ಮುಂಬೈ:ಇಡೀ ಜಗತ್ತನ್ನೇ ಕಾಡಿದ ಮಹಾಮಾರಿ ಕರೊನಾ ಸಾಂಕ್ರಮಿಕ ಭೀತಿಯ ನಡುವೆಯೂ ಇಂಡಿಯನ್ ಸೂಪರ್ ಲೀಗ್​ ಯಾವುದೇ ತಡೆಯಿಲ್ಲದೆ ಯಶಸ್ವಿಯಾಗಿರುವುದಕ್ಕೆ ಫುಟ್​ಬಾಲ್​ ಸ್ಪೋರ್ಟ್ಸ್​ ಡೆವೆಲಪ್ಮೆಂಟ್​ ಲಿಮಿಟೆಡ್​ (ಎಫ್​ಎಸ್​ಡಿಎಲ್​) ಮುಖ್ಯಸ್ಥೆ ನೀತಾ ಅಂಬಾನಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಫರ್ಟೋಡ ಸ್ಟೇಡಿಯಂನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ತಂಡ 2-1 ಗೋಲುಗಳಿಂದ ಎಟಿಕೆ ಮೋಹನ್ ಬಾಗನ್ ತಂಡವನ್ನು ಸೋಲಿಸಿತು. ಈ ಮೂಲಕ ಮೊದಲ ಬಾರಿಗೆ ಮುಂಬೈ ಸಿಟಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಏಳನೇ ಆವೃತ್ತಿ ಐಎಸ್​ಎಲ್​ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಕ್ರೀಡೆಯ ನಿಜವಾದ ಶಕ್ತಿ ಮತ್ತು ಫುಟ್​ಬಾಲ್​ನ ನೈಜ ವೈಭವಕ್ಕೆ ಸೀಸನ್ 7 ಗೌರವವಾಗಿದೆ. ಕರೊನಾ ಕಾಲದಲ್ಲಿ ಭಾರತದಲ್ಲಿ ನಡೆದ ಮೊದಲ, ದೀರ್ಘ ಮತ್ತು ಅತ್ಯಂತ ಯಶಸ್ವಿ ಕ್ರೀಡಾಕೂಟ ನಮ್ಮದು ಎಂಬ ಹೆಮ್ಮೆ ನನಗಿದೆ ಎಂದು ಸೀಸನ್​ನ ಫಿನಾಲೆಗೂ ಮುನ್ನ ನೀತಾ ಅವರು ವಿಡಿಯೋ ಸಂದೇಶದಲ್ಲಿ ಮಾತನಾಡಿದರು.
ಇದನ್ನೂ ಓದಿರಿ:ಯಾರೀ ಸುಂದರಿ? ಟಿ20 ಪಂದ್ಯದ ಸೋಲಿನ ನೋವು ಮರೆಸಿದ ಬ್ಯೂಟಿ ಹಿಂದೆ ಬಿದ್ದ ನೆಟ್ಟಿಗರು!
ಫುಟ್ಬಾಲ್ ಆಟಗಾರರು, ಬೆಂಬಲ ಸಿಬ್ಬಂದಿ, ಕ್ಲಬ್ ಮತ್ತು ಲೀಗ್ ನಿರ್ವಹಣೆ ಮತ್ತು ಪ್ರಸಾರ ಸಿಬ್ಬಂದಿ ಸೇರಿದಂತೆ ಸುಮಾರು 1600 ಜನರನ್ನು 6 ತಿಂಗಳ ಅವಧಿಯಲ್ಲಿ ಕಟ್ಟುನಿಟ್ಟಾದ ಬಯೋ ಬಬಲ್​ನಲ್ಲಿ ಇರಿಸಲಾಗಿದೆ. ಇದರ ಜತೆಗೆ ಲೀಗ್​ನಲ್ಲಿ 70,000 ಆರ್‌ಟಿಪಿಸಿಆರ್ ಪರೀಕ್ಷೆಗಳು ನಡೆಸಲಾಗಿದೆ. 2020ರ ನವೆಂಬರ್ 20 ರಂದು ಪ್ರಾರಂಭವಾದ ಐಎಸ್ಎಲ್ ಸೀಸನ್ 7, 11 ಕ್ಲಬ್​ಗಳೊಂದಿಗೆ ನಾಲ್ಕು ತಿಂಗಳು ನಿರಂತರವಾಗಿ ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಎಂದರು.
https://twitter.com/VVani4U/status/1370935052293443584?s=20
ಸಂಪೂರ್ಣ ಸೀಸನ್​ ಅನ್ನು ಕಟ್ಟುನಿಟ್ಟಾದ ಬಯೋ ಬಬಲ್​ ಸುರಕ್ಷತಾ ಪ್ರೋಟೋಕಾಲ್‌ಗಳ ಅಡಿಯಲ್ಲಿ ಗೋವಾದ ಮೂರು ಕ್ರೀಡಾಂಗಣಗಳಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ಐಎಸ್​ಎಲ್​ ನಡೆಯಿತು.
ರಿಲಯನ್ಸ್ ಗುಂಪಿನ ಅಂಗಸಂಸ್ಥೆಯಾದ ಎಫ್‌ಎಸ್‌ಡಿಎಲ್ ಐಎಸ್‌ಎಲ್ ಅನ್ನು ನಿರ್ವಹಿಸುತ್ತದೆ ಮತ್ತು ನಡೆಸುತ್ತದೆ.(ಏಜೆನ್ಸೀಸ್​)
ಮುಂಬೈ ಸಿಟಿ ತಂಡಕ್ಕೆ ಐಎಸ್‌ಎಲ್ ಕಿರೀಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − one =
Remember me
