ಟೊರೊಂಟೊ:ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯು ಮೂವರು ಭಾರತೀಯ ಪ್ರಜೆಗಳ ಬಂಧನಕ್ಕೆ ಮಾತ್ರ ಸೀಮಿತವಾಗಿಲ್ಲ ಇನ್ನೂ ಮುಂದುವರೆದಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.
ಇದನ್ನೂ ಓದಿ:ತೇಜಸ್ವಿ ಸೂರ್ಯ “ಗೂಂಡಾಗಿರಿ” ಮಾಡ್ತಾರೆ, ಮೀನು ತಿನ್ತಾರೆ ಎಂದ ಕಂಗನಾ..ವಿಷಯ ಏನು ಗೊತ್ತಾ?
ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮೂವರು ಭಾರತೀಯ ಪ್ರಜೆಗಳನ್ನು ಇತ್ತೀಚೆಗೆ ಬಂಧಿಸಿದ ನಂತರ ಕೆನಡಾ ಪ್ರಧಾನಿ ಹೇಳಿಕೆ ಹೊರಬಂದಿವೆ. ಭಾನುವಾರ(ಮೇ 5) ರಾಯಲ್ ಒಂಟಾರಿಯೊ ಮ್ಯೂಸಿಯಂನಲ್ಲಿ ನಡೆದ ಸಿಖ್ ಫೌಂಡೇಶನ್ ಆಫ್ ಕೆನಡಾದ ಶತಮಾನೋತ್ಸವ ಗಾಲಾ ಸಮಾರಂಭದಲ್ಲಿ ಟ್ರೂಡೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿದ ಬಂಧನಗಳನ್ನು ಅಂಗೀಕರಿಸುವ ಮೂಲಕ ಮಾತು ಪ್ರಾರಂಭಿಸಿದರು, ತನಿಖೆ ಮುಂದುವರೆದಿದೆ ಎಂದು ಒತ್ತಿ ಹೇಳಿದರು.
ಭಾರತ ಸರ್ಕಾರವು ಬಂಧಿತರಿಗೆ ಇರುವ ಗ್ಯಾಂಗ್ ಸಂಪರ್ಕಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಟ್ರುಡೊ ಹೇಳಿಕೆ ಮಹತ್ವಪಡೆದುಕೊಂಡಿದೆ. ತನಿಖೆಯ ಮಧ್ಯೆ ನಿಜ್ಜರ್ ಹತ್ಯೆಯಲ್ಲಿ ಬಂಧಿತರಾಗಿರುವ ಮೂವರ ಛಾಯಾಚಿತ್ರಗಳನ್ನು ಕೆನಡಾದ ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದರು.
ಕೆನಡಾದ ಮಾಧ್ಯಮಗಳಲ್ಲಿ ಊಹಾಪೋಹಗಳು ವರದಿಯಾದಂತೆ ಭಾರತ ಸರ್ಕಾರ ಅಥವಾ ಅಧಿಕಾರಿಗಳೊಂದಿಗೆ ಬಂಧಿತರಿಗೆ ಇರುವ ಯಾವುದೇ ಸಂಪರ್ಕದ ಬಗ್ಗೆ ಕೆನಡಾ ಪೊಲೀಸರು ಯಾವುದೇ ಪುರಾವೆಗಳನ್ನು ನೀಡಿಲ್ಲ. ಭಾರತವು ಪದೇ ಪದೇ ಆರೋಪಗಳನ್ನು ನಿರಾಕರಿಸಿದೆ, ಅವುಗಳನ್ನು “ಅಸಂಬದ್ಧ ಮತ್ತು ಪ್ರೇರಿತ” ಎಂದು ಬಣ್ಣಿಸಿದೆ.
ಸದೃಢ ಮತ್ತು ಸ್ವತಂತ್ರ ನ್ಯಾಯ ವ್ಯವಸ್ಥೆ ಹೊಂದಿರುವ ರಾಷ್ಟ್ರ ನಮ್ಮದು. ಇದರ ಜೊತೆಗೆ ನಮ್ಮ ಎಲ್ಲಾ ನಾಗರಿಕರನ್ನು ರಕ್ಷಿಸುವ ಮೂಲಭೂತ ಬದ್ಧತೆ ನಮ್ಮ ಮೇಲಿದೆ. ಅನೇಕ ಕೆನಡಿಯನ್ನರು, ವಿಶೇಷವಾಗಿ ಸಿಖ್ ಸಮುದಾಯದ ಸದಸ್ಯರು ಅಸಮರ್ಥತೆಯನ್ನು ಅನುಭವಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ. ಬಹುಶಃ ಇದೀಗ ಭಯಭೀತರಾಗಿದ್ದಾರೆ ಎಂದು ಟ್ರುಡೊ ಹೇಳಿದರು.
ನಿಜ್ಜಾರ್ ಹತ್ಯೆ ಪ್ರಕರಣದ ಬಂಧಿತರಿಗಿದೆ ಗ್ಯಾಂಗ್​ಗಳ ಸಂಪರ್ಕ: ಜೈಶಂಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + eighteen =
Remember me
