ಮುಂಬೈ:ಮಹಾರಾಷ್ಟ್ರದಲ್ಲಿ ಮತ್ತೆ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಜನ ಸಂದಣಿ ಮತ್ತು ಸಂಚಾರದ ಮೇಲೆ ಮತ್ತೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಮುಂಬೈ ಮತ್ತು ಪುಣೆ ನಗರಗಳಲ್ಲಿ ದಿನಕ್ಕೆ 600 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಇತ್ತೀಚೆಗೆ ರಾಜ್ಯದ ಮೂವರು ಸಚಿವರಿಗೆ ಕರೊನಾ ಸೋಂಕು ಕಂಡುಬಂದಿತ್ತು. ಇದೀಗ ಮತ್ತೊಬ್ಬ ಸಚಿವರು ಈ ಸಾಲಿಗೆ ಸೇರಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಂಡ ಜಲಸಂಪನ್ಮೂಲ ಸಚಿವರೂ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್​ಸಿಪಿ)ದ ರಾಜ್ಯಾಧ್ಯಕ್ಷರೂ ಆದ ಜಯಂತ್ ಪಾಟೀಲ್​ಗೆ ಕರೋನಾ ಸೋಂಕು ತಗುಲಿದೆ. ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಪಾಟೀಲ್, ತಾವು ಸೂಕ್ತ ವೈದ್ಯಕೀಯ ಸಲಹೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಈ ಕರೊನಾ ವೈರಸ್​ ಹೆಚ್ಚೂಕಡಿಮೆ ಹತ್ತು ವರ್ಷ ಕಾಡುತ್ತಂತೆ, ಜಗತ್ತನ್ನೇ ಗುಡಿಸಿ ಹಾಕುತ್ತಂತೆ!
ಕಳೆದ ಕೆಲವು ದಿನಗಳ ಮುಂಚೆ ಎನ್​ಸಿಪಿಯ ನಾಯಕರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಲು ಆಯೋಜಿಸಲಾಗಿದ್ದ ‘ರಾಷ್ಟ್ರವಾದಿ ಸಂವಾದ್ ಯಾತ್ರಾ’ ಅಂಗವಾಗಿ ಪಾಟೀಲ್ ರಾಜ್ಯದ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇದೀಗ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕಕ್ಕೆ ಬಂದ ಜನರಿಗೆ ರೋಗಲಕ್ಷಣಗಳ ಬಗ್ಗೆ ಗಮನ ವಹಿಸಿ, ಪ್ರತ್ಯೇಕವಾಗಿರುವಂತೆ ಕೋರಿದ್ದಾರೆ. “ನಾನು ಆರಾಮಾಗಿದ್ದೇನೆ” ಎಂದು ಟ್ವೀಟ್ ಮಾಡಿರುವ ಪಾಟೀಲ್, “ನನ್ನ ಕರ್ತವ್ಯಗಳನ್ನು ವೀಡಿಯೋ ಕಾನ್ಫರೆನ್ಸ್ ಮುಖಾಂತರ ಮುಂದುವರಿಸಲಿದ್ದೇನೆ” ಎಂದಿದ್ದಾರೆ.
ಈ ತಿಂಗಳಲ್ಲೇ ಮಹಾರಾಷ್ಟ್ರದ ಸಚಿವರಾದ ಅನಿಲ್ ದೇಶಮುಖ್, ಸತೇಜ್ ಪಾಟೀಲ್ ಮತ್ತು ರಾಜೇಂದ್ರ ಶಿಂಗ್ನೆ ಕರೊನಾ ಪಾಸಿಟೀವ್ ಆಗಿದ್ದರು. ನಾಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೇಶಮುಖ್, ಫೆಬ್ರವರಿ 15 ರಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.(ಏಜೆನ್ಸೀಸ್)
ಕತ್ತಲಾದರೂ ಮನೆಗೆ ಹಿಂತಿರುಗದ ಹೆಣ್ಣುಮಕ್ಕಳು, ಹುಡುಕುತ್ತಾ ಹೊಲಕ್ಕೆ ಹೋದ ಪಾಲಕರಿಗೆ ಕಾದಿತ್ತು ಶಾಕ್!
ಹಳಿಯ ನಡುವೆ ಮಹಿಳೆ- ಆಕೆಯ ಮೇಲೆ ಹಾದುಹೋಯ್ತು ಟ್ರೇನ್‌: ಮುಂದೇನಾಯ್ತು? ಈ ವಿಡಿಯೋ ನೋಡಿ…
ಬಾಲಿವುಡ್ ನಟಿ ದಿಯ ಮಿರ್ಜಾ ಮದುವೆ ಮಾಡಿಸಿದ್ದು ಯಾರು ಗೊತ್ತಾ?!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 − 1 =
Remember me
