ರೇಷನ್​ ಅಂಗಡಿಗಳ ವಿಚಾರವಾಗಿ ಗಂಭೀರವಾಗಿ ನಡೆದ ವಾದ-ವಿವಾದ ಕೊನೆಗೆ ಗುಂಡು ಹಾರಿಸುವ ಹಂತಕ್ಕೆ ಹೋಗಿದ್ದು, ಒಬ್ಬನ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ. ಜಯಪ್ರಕಾಶ್​ ಎಂಬ 46 ವರ್ಷದ ವ್ಯಕ್ತಿ ಇದರಲ್ಲಿ ಹತ್ಯೆಗೀಡಾಗಿದ್ದು, ಧೀರೇಂದ್ರ ಸಿಂಗ್​ ಎಂಬಾತ ಗುಂಡು ಹಾರಿಸಿದ್ದ.
ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯ ರಿಯೊಟಿ ಪ್ರದೇಶದ ದುರ್ಜನ್​ಪುರ್ ಗ್ರಾಮದಲ್ಲಿ ಪಡಿತರ ಅಂಗಡಿಗಳ ಆಯ್ಕೆ ಕುರಿತು ಪಂಚಾಯತ್ ಭವನದಲ್ಲಿ ನಡೆದ ಸಭೆ ವೇಳೆ ಈ ಕೃತ್ಯ ನಡೆದಿದೆ. ಸ್ವಸಹಾಯ ಸಂಘಗಳ ವಿವಾದದಿಂದ ರದ್ದಾಗಿದ್ದ ರೇಷನ್​ ಶಾಪ್​ಗಳ ಕುರಿತು ಆಯೋಜಿಸಲಾಗಿದ್ದ ಸಭೆ ಸಂದರ್ಭ ದೊಡ್ಡ ಮಟ್ಟದಲ್ಲಿ ನಡೆದಿದ್ದ ವಾಗ್ವಾದವೇ ಇದಕ್ಕೆ ಕಾರಣ.
ಹತ್ಯೆಗೀಡಾದವನ ಸಹೋದರ ನೀಡಿದ ದೂರಿನ ಮೇರೆಗೆ 15ರಿಂದ 20 ಮಂದಿ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಕಾನೂನು ಸುವ್ಯವಸ್ಥೆಗಾಗಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್​ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದೇವೇಂದ್ರ ನಾಥ್ ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − 3 =
Remember me
