ಚೆನ್ನೈ:ಕರೊನಾ ವೈರಸ್‌ ಹಿನ್ನೆಲೆಯಲ್ಲಿ ‘ಹಿಂದಿ ಹೇರಿಕೆ’ ಕುರಿತಾಗಿ ನಡೆಯುತ್ತಿದ್ದ ಬಿಸಿಬಿಸಿ ಚರ್ಚೆ ಸದ್ಯ ನಿಂತಿರುವ ಬೆನ್ನಲ್ಲೇ ಇದೀಗ ಡಿಎಂಕೆ ಸಂಸದೆ ಕನಿಮೊಳಿ ಇದರ ಕುರಿತಾಗಿ ಟ್ವೀಟ್‌ ಒಂದನ್ನು ಮಾಡಿದ್ದು, ಮತ್ತೆ ಈ ಚರ್ಚೆ ಶುರುವಾಗಿದೆ.
ಹಿಂದಿ ಹೇರಿಕೆ ಕುರಿತಂತೆ ತಮಗಾಗಿರುವ ಅನುಭವವನ್ನು ಕನಿಮೊಳಿ ಅವರು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡಿಗರೂ ಸೇರಿದಂತೆ ಅನೇಕ ಮಂದಿ ಹಿಂದಿನ ಹೇರಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕನಿಮೊಳಿ ಅವರೊಂದಿಗೆ ಅಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಫ್‌ಎಸ್‌) ಸಿಬ್ಬಂದಿ ಹಿಂದಿಯಲ್ಲಿ ಮಾತನಾಡಿದರಂತೆ. ಆಗ ಹಿಂದಿ ಬಾರದ ತಾವು ತಮಿಳು ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಲು ಕೇಳಿಕೊಂಡೆ. ಆಗ ಆ ಸಿಬ್ಬಂದಿ ನಿಮಗೆ ಹಿಂದಿ ಬರದಿದ್ದರೆ ನೀವೊಬ್ಬರು ಭಾರತೀಯರಾ ಎಂದು ಕೇಳಿದರು ಎಂಬುದಾಗಿ ಕನಿಮೊಳಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
Today at the airport a CISF officer asked me if “I am an Indian” when I asked her to speak to me in tamil or English as I did not know Hindi. I would like to know from when being indian is equal to knowing Hindi.#hindiimposition
— Kanimozhi (கனிமொழி) (@KanimozhiDMK)August 9, 2020

ನನಗೆ ಹಿಂದಿ ಭಾಷೆ ಗೊತ್ತಿಲ್ಲದ್ದರಿಂದ ಇಂಗ್ಲಿಷ್‌ ಅಥವಾ ತಮಿಳಿನಲ್ಲಿ ಮಾತನಾಡಲು ಹೇಳಿದೆ. ಹಿಂದಿ ಗೊತ್ತಿದ್ದರೆ ಮಾತ್ರ ಭಾರತೀಯಳಾಗಲು ಸಾಧ್ಯ ಎಂದು ಹೇಳಲಾಯಿತು ಎಂದು ಹೇಳಿರುವ ಕನಿಮೊಳಿ ಅವರು, ಅದಕ್ಕೆ #hindiimposition (ಹಿಂದಿ ಹೇರಿಕೆ) ಹ್ಯಾಷ್ ಟ್ಯಾಗ್ ಸೇರಿಸಿದ್ದಾರೆ.
ಈ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಿಂದಿ ಹೇರಿಕೆ ವಿರುದ್ಧದ ನಿಮ್ಮ ಹೋರಾಟದಲ್ಲಿ ಕನ್ನಡಿಗರು ಜತೆಗಿದ್ದಾರೆ. ಹಿಂದಿಯೇತರ ಭಾರತೀಯರ ಪರವಾಗಿ ತಮಿಳುನಾಡು ಈ ಹೋರಾಟ ಮಾಡಬೇಕು ಎಂದು ರಾಜು ಹೊಸಮನಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಹೋರಾಟಗಾರ ಅರುಣ್ ಜಾವಗಲ್ ಈ ಟ್ವೀಟ್​ಗೆ ಪ್ರತಿಕ್ರಿಯಿಸಿ, ದಶಕಗಳಿಂದಲೂ ಇರುವ ಹಿಂದಿ ಮಾನಸಿಕತೆಗೆ ಆರ್.ವಿ. ಧುಲೇಕರ್ ಹೇಳಿಕೆಯನ್ನು ಉಲ್ಲೇಖಿಸಿ ಉದಾಹರಣೆ ನೀಡಿದ್ದಾರೆ.
ಕಂದನ ನೋಡುವ ಮೊದಲೇ ಪೈಲಟ್‌ ದುರ್ಮರಣ: ಸಾವಿನ ಅರಿವಿಲ್ಲದ ತುಂಬುಗರ್ಭಿಣಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + 11 =
Remember me
