ಮುಂಬೈ:ಬಾಲಿವುಡ್ ಖ್ಯಾತ ನಟಿ, ಹಿಮಾಚಲ ಪ್ರದೇಶದ ಮಂಡಿಯಿಂದ ಸಂಸತ್ ಸದಸ್ಯೆಯಾಗಿರುವ ಕಂಗನಾ ರಣಾವತ್ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಕಂಗನಾ ರಣಾವತ್ ಅವರ ಹಳೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೆಳ್ಳಿ ಲೋಟದಲ್ಲಿ ನೀರು ಕುಡಿಯುತ್ತಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ನೆಟಿಜನ್‌ಗಳು ಕಿಡಿಕಾರಿದ್ದಾರೆ. ಕಂಗನಾ ರಣಾವತ್ ಅವರು ಬಡವರ ಜೊತೆಗಿದ್ದೇನೆ, ಆದರೆ ಅವರು ಬೆಳ್ಳಿಯ ಕಪ್‌ಗಳಿಂದ ನೀರು ಕುಡಿಯುತ್ತಾರೆ ಎಂದು ಕೆಲವರು ಅವಳನ್ನು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಸಿಲ್ವರ್ ಕಪ್‌ನಲ್ಲಿ ನೀರು ಏಕೆ ಕುಡಿಯುತ್ತಿದ್ದೇನೆ ಎಂದು ಕಂಗನಾ ಈ ಹಿಂದೆಯೇ ಸಂಪೂರ್ಣ ಸ್ಪಷ್ಟನೆ ನೀಡಿದ್ದಾರೆ.
Yes my table maushi ji and that’s my silver glass, my mom says if you feel like kicking someone’s a** take deep breaths, drink water from this silver glass, cause silver represents moon it will calm you down… doing that right now 🙂pic.twitter.com/ncs4t7lhFX
— Kangana Ranaut (@KanganaTeam)March 4, 2021

ಬೆಳ್ಳಿಯ ಲೋಟದ ನೀರು ಕುಡಿದರೆ ರೋಗಗಳು ದೂರವಾಗುತ್ತವೆ. ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹೋಗುತ್ತವೆ. ಸಿಲ್ವರ್ ಕಪ್‌ನಿಂದ ನೀರು ಕುಡಿಯುವುದರಿಂದ ಅನೇಕ ಕಾಯಿಲೆಗಳು ಗುಣವಾಗುತ್ತವೆ ಎಂದು ಕಂಗನಾ ಈ ಹಿಂದೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು.
ಕಂಗನಾ ರಣಾವತ್ ಯಾವಾಗಲೂ ಕೆಲವು ಬಾಲಿವುಡ್ ತಾರೆಯರನ್ನು ಟೀಕಿಸುತ್ತಾರೆ. ಕೆಲ ದಿನಗಳ ಹಿಂದೆ ನಟ ರಣಬೀರ್ ಕಪೂರ್ ಅವರನ್ನು ಕಂಗನಾ ರಣಾವತ್ ಟೀಕಿಸಿದ್ದರು. ಕಂಗನಾ ರಣಾವತ್ ಮಾತು ಕೇಳಿ ಜನ ಕೂಡ ಶಾಕ್ ಆಗಿದ್ದಾರೆ. ಇನ್ನು ಸಿನಿಮಾಗಳಿಗೆ ಬರುವುದಾದರೆ ಕಂಗನಾ ನಿರ್ದೇಶನದ ‘ಎಮರ್ಜೆನ್ಸಿ’ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಜೀವನ ಕಥೆಯನ್ನು ಆಧರಿಸಿ ಕಂಗನಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
VIDEO | ಬಾಡೂಟದ ಬಗ್ಗೆ ರೋಗಿಗಳಿಗೆ ರಸವತ್ತಾಗಿ ತಿಳಿಸಿದ ಸಸ್ಯಹಾರಿ ವೈದ್ಯನಿಗೆ ಮೆಚ್ಚುಗೆ ಸುರಿಮಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 9 =
Remember me
