ಲಂಡನ್ :ಕೇಂಬ್ರಿಡ್ಜ್ ಯೂನಿವರ್ಸಿಟಿಯ ರಸಾಯನಶಾಸ್ತ್ರಜ್ಞರಾದ ಶಂಕರ್ ಬಾಲಸುಬ್ರಮಣಿಯನ್ ಮತ್ತು ಡೇವಿಡ್ ಕ್ಲೆನರ್ಮನ್ ಅವರನ್ನು ‘2020 ಮಿಲೇನಿಯಮ್ ಟೆಕ್ನಾಲಜಿ ಪ್ರೈಜ್​​’ನ ವಿಜೇತರನ್ನಾಗಿ ಘೋಷಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಈ ಪ್ರತಿಷ್ಠಿತ ಜಾಗತಿಕ ಬಹುಮಾನವನ್ನು ಈ ವಿಜ್ಞಾನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕ್ರಾಂತಿಕಾರಿ ಡಿಎನ್​ಎ ಸೀಖ್ವೆನ್ಸಿಂಗ್ ಟೆಕ್ನೀಕ್​ ‘ಎನ್​​ಜಿಎಸ್​’ಗೆ ನೀಡಲಾಗಿದೆ. ಕರೊನಾ ವೈರಸ್​ನಂಥ ಮಾರಕ ರೋಗಗಳನ್ನುಂಟು ಮಾಡುವ ಜೀವಿಗಳ ಪತ್ತೆ ಮತ್ತು ತಡೆಯಲ್ಲಿ ಈ ತಂತ್ರಜ್ಞಾನ ಬಹೂಪಯೋಗಿಯಾಗಿದೆ ಎನ್ನಲಾಗಿದೆ.
ಈ ಬಹುಮಾನವನ್ನು ಟೆಕ್ನಾಲಜಿ ಅಕಾಡೆಮಿ ಫಿನ್​ಲ್ಯಾಂಡ್​ (ಟಿಎಎಫ್​) 2004 ರಿಂದ 2 ವರ್ಷಕ್ಕೊಮ್ಮೆ ಸಮಾಜದ ಒಳಿತಿಗೆ ಕೊಡುಗೆ ನೀಡುವ ಕ್ರಾಂತಿಕಾರಿ ಅನ್ವೇಷಣೆಗಳಿಗೆ ನೀಡುತ್ತಾ ಬಂದಿದ್ದು, 1 ಮಿಲಿಯನ್ ಯೂರೋಗಳ ಮೌಲ್ಯ ಹೊಂದಿದೆ. ಕರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತಡವಾಗಿ ಘೋಷಿಸಲ್ಪಟ್ಟ ಬಹುಮಾನವನ್ನು ನಿನ್ನೆ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಫಿನ್​ಲ್ಯಾಂಡ್​ ರಿಪಬ್ಲಿಕ್​ನ ಅಧ್ಯಕ್ಷ ಸೌಲಿ ನೀನಿಸ್ಟೊ ಅವರು ಪ್ರದಾನಿಸಿದ್ದಾರೆ.
ಇದನ್ನೂ ಓದಿ:ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಕಾಳಿ ನದಿ ನೀರಲ್ಲಿ ಕೊಚ್ಚಿಹೋಗಿದ್ದ ವೃದ್ಧ 3 ದಿನ ಹೋರಾಡಿ ಸಾವನ್ನೇ ಗೆದ್ದ!
ಭಾರತ ಮೂಲದ ಬ್ರಿಟಿಷ್ ಆದ ಮೆಡಿಸಿನಲ್ ಖೆಮಿಸ್ಟ್ರಿ ಪ್ರೊಫೆಸರ್​ ಬಾಲಸುಬ್ರಮಣಿಯನ್ ಮತ್ತು ಬ್ರಿಟಿಷ್​ ಬಯೋಫಿಸಿಕಲ್ ಖೆಮಿಸ್ಟ್​ ಆದ ಕ್ಲೆನರ್​ಮನ್​ ಅವರು ಸೊಲೆಕ್ಸಾ-ಇಲ್ಯುಮಿನ ನೆಕ್ಸ್ಟ್​ ಜನರೇಷನ್ ಡಿಎನ್​ಎ ಸೀಖ್ವೆನ್ಸಿಂಗ್ (ಎನ್​ಜಿಎಸ್​)ಅನ್ನು ಅನ್ವೇಷಿಸಿದ್ದಾರೆ. ಈ ತಂತ್ರಜ್ಞಾನವು ವೇಗವಾದ, ನಿಖರವಾದ, ಕಡಿಮೆ-ವೆಚ್ಚದ ಮತ್ತು ದೊಡ್ಡ-ಪ್ರಮಾಣದ ಜೀನೋಮ್ ಸೀಖ್ವೆನ್ಸಿಂಗ್​ ಮಾಡಲು ಅನುವು ಮಾಡಿಕೊಡುತ್ತದೆ. ಇದನ್ನು ಕರೊನಾ ವೈರಸ್​​ನ ರೂಪಾಂತರಗಳನ್ನು ಪತ್ತೆ ಹಚ್ಚುವಲ್ಲಿ ಬಳಸಲಾಗುತ್ತಿದೆ ಎನ್ನಲಾಗಿದೆ.
ಜೀವಿಗಳ ಸಂಪೂರ್ಣ ಡಿಎನ್‌ಎ ಅನುಕ್ರಮವನ್ನು ಅತಿ ವೇಗದಲ್ಲಿ ಓದಲು ಅವಕಾಶ ಮಾಡಿಕೊಡುವ ಈ ಪ್ರಕ್ರಿಯೆಯು ಕರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕವಾಗಿ ಹೊರಹೊಮ್ಮಿದೆ. ಸದರಿ ತಂತ್ರಜ್ಞಾನವು ಕರೋನವೈರಸ್​ನ ಸೀಖ್ವೆಂಸ್​ಅನ್ನು ಕಂಡುಹಿಡಿಯಲು ಸಹಾಯ ಮಾಡಿ, ಲಸಿಕೆಗಳ ರಚನೆಗೆ ಅನುವು ಮಾಡಿಕೊಟ್ಟಿದೆ ಮತ್ತು ವೈರಸ್​​ನ ಹೊಸ ರೂಪಾಂತರಗಳನ್ನು ಗುರುತಿಸಲು ಸಹಾಯ ಮಾಡುತ್ತಿದೆ ಎಂದು ಟಿಎಎಫ್​​ನ ಪ್ರೊಫೆಸರ್ ಮಾರ್ಜಾ ಮಾಕರೋವ್ ವಿವರಿಸಿದ್ದಾರೆ.(ಏಜೆನ್ಸೀಸ್)
ಕೋವಿಡ್​ ಡ್ಯೂಟಿಯಲ್ಲಿದ್ದ ಶಿಕ್ಷಕರ ಸಾವು : ಅವಲಂಬಿತರಿಗೆ ಉದ್ಯೋಗ, ಇತರ ಸವಲತ್ತು

‘ರಾಧೆ ಪೈರೆಸಿಯಲ್ಲಿ ತೊಡಗಬೇಡಿ, ತೊಂದರೆಗೆ ಸಿಲುಕುತ್ತೀರಿ’ ಎಂದ ಸಲ್ಮಾನ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two − one =
Remember me
