ್ತಿದ್ದಾರೆ. ಹೀಗಾಗಿ ರಾಜೀನಾಮೆ ಹೇಳಲು ಬಾಬರ್‌ ಮುಂದಾಗಿದ್ದಾರೆಂದು ಸುದ್ದಿಗಳು ಹರಿದಾಡುತ್ತಿದ್ದವು.
ವಿಶ್ವಕಪ್‌ನಿಂದ ಹಿಂತಿರುಗಿದ ನಂತರ ತಂಡದಲ್ಲಿ ತನ್ನ ಪಾತ್ರವನ್ನು ಮೌಲ್ಯಮಾಪನ ಮಾಡುವುದಾಗಿ ಇಂಗ್ಲೆಂಡ್ ಸೋಲಿನ ಮೊದಲು ಬಾಬರ್ ಹೇಳಿದ್ದರು.ಮನೆಗೆ ಹಿಂದಿರುಗಿದ ನಂತರ ಅವರನ್ನು ಸ್ಥಾನದಿಂದ ತೆಗೆದುಹಾಕುವ ಸಾಧ್ಯತೆಯ ವರದಿಗಳ ಹೊರತಾಗಿಯೂ ಅವರು ನಾಯಕನಾಗಿ ತಮ್ಮ ಪಾತ್ರವನ್ನು ಮುಂದುವರಿಸಲು ಸುಳಿವು ನೀಡಿದ್ದಾರೆ.
ಬಾಬರ್ ಅಜಾಮ್‌ ಮಾತನಾಡಿ, “ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಮತ್ತು ನಮ್ಮ ತಪ್ಪುಗಳನ್ನು ಸಹ ಚರ್ಚಿಸುತ್ತೇನೆ. ನನ್ನ ಅನುಭವದಲ್ಲಿ ಪಿಚ್ ಮಾಡಲು ನಾನು ಅತ್ಯುತ್ತಮವಾಗಿ ಮಾಡುತ್ತೇನೆ. ನನ್ನ ತಂಡವನ್ನು ಮರುನಿರ್ಮಾಣ ಮಾಡಿ ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ” ಎಂದು ಅವರು ಹೇಳುವ ಮೂಲಕವಾಗಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಾಮ್‌ ನಾಯಕತ್ವ ತ್ಯಜಿಸುವ ನಿರ್ಧಾರ ಕೈ ಬಿಟ್ಟಿರುವುದಾಗಿ ಘೋಷಿಸಿದ್ದಾರೆ.
ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ಇಂದು (ನ.11) ನಡೆದ ವಿಶ್ವಕಪ್​ ಟೂರ್ನಿಯ 44ನೇ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ 93 ರನ್​ಗಳ ಅಂತರದಿಂದ ಹೀನಾಯ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವಕಪ್​ ಅಭಿಯಾನವನ್ನು ಮುಗಿಸಿದೆ. ಇನ್ನೊಂದೆಡೆ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಇಂಗ್ಲೆಂಡ್​ ಕೂಡ ವಿಶ್ವಕಪ್​ನಲ್ಲಿ ತನ್ನ ಪ್ರಯಾಣ ಕೊನೆಗೊಳಿಸಿ, ತವರಿನತ್ತ ಹೊರಡಲು ರೆಡಿಯಾಗಿದೆ.
ಏಕದಿನ ವಿಶ್ವಕಪ್‌ 2023 ಬಳಿಕ ಪಾಕಿಸ್ತಾನ ತಂಡದ ನಾಯಕತ್ವ ತ್ಯಜಿಸಲು ಬಾಬರ್ ಅಜಾಮ್‌ ನಿರ್ಧಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
