ಇಂಡೋನೇಷ್ಯಾ:ದೇಶದ ಮುಖ್ಯ ದ್ವೀಪದಲ್ಲಿರುವ ಶಾಲೆಯೊಂದು ಹನ್ನೆರಡಕ್ಕೂ ಹೆಚ್ಚು ವಿದ್ಯಾರ್ಥಿನಿಯರ ತಲೆಯನ್ನು ಅರೆ ಬೋಳಿಸಿರುವುದಾಗಿ ಶಾಲೆಯ ಮುಖ್ಯೋಪಾಧ್ಯಾಯರು ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿನಿಯರು ತಮ್ಮ ಇಸ್ಲಾಮಿಕ್ ಶಿರಸ್ತ್ರಾಣವನ್ನು ತಪ್ಪಾಗಿ ಧರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ. ಘಟನೆಯ ನಂತರ ಇಂಡೋನೇಷ್ಯಾದ ಸಂಪ್ರದಾಯವಾದಿ ಪ್ರದೇಶಗಳಲ್ಲಿ ಮುಸ್ಲಿಂ ಮತ್ತು ಮುಸ್ಲಿಮೇತರ ಹುಡುಗಿಯರಿಗೆ ಕಡ್ಡಾಯವಾದ ಡ್ರೆಸ್ ಕೋಡ್‌ಗಳು, ವಿಶೇಷವಾಗಿ ಹಿಜಾಬ್‌ನ ಸುತ್ತ ನಡೆಯುತ್ತಿರುವ ಚರ್ಚೆ ಬೆಳಕಿಗೆ ತಂದಿದೆ.
ಕ್ಷಮೆಯಾಚಿಸಿದ ಮುಖ್ಯೋಪಾಧ್ಯಾಯರುಪೂರ್ವ ಜಾವಾದ ಲಾಮೊಂಗನ್ ಪಟ್ಟಣದಲ್ಲಿರುವ ಸರ್ಕಾರಿ ಸ್ವಾಮ್ಯದ ಜೂನಿಯರ್ ಹೈಸ್ಕೂಲ್ SMPN 1 ನಲ್ಲಿ ಈ ಘಟನೆ ನಡೆದಿದೆ. ಹದಿನಾಲ್ಕು ಮುಸ್ಲಿಂ ಹುಡುಗಿಯರಿಗೆ ಶಿಕ್ಷಕರು ಕಳೆದ ಬುಧವಾರ ಕೂದಲನ್ನು ಅರೆ ಬೋಳಿಸಿದ್ದಾರೆ. ಘಟನೆಯ ನಂತರ ಹಾರ್ಟೊ ಎಂಬ ಮುಖ್ಯೋಪಾಧ್ಯಾಯರು, ಶಾಲೆಯು ಸಂಬಂಧಪಟ್ಟ ಶಿಕ್ಷಕರನ್ನು ಅಮಾನತುಗೊಳಿಸುವ ಮೂಲಕ ಕ್ರಮ ಕೈಗೊಂಡಿದೆ ಮತ್ತು ಬಾಲಕಿಯರ ಪೋಷಕರ ಬಳಿ ಕ್ಷಮೆಯಾಚಿಸಿದೆ ಎಂದು ಬಹಿರಂಗಪಡಿಸಿದ್ದಾರೆ.
ಘಟನೆಗೆ ಮೂಲ ಕಾರಣ…ಘಟನೆಗೆ ಮೂಲ ಕಾರಣವೆಂದರೆ ಹುಡುಗಿಯರು ಸ್ಕಾರ್ಫ್‌ಗಳ ಕೆಳಗೆ ಒಳ ಟೋಪಿಗಳನ್ನು ಧರಿಸದಿರುವುದು. ಇದರ ಪರಿಣಾಮವಾಗಿ ಅವರ ಕೂದಲು ಗೋಚರಿಸುತ್ತದೆ ಎನ್ನಲಾಗಿದೆ. ವಿದ್ಯಾರ್ಥಿನಿಯರಿಗೆ ಹಿಜಾಬ್‌ಗಳನ್ನು ಧರಿಸಲು ಯಾವುದೇ ಕಡ್ಡಾಯ ನಿಯಮ ಇಲ್ಲದಿದ್ದರೂ, ಅಚ್ಚುಕಟ್ಟಾಗಿ ಕಾಣಿಸಿಕೊಳ್ಳಲು ಕ್ಯಾಪ್‌ಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ ಎಂದು ಹಾರ್ಟೊ ಸ್ಪಷ್ಟಪಡಿಸಿದ್ದಾರೆ. ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮುಖ್ಯೋಪಾಧ್ಯಾಯರು, ಪೋಷಕರೊಂದಿಗೆ ಮಧ್ಯಸ್ಥಿಕೆ ಮಾಡಿ, ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿರುವುದು ವರದಿಯಾಗಿದೆ.
ಈ ಘಟನೆಯು ಶಾಲೆಗಳಲ್ಲಿ ಧಾರ್ಮಿಕ ಉಡುಪುಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಮಾನವ ಹಕ್ಕುಗಳ ವಕೀಲರು ಇಂತಹ ಶಿಕ್ಷಕರನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ವಿದ್ಯಾರ್ಥಿಗಳಿಗೆ ಭಯದ ವಾತಾವರಣವನ್ನು ಸೃಷ್ಟಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹ್ಯೂಮನ್ ರೈಟ್ಸ್ ವಾಚ್‌ನ ಇಂಡೋನೇಷ್ಯಾ ಸಂಶೋಧಕ ಆಂಡ್ರಿಯಾಸ್ ಹರ್ಸೊನೊ, ಶಿಕ್ಷಕರು ಇಂತಹ ಕ್ರಮಗಳನ್ನು ತೆಗೆದುಕೊಳ್ಳುವ ನಿದರ್ಶನಗಳು ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಹೇಳಿದ್ದಾರೆ.
ಡ್ರೆಸ್ ಕೋಡ್ ನಿಯಮಗಳನ್ನು ಪಾಲಿಸದ ಕಾರಣ ಕೆಲವು ಶಾಲಾಮಕ್ಕಳು ತಮ್ಮ ಹಿಜಾಬ್‌ಗಳನ್ನು ಕತ್ತರಿಸುವುದು ಅಥವಾ ದಂಡ ಕೊಡುವುದು ಸೇರಿದಂತೆ ಶಿಸ್ತಿನ ಕ್ರಮಗಳನ್ನು ಎದುರಿಸಿದ್ದಾರೆ ಎಂದು 2021 ರ ಹಿಂದಿನ ವರದಿಗಳು ಸೂಚಿಸಿವೆ. ಸದ್ಯದ ಘಟನೆ ಇಂಡೋನೇಷ್ಯಾದಲ್ಲಿ ಧಾರ್ಮಿಕ ಸಹಿಷ್ಣುತೆಯ ಬಗ್ಗೆ ಕಳವಳವನ್ನು ಎತ್ತಿ ತೋರಿಸಿದೆ.
ಗೀತಿಕಾ ಶ್ರೀವಾಸ್ತವ ಯಾರು?, ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಮುಖ್ಯಸ್ಥರಾಗಿರುವ ಮೊದಲ ಮಹಿಳಾ IFS ಅಧಿಕಾರಿಯ ಮಾಹಿತಿ ಇಲ್ಲಿದೆ ನೋಡಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 5 =
Remember me
