ನವದೆಹಲಿ:ಸಾಮಾನ್ಯ ಮುಂಗಾರು ನಿರೀಕ್ಷೆಗಳು ಮತ್ತು ಇದುವರೆಗೆ ತಿಳಿದಿರುವ ಯಾವುದೇ ಜಾಗತಿಕ ಅಪಾಯಗಳ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 7ಕ್ಕಿಂತ ಹೆಚ್ಚಾಗಲಿದ್ದು, ಶೇ. 7.5ಕ್ಕೆ ಸಮೀಪಸಬಹುದಾಗಿದೆ ಎಂದು ಆರ್ಥಿಕ ಚಿಂತಕರ ಚಾವಡಿ ಎನ್​ಸಿಎಇಆರ್​ ತನ್ನ ಮಾಸಿಕ ವಿಮರ್ಶೆಯಲ್ಲಿ ಹೇಳಿದೆ.
“2024-25 ರ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ಶೇ. 7ಕ್ಕಿಂತ ಹೆಚ್ಚು ಮತ್ತು ಶೇ 7.5ಕ್ಕೆ ಹತ್ತಿರವಾಗಬಹುದು” ಎಂದು ಎನ್​ಸಿಎಇಆರ್​ ಮಹಾ ನಿರ್ದೇಶಕಿ ಪೂನಂ ಗುಪ್ತಾ ಹೇಳಿದ್ದಾರೆ. ಮೊದಲ ತ್ರೈಮಾಸಿಕದಲ್ಲಿ ಕಂಡುಬಂದ ಆರ್ಥಿಕ ಚಟುವಟಿಕೆಯಲ್ಲಿನ ಹೆಚ್ಚಳ, ಹೂಡಿಕೆ, ಬೆಳವಣಿಗೆ, ಸ್ಥೂಲ ಆರ್ಥಿಕ ಸ್ಥಿರತೆ ಮತ್ತು ಸಾಮಾನ್ಯ ಮುಂಗಾರು ನಿರೀಕ್ಷೆಗಳ ಮೇಲೆ ತೀಕ್ಷ್ಣವಾದ ನೀತಿ ಗಮನಹರಿಸುವಿಕೆಯನ್ನು ಈ ಅಂದಾಜು ಆಧರಿಸಿದೆ ಎಂದು ಗುಪ್ತಾ ತಿಳಿಸಿದ್ದಾರೆ.
ಹಣದುಬ್ಬರವು ಉತ್ತುಂಗಕ್ಕೇರಿರುವುದರಿಂದ, ವಿತ್ತೀಯ ನೀತಿಯನ್ನು ಇನ್ನಷ್ಟು ಬಿಗಿಗೊಳಿಸುವುದು ಅಸಂಭವವಾಗಿದೆ. ಆಹಾರದ ಬೆಲೆಗಳನ್ನು ಪಳಗಿಸುವುದು ಸವಾಲಾಗಿ ಉಳಿದಿದೆ ಎಂದು ಗುಪ್ತಾ ಹೇಳಿದರು.
ಈ ತಿಂಗಳ ಆರಂಭದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ 2024-25ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ದರವನ್ನು ಶೇ. 7.2ಕ್ಕೆ ನಿಗದಿಪಡಿಸಿದೆ. ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ 12 ತಿಂಗಳ ಕನಿಷ್ಠ ಮಟ್ಟವಾದ ಶೇ. 4.7ಕ್ಕೆ ಇಳಿದಿದೆ. ಆದರೂ ಆಹಾರ ಹಣದುಬ್ಬರವು ಹೆಚ್ಚಿನ ಮಟ್ಟದಲ್ಲಿದೆ.
5ಜಿ ತರಂಗಾಂತರ ಹರಾಜು: ರೂ. 11,300 ಕೋಟಿ ಮೊತ್ತದ ಬಿಡ್‌ಗಳೊಂದಿಗೆ ಮುಕ್ತಾಯ

ಸೆಕ್ಷನ್ 80ಸಿ ಮಿತಿ ಈಗ 1.5 ಲಕ್ಷ ರೂಪಾಯಿ: ಬಜೆಟ್​ನಲ್ಲಿ ಹೆಚ್ಚಳದ ನಿರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
