ರಾಯ್‌ಪುರ:ಆದಾಯಕ್ಕೆ ಮೀರಿದ ಆಸ್ತಿಗಳನ್ನು ಹೊಂದಿದ ಆರೋಪದ ಮೇಲೆ ಕೆಲವು ದಿನಗಳ ಹಿಂದೆ ಸಸ್ಪೆಂಡ್​ ಆದ ಛತ್ತೀಸಗಡದ ಐಪಿಎಸ್​ ಅಧಿಕಾರಿ ಜಿ.ಪಿ.ಸಿಂಗ್​ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮತ್ತು ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯೂ) ನಡೆಸಿದ ದಾಳಿಗಳಲ್ಲಿ ಲಭ್ಯವಾಗಿರುವ ಕೆಲವು ದಾಖಲಾತಿಗಳ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಎಸಿಬಿ ಮತ್ತು ಇಒಡಬ್ಲ್ಯೂನ ಎಡಿಜಿಯಾಗಿದ್ದ 1994ರ ಬ್ಯಾಚ್ ಅಧಿಕಾರಿಯಾದ ಸಿಂಗ್, ಜುಲೈ 5 ರಂದು ಅಮಾನತುಗೊಂಡಾಗ, ರಾಜ್ಯ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜುಲೈ 1 ರಿಂದ 3 ನೇ ತಾರೀಖಿನವರೆಗೆ ಸಿಂಗ್​ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಎಸಿಬಿ ಮತ್ತು ಇಒಡಬ್ಲ್ಯೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಸಿಂಗ್​, ಸುಮಾರು 10 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಹೊಂದಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಪ್ರೀತಿ-ಪ್ರಣಯಕ್ಕೆ ತಿರುಗಿದ ಮಿಸ್ಡ್​ ಕಾಲ್​ ಪರಿಚಯ! ಮುಂದ್ದಾಗಿದ್ದೆಲ್ಲವೂ ದುರಂತ
ದಾಳಿಯಲ್ಲಿ ಸರ್ಕಾರದ ವಿರುದ್ಧ ದ್ವೇಷ ಮತ್ತು ಸಂಚು ನಡೆಸುವಂಥ ದಾಖಲಾತಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 124ಎ(ದೇಶದ್ರೋಹ) ಮತ್ತು 153ಎ(ವಿವಿಧ ಗುಂಪುಗಳ ಜನರಲ್ಲಿ ವೈಷಮ್ಯ ಹರಡುವುದು) ಅಡಿಯಲ್ಲಿ ರಾಯ್ಪುರದ ನಗರ ಕೋತ್ವಾಲಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ ಎಸ್​​ಎಸ್ಪಿ ಅಜಯ್ ಯಾದವ್ ತಿಳಿಸಿದ್ದಾರೆ. ಮುಂದಿನ ತನಿಖೆ ಆರಂಭವಾಗಿದೆ ಎಂದಿದ್ದಾರೆ.
ಜಿ.ಪಿ.ಸಿಂಗ್​ ಅವರ ರಾಯಪುರದ ಪೆನ್ಷನ್ ಬಾಡಾ ನಿವಾಸದಲ್ಲಿ ಮನೆಯಲ್ಲಿ ಸಿಕ್ಕ ಕೆಲವು ಹರಿದುಹಾಕಿದ ಕಾಗದಗಳಲ್ಲಿ ಗಂಭೀರವಾದ ಆಕ್ಷೇಪಾರ್ಹ ವಿಚಾರಗಳು ಬರೆಯಲ್ಪಟ್ಟಿದ್ದವು. ಅವರ ಸಹಚರ ಮಣಿ ಭೂಷಣ್​ ಎಂಬುವರ ಮನೆಯಲ್ಲಿ 5 ಪುಟಗಳ ದಾಖಲಾತಿ ಸಿಕ್ಕಿದ್ದು, ಸರ್ಕಾರದ ವಿರುದ್ಧ ರೋಷಭರಿತವಾದ ಮಾತುಗಳು ಮತ್ತು ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಉದ್ರೇಕಕಾರಿ ಸಾಮಗ್ರಿ ಮುದ್ರಿತವಾಗಿತ್ತು ಎನ್ನಲಾಗಿದೆ.(ಏಜೆನ್ಸೀಸ್)
ಭಾರತಕ್ಕೆ ಅಮೆರಿಕದ ಹೊಸ ಅಂಬಾಸಿಡರ್​ ಆಗಲು ಲಾಸ್​ಏಂಜಲೀಸ್​ ಮೇಯರ್​ ಎರಿಕ್ ಎಂ.ಗಾರ್ಸೆಟ್ಟಿ ಹೆಸರು

ಜುಲೈ 12, 13 ರಂದು ರೆಡ್ ಅಲರ್ಟ್! ಕರಾವಳಿ, ಮಲೆನಾಡಲ್ಲಿ ಹೆಚ್ಚು ಮಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
