ಪಿಥೋರ್​ಗಡ್​: ಇಂಡೋ ಟಿಬೆಟಿಯನ್​ ಬಾರ್ಡರ್​ ಪೊಲೀಸ್​ ಗಸ್ತುಪಡೆಯ ಸೈನಿಕರು ಓರ್ವನ ಮೃತ ದೇಹ ಹೊತ್ತುಕೊಂಡು ಬರೋಬ್ಬರಿ 8 ತಾಸು ನಡೆದಿದ್ದಾರೆ.
ಮೃತನ ಕುಟುಂಬಕ್ಕೆ ದೇಹವನ್ನು ಒಪ್ಪಿಸಬೇಕು ಎಂಬ ಕಾರಣಕ್ಕೆ 25 ಕಿಮೀ ದೂರ ಅದನ್ನು ಹೊತ್ತು ಕ್ರಮಿಸಿದ್ದಾರೆ. ಉತ್ತರಖಾಂಡದ ಪಿಥೋರ್​​ಗಡ್​ನ ಬಾಗ್ದಾಯರ್​ ಬಳಿಯ ಸ್ಯುನಿ ಗ್ರಾಮದಲ್ಲಿ ಕಲ್ಲುಗಳ ಸ್ಫೋಟದಿಂದ 30 ವರ್ಷದ ಯುವಕನೋರ್ವ ಮೃತಪಟ್ಟಿದ್ದ. ಅದನ್ನು ಸ್ಥಳೀಯರು ಐಟಿಬಿಪಿ ಸಿಬ್ಬಂದಿಗೆ ತಿಳಸಿದ್ದಾರೆ. ಕೂಡಲೇ ಅಲ್ಲಿಗೆ ಹೋದ ಸೈನಿಕರು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಆತ ಮುನ್ಸಿಯಾರಿ ಗ್ರಾಮದವನು ಎಂಬ ವಿಚಾರ ತಿಳಿದರೂ ಸಿಕ್ಕಾಪಟೆ ಮಳೆಯಾಗುತ್ತಿರುವ ಕಾರಣ ವಾಹನ ಸಂಚಾರ ಸಾಧ್ಯವಾಗುತ್ತಿರಲಿಲ್ಲ. ವಾಹನ ಬರುವ ದಾರಿಗಳೆಲ್ಲ ಬಂದ್​ ಆಗಿದ್ದವು. ಹೀಗಾಗಿ ಸೈನಿಕರು ಸ್ಟ್ರೆಚರ್​​​ನಲ್ಲಿ ಶವವನ್ನು ಮಲಗಿಸಿ, 25 ಕಿ.ಮೀ.ದೂರದ ಹಳ್ಳಿಗೆ ಹೋಗಿ, ಕುಟುಂಬಕ್ಕೆ ಒಪ್ಪಿಸಿದ್ದಾರೆ.ಇದನ್ನೂ ಓದಿ:ನಾಡಹಬ್ಬ ದಸರಾ ಆಚರಣೆಗೆ ಹೆಚ್ಚಿದ ಒತ್ತಡ: ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿದೆ ಸಭೆ
ಮುನ್ಸಿಯಾರಿಗೆ ಹೋಗುವ ದಾರಿ ತುಂಬ ದುರ್ಗಮವಾಗಿದೆ. ದಾರಿಯುದ್ಧಕ್ಕೂ ಕಲ್ಲು ಬಂಡೆಗಳು..ಕೊರಕಲು ತುಂಬಿದೆ. ಅಷ್ಟಾದರೂ ಸುಮಾರು 8 ಯೋಧರು 25 ಕಿಮೀ ನಡೆದಿದ್ದಾರೆ. (ಏಜೆನ್ಸೀಸ್)
#WATCHUttarakhand: ITBP jawans carried the body of a local for 8 hrs & walked a distance of 25 kms to reach Munsyari from Syuni village, in remote area of Pithoragarh district, to hand it over to his family, on 30th Aug. The local had died due to shooting stones. (Source: ITBP)pic.twitter.com/KOuatrzAaV
— ANI (@ANI)September 2, 2020

ನಟನಿಗೆ ಹುಟ್ಟುಹಬ್ಬದ ವಿಷ್‌ ಮಾಡಹೋಗಿ ಜೀವ ಕಳೆದುಕೊಂಡ ಅಭಿಮಾನಿಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − eleven =
Remember me
