ನ್ಯೂಯಾರ್ಕ್:ಭಾರತೀಯ ಮೂಲದ ಅಮೆರಿಕನ್ ಮಣ್ಣು ವಿಜ್ಞಾನಿ ಡಾ. ರತನ್ ಲಾಲ್ ಅವರಿಗೆ ಅಮೆರಿಕದ ಪ್ರತಿಷ್ಠಿತ ವಿಶ್ವ ಆಹಾರ ಪ್ರಶಸ್ತಿ ಲಭಿಸಿದೆ.
ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸುವ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಮಣ್ಣು ಕೇಂದ್ರಿತ ವಿಧಾನವನ್ನು ಅಭಿವೃದ್ಧಿಪಡಿಸಿ ಅದನ್ನು ಮುಖ್ಯವಾಹಿನಿಗೆ ತಂದಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಿಕ್ಕಿದೆ.
ಆಹಾರ ಉತ್ಪಾದನೆಯ ಹೆಚ್ಚಳ ಮತ್ತು ಪೋಷಕಾಂಶಗಳ ಮರುಬಳಕೆ ಕುರಿತು ಸಂಶೋಧನಾ ಕಾರ್ಯದಿಂದ ರತನ್ ಅವರು ಲಕ್ಷಾಂತರ ಸಣ್ಣ ರೈತರಿಗೆ ಸಹಾಯ ಮಾಡಿದ್ದಾರೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.
ಇದನ್ನೂ ಓದಿ:151 ಕೋಟಿ ರೂ. ಇಎಸ್ಐ ಹಗರಣ: ಮಾಜಿ ಸಚಿವನ ಬಂಧನ
500ಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಅನುಕೂಲವಾಗುವಂತಹ ನವೀನ ಮಣ್ಣಿನ ಉಳಿತಾಯ ತಂತ್ರಗಳನ್ನು ಉತ್ತೇಜಿಸಲು ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಇವರು ಶ್ರಮಿಸಿದ್ದಾರೆ.
ಲಾಲ್ ಅವರು 1960ರ ದಶಕದಲ್ಲಿ ಪಂಜಾಬ್ ಕೃಷಿ ವಿಶ್ವವಿದ್ಯಾಲಯ (ಪಿಎಯು) ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದಾರೆ. ಸೆಪ್ಟ್ಯುಜೆನೇರಿಯನ್ ಎಂಎಸ್ ಸ್ವಾಮಿನಾಥನ್ ಪ್ರಶಸ್ತಿ ಮತ್ತು ನಾರ್ಮನ್ ಬೊರ್ಲಾಗ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
“2020 ರ ವಿಶ್ವ ಆಹಾರ ಪ್ರಶಸ್ತಿಯನ್ನು ಸ್ವೀಕರಿಸಿದ ಅಪಾರ ಸಂತೋಷ ಮತ್ತು ಉತ್ಸಾಹವು ಪ್ರಪಂಚದಾದ್ಯಂತದ ರೈತರಿಗೆ ಕೆಲಸ ಮಾಡುವ ಕೃತಜ್ಞತೆ, ಸವಲತ್ತು ಮತ್ತು ಗೌರವದ ಬಗ್ಗೆ ನನಗೆ ನೆನಪಿಸುತ್ತದೆ” ಎಂದು ಲಾಲ್ ಹೇಳಿದರು. ಪ್ರಶಸ್ತಿಯು 1.90 ಕೋಟಿ ನಗದು ಮೊತ್ತವನ್ನು ಒಳಗೊಂಡಿದೆ.(ಏಜೆನ್ಸೀಸ್​)
ಆಗಸ್ಟ್ ಅಂತ್ಯಕ್ಕೆ ಹೆಚ್ಚಲಿದೆ ಕರೊನಾ ಸೋಂಕಿತರ ಸಂಖ್ಯೆ; ಸಚಿವ ಡಾ.ಸುಧಾಕರ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 14 =
Remember me
