ನವದೆಹಲಿ:ಸ್ನಾನ ಮಾಡುವುದು, ತನ್ನನ್ನು ತಾನು ಸ್ವಚ್ಛವಾಗಿಟ್ಟುಕೊಳ್ಳುವುದು….ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ. ಬೇಸಿಗೆಯಲ್ಲಿಯಂತೂ ಜನರು ದಿನಕ್ಕೆ ಎರಡು ಮೂರು ಬಾರಿ ಸ್ನಾನ ಮಾಡುತ್ತಾರೆ. ಆದರೆ ಚಳಿಗಾಲದ ಸಮಯದಲ್ಲಿ ಈ ಸ್ನಾನದ ಸಂಖ್ಯೆ ಕಡಿಮೆಯಾಗುತ್ತದೆ. ಹೌದು, ಈ ಸೀಸನ್‌ನಲ್ಲಿ ಅನೇಕರು 2-3 ದಿನ ಅಥವಾ 4-5 ದಿನಗಳ ಅಂತರವನ್ನು ಬಿಡುತ್ತಾರೆ. ಆದರೆ ಸ್ನಾನ ಮಾಡದಿರುವ ನಿಮ್ಮ ವಿರುದ್ಧ ಯಾರಾದರೂ ಕೇಸ್ ಹಾಕಿದರೆ ಏನಾಗುತ್ತದೆ ಎಂದು ಊಹಿಸಿ?, ಹೌದು, ಟರ್ಕಿಯ ಮಹಿಳೆಯೊಬ್ಬರು ಇದೇ ರೀತಿಯ ಕೆಲಸವನ್ನು ಮಾಡಿದ್ದಾರೆ. ಇತ್ತೀಚೆಗಷ್ಟೇ ತನ್ನ ಗಂಡನ ವಿರುದ್ಧ ಮೊಕದ್ದಮೆ ಹೂಡಿ, ಅವನು ಅಪರೂಪಕ್ಕೆ ಸ್ನಾನ ಮಾಡುತ್ತಾನೆ ಎಂದು ಹೇಳಿಕೊಂಡಿದ್ದಾಳೆ.
“ಅವರು ಸ್ನಾನ ಮಾಡದ ಕಾರಣ ಬೆವರು ವಾಸನೆ ಬರುತ್ತಿದೆ. ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಹಲ್ಲುಜ್ಜುತ್ತಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ವರದಿಯ ಪ್ರಕಾರ, ಮುಖ್ಯವಾಗಿ ವೈಯಕ್ತಿಕ ನೈರ್ಮಲ್ಯದ ಕೊರತೆಯನ್ನು ಉಲ್ಲೇಖಿಸಿ, ತನ್ನ ಪತಿ ವಿರುದ್ಧ ವಿಚ್ಛೇದನ ಪ್ರಕರಣವನ್ನು ದಾಖಲಿಸಿರುವುದಾಗಿ” ಮಹಿಳೆ ಟರ್ಕಿಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಮಹಿಳೆಯ ಪರ ವಕೀಲರು ಅಂಕಾರಾದಲ್ಲಿರುವ 19 ನೇ ಕೌಟುಂಬಿಕ ನ್ಯಾಯಾಲಯಕ್ಕೆ ಆಕೆಯ ಪತಿ ಕನಿಷ್ಠ 5 ದಿನಗಳ ಕಾಲ ನಿರಂತರವಾಗಿ ಅದೇ ಬಟ್ಟೆಗಳನ್ನು ಧರಿಸುತ್ತಿದ್ದರು. ವಿರಳವಾಗಿ ಸ್ನಾನ ಮಾಡುತ್ತಿದ್ದರು. ಇದರಿಂದಾಗಿ ಅವರ ದೇಹ ಮತ್ತು ಬಟ್ಟೆಗಳು ನಿರಂತರವಾಗಿ ಬೆವರಿನಿಂದ ವಾಸನೆ ಬೀರುತ್ತವೆ” ಎಂದು ಹೇಳಿದ್ದಾರೆ.
ಪರಿಹಾರ ನೀಡುವಂತೆ ಕೋರ್ಟ್ ಆದೇಶವರದಿಗಳ ಪ್ರಕಾರ, ಮಹಿಳೆಯ ಗಂಡನ ಕೆಲವು ಪರಿಚಯಸ್ಥರು ಮತ್ತು ಅವನೊಂದಿಗೆ ಕೆಲಸ ಮಾಡಿದ ಕೆಲವು ಸಹೋದ್ಯೋಗಿಗಳನ್ನು ಒಳಗೊಂಡಂತೆ ಆತನ ವಿರುದ್ಧ ಮಹಿಳೆಯ ಹಕ್ಕುಗಳನ್ನು ದೃಢೀಕರಿಸಲು ಕೆಲವು ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಕರೆಯಲಾಯಿತು. ಇವರೆಲ್ಲರೂ ಮಹಿಳೆಯ ಗಂಡನ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಖಚಿತಪಡಿಸಿದರು, ನಂತರ ನ್ಯಾಯಾಲಯವು ಮಹಿಳೆಗೆ ಆಕೆಯ ಪತಿಯಿಂದ ವಿಚ್ಛೇದನವನ್ನು ನೀಡಿತು ಮತ್ತು ವೈಯಕ್ತಿಕ ನೈರ್ಮಲ್ಯದ ಕೊರತೆಗಾಗಿ ತನ್ನ ಮಾಜಿ ಪತ್ನಿಯನ್ನು ಶಿಕ್ಷಿಸದಂತೆ, ಜೊತೆಗೆ 16,500 ಡಾಲರ್​​​ ಪಾವತಿಸುವಂತೆ ಅಂದರೆ ಸುಮಾರು ರೂ. ಪರಿಹಾರವಾಗಿ 13 ಲಕ್ಷ 69 ಸಾವಿರ ರೂ. ಪತಿಗೆ ಆದೇಶಿಸಿತು.
ವಾರಕ್ಕೆ 1-2 ಬಾರಿ ಬ್ರಷ್ಮಹಿಳೆಯ ಪತಿ 7-10 ದಿನಕ್ಕೊಮ್ಮೆ ಸ್ನಾನ ಮಾಡಿ, ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾತ್ರ ಹಲ್ಲುಜ್ಜುತ್ತಿದ್ದರಿಂದ ಬಾಯಿ ದುರ್ವಾಸನೆ ಮತ್ತು ದೇಹದ ದುರ್ವಾಸನೆ ಬರುತ್ತಿದ್ದು, ಮಹಿಳೆಯ ಬದುಕನ್ನು ದುಸ್ತರಗೊಳಿಸಿದೆ ಎಂದು ನ್ಯಾಯಾಲಯದ ದಾಖಲೆಗಳು ಮತ್ತು ಸಾಕ್ಷಿಗಳ ಹೇಳಿಕೆಯಿಂದ ತಿಳಿದುಬಂದಿದೆ. ಮಹಿಳೆಯ ವಕೀಲರು ಟರ್ಕಿಯ ಪತ್ರಿಕೆಯೊಂದಕ್ಕೆ, ‘ಗಂಡ ಮತ್ತು ಹೆಂಡತಿ ಇಬ್ಬರೂ ಜೀವನದ ಜವಾಬ್ದಾರಿಗಳನ್ನು ಪೂರೈಸಬೇಕು. ನಡವಳಿಕೆಯಿಂದಾಗಿ ಜೀವನ ಅಸಹನೀಯವಾಗಿದ್ದರೆ, ವಿಚ್ಛೇದನಕ್ಕೆ ಮೊಕದ್ದಮೆ ಹೂಡಲು ಪಾರ್ಟಿಗೆ ಹಕ್ಕಿದೆ. ಮಾನವ ಸಂಬಂಧಗಳಲ್ಲಿ ನಾವೆಲ್ಲರೂ ಜಾಗರೂಕರಾಗಿರಬೇಕು. ನಮ್ಮ ನಡವಳಿಕೆ ಮತ್ತು ಶುಚಿತ್ವ ಎರಡಕ್ಕೂ ಗಮನ ಕೊಡಬೇಕು’ ಎಂದು ಹೇಳಿದ್ದಾರೆ.
‘ಪೂನಂ ಪಾಂಡೆ ಜೀವಂತವಾಗಿದ್ದಾರೆ, ಸಾವಿನ ಸುದ್ದಿಯನ್ನು ಎಂಜಾಯ್ ಮಾಡುತ್ತಿದ್ದಾರೆ’: ಉಮೈರ್ ಸಂಧು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine + twelve =
Remember me
