ಪೋರ್ಟ್ ಲೂಯಿಸ್​:ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಸಂದರ್ಭದಲ್ಲಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಹಿಂದೂ ನಂಬಿಕೆಯ ಜನರಿಗೆ ಎರಡು ಗಂಟೆಗಳ ಕಾಲ ವಿಶೇಷ ರಜೆ ನೀಡಲು ಮಾರಿಷಸ್ ಸರ್ಕಾರ ನಿರ್ಧರಿಸಿದೆ.
ರಾಮ ಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ನಾಯಕರು ಭಾಗವಹಿಸಲಿದ್ದು, ಈ ಸಮಾರಂಭ ನೇರ ಪ್ರಸಾರವಾಗಲಿದೆ.
ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ, ಸೇವೆಯ ಅಗತ್ಯತೆಗಳಿಗೆ ಒಳಪಟ್ಟು, ಹಿಂದೂ ನಂಬಿಕೆಯ ಸಾರ್ವಜನಿಕ ಅಧಿಕಾರಿಗಳಿಗೆ ಜನವರಿ 22ರಂದು ಮಧ್ಯಾಹ್ನ 2 ಗಂಟೆಯಿಂದ ಎರಡು ಗಂಟೆಗಳ ವಿಶೇಷ ರಜೆ ನೀಡಲು ಮಾರಿಷಸ್​ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಭಾರತದಲ್ಲಿ ಮಂದಿರ ಉದ್ಘಾಟನೆಯು ಅಯೋಧ್ಯೆಯಲ್ಲಿ ಭಗವಾನ್ ರಾಮನ ಪುನರಾಗಮನವನ್ನು ಸಂಕೇತಿಸುವ ಹೆಗ್ಗುರುತು ಘಟನೆಯಾಗಿದೆ” ಎಂದು ಪ್ರಧಾನ ಮಂತ್ರಿ ಪ್ರವಿಂದ್ ಕುಮಾರ್ ಜುಗ್ನಾಥ್ ನೇತೃತ್ವದ ಮಾರಿಷಸ್ ಸಚಿವ ಸಂಪುಟ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಮಾರಿಷಸ್‌ನಲ್ಲಿ ಹಿಂದೂ ಧರ್ಮವು ಅತಿದೊಡ್ಡ ಧರ್ಮವಾಗಿದೆ, 2011ರ ಸಮೀಕ್ಷೆ ಪ್ರಕಾರ ಈ ದೇಶದಲ್ಲಿ ಒಟ್ಟು ಜನಸಂಖ್ಯೆಯ ಸರಿಸುಮಾರು 48.5 ಪ್ರತಿಶತದಷ್ಟು ಹಿಂದೂ ಸಮುದಾಯದವರಿದ್ದಾರೆ.
ಆಫ್ರಿಕಾದಲ್ಲಿ ಹಿಂದೂ ಧರ್ಮವು ಹೆಚ್ಚು ಆಚರಣೆಯಲ್ಲಿರುವ ಏಕೈಕ ದೇಶ ಮಾರಿಷಸ್ ಆಗಿದೆ. ಶೇಕಡಾವಾರು ಪ್ರಮಾಣದಲ್ಲಿ, ನೇಪಾಳ ಮತ್ತು ಭಾರತವನ್ನು ಅನುಸರಿಸಿ ಹಿಂದೂ ಧರ್ಮ ಪ್ರಸಾರ ಮಾಡುವಲ್ಲಿ ಈ ರಾಷ್ಟ್ರವು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ.
ಫ್ರೆಂಚರ ವಸಾಹತುಶಾಹಿ ಇದ್ದಾಗ ಕಾರ್ಮಿಕರಾಗಿ ಭಾರತೀಯರನ್ನು ಕರೆತಂದಾಗ ಹಿಂದೂ ಧರ್ಮವು ಮಾರಿಷಸ್‌ಗೆ ಬಂದಿತು. ನಂತರ ಮಾರಿಷಸ್ ಮತ್ತು ಹಿಂದೂ ಮಹಾಸಾಗರದ ನೆರೆಯ ದ್ವೀಪಗಳಲ್ಲಿನ ಬ್ರಿಟಿಷ್ ತೋಟಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳನ್ನು ಕರೆತರಲಾಯಿತು.
ವಲಸಿಗರು ಪ್ರಾಥಮಿಕವಾಗಿ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ಬಂದಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
