ಚೆನ್ನೈ:ನಟ-ರಾಜಕಾರಣಿ ಕಮಲ್ ಹಾಸನ್ ಅವರ ‘ಮಕ್ಕಳ್ ನೀಧಿ ಮೈಯಂ’ ಪಕ್ಷ ಶನಿವಾರ ಅಧಿಕೃತವಾಗಿ ‘INDIA’ ಗೆ ಸೇರಿದ್ದಾರೆ. ವರದಿಗಳ ಪ್ರಕಾರ ರಾಜ್ಯದ ದೊಡ್ಡ ಮೈತ್ರಿ ಪಾಲುದಾರ ಡಿಎಂಕೆ, ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಮಾಡಿಕೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 9 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ರಾಮೇಶ್ವರಂ ಕೆಫೆ ಸ್ಫೋಟ: ಶಂಕಿತನ ಹೊಸ ಫೋಟೋ ಬಿಡುಗಡೆ ಮಾಡಿದ ಎನ್‌ಐಎ
ಕಮಲ್​ ಹಾಸನ್ ಅವರು ಶನಿವಾರ ಚೆನ್ನೈನಲ್ಲಿರುವ ಡಿಎಂಕೆ ಕಚೇರಿಗೆ ಆಗಮಿಸಿ ಸಚಿವ ಉದಯನಿಧಿ ಸ್ಟಾಲಿನ್ ಅವರೊಂದಿಗೆ ಕಾಣಿಸಿಕೊಂಡರು.
“ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಪಕ್ಷವು ಬೆಂಬಲಿಸುತ್ತದೆ ಮತ್ತು ಪ್ರಚಾರ ಮಾಡುತ್ತದೆ. ರಾಜ್ಯಸಭೆಯಲ್ಲಿ (2025 ರಲ್ಲಿ) ಎಂಎನ್‌ಎಂಗೆ ಒಂದು ಸ್ಥಾನ” ನೀಡಲಾಗಿದೆ ಎಂದು ಡಿಎಂಕೆ ಭೇಟಿಯ ನಂತರ ಎಂಎನ್‌ಎಂ ಪ್ರಧಾನ ಕಾರ್ಯದರ್ಶಿ ಅರುಣಾಚಲಂ ಹೇಳಿದರು.
ಸಂಸದೀಯ ಚುನಾವಣೆಯಲ್ಲಿ ಕಮಲ್​ ಹಾಸನ್ ಅವರ ಪಕ್ಷಕ್ಕೆ ಸಂಭಾವ್ಯ ಸ್ಥಾನಗಳ ಹಂಚಿಕೆಯ ಊಹಾಪೋಹಗಳ ನಡುವೆ, ಡಿಎಂಕೆ 2025 ರ ರಾಜ್ಯಸಭಾ ಚುನಾವಣೆಗೆ ಎಂಎನ್​ಎಂಗೆ ಒಂದು ಸ್ಥಾನವನ್ನು ನೀಡಿತು. ಆಡಳಿತ ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಡಿಎಂಕೆ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿ ಒಪ್ಪಂದವನ್ನು ಮಾಡಿಕೊಂಡರು.
ಒಪ್ಪಂದಕ್ಕೆ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್​ ಹಾಸನ್, ಮೈತ್ರಿಗೆ ಸೇರ್ಪಡೆಗೊಳ್ಳುವ ಕ್ರಮವು ದೇಶದ ಹಿತದೃಷ್ಟಿಯಿಂದ ಮಾಡಲ್ಪಟ್ಟಿದೆಯೇ ಹೊರತು ಯಾವುದೇ ಹುದ್ದೆಯ ಪರಿಗಣನೆಗೆ ಅಲ್ಲ ಎಂದರು.
ಉಭಯ ನಾಯಕರು ಮಾಡಿಕೊಂಡ ತಿಳುವಳಿಕೆಯ ಪ್ರಕಾರ ಎಂಎನ್‌ಎಂ ತಮಿಳುನಾಡಿನ 39 ಲೋಕಸಭಾ ಸ್ಥಾನಗಳು ಮತ್ತು ಪುದುಚೇರಿಯ ಒಂದು ಸ್ಥಾನಕ್ಕೆ ಪ್ರಚಾರ ಸಂಬಂಧಿತ ಕೆಲಸಗಳನ್ನು ಮಾಡಲಿದೆ.
ಆಸ್ಟ್ರೇಲಿಯಾದಲ್ಲಿ ಚಾರಣ ಮಾಡುತ್ತಿದ್ದಾಗ ಜಲಪಾತಕ್ಕೆ ಬಿದ್ದು ಭಾರತೀಯ ಯುವ ವೈದ್ಯೆ ಮೃತ್ಯು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three + 6 =
Remember me
