ಬೆಂಗಳೂರು:ಕರ್ನಾಟಕದ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು(ಮಂಗಳವಾರ) ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಪ್ರಧಾನಿ ನರೇದ್ರ ಮೋದಿ ಕೈ ಗಟ್ಟಿ ಮಾಡಬೇಕು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ನನ್ನ ಬಾಂಧವರು ಎಂದಿದ್ದಾರೆ. ಅಲ್ಲದೆ ತಮ್ಮ ರಾಜಕೀಯ ಜೀವನದ ಹಾದಿ, ಮುಂದಿನ ಗುರಿ ಬಗ್ಗೆಯೂ ಒಂದಷ್ಟು ಮಾಹಿತಿ ಅಂಚಿಕೊಂಡಿದ್ದಾರೆ.
ದೆಹಲಿ ಕೇಂದ್ರ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಮತ್ತು ವಕ್ತಾರ ಸಂಬಿತ್ ಪಾತ್ರಾ ಸಮ್ಮುಖದಲ್ಲಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಷ್ಟ್ರವಾದ ಹಾಗೂ ಅಭಿವೃದ್ಧಿ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ತಮಿಳುನಾಡಿಗೆ ಬಿಜೆಪಿಯ ಅವಶ್ಯಕತೆಯಿದ್ದು, ಅದರಂತೆ ರಾಜ್ಯದಲ್ಲಿ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಇದನ್ನೂ ಓದಿರಿVIDEO| ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈಗೆ ದಕ್ಷತೆ ಪಟ್ಟ ತಂದುಕೊಟ್ಟ ರೋಚಕ ಘಟನೆಗಳಿವು!
ಮೋದಿ ಅವರ ಮೇಲೆ ಬಹಳ ವಿಶ್ವಾಸ, ನಂಬಿಕೆ ಇದೆ. ಅವರ ಕೈಯನ್ನು ನಾವೆಲ್ಲರೂ ಗಟ್ಟಿ ಮಾಡಬೇಕು. ತಮಿಳುನಾಡು ಪಾಲಿಟಿಕ್ಸ್ ಫ್ಯಾಮಿಲಿ ಓರಿಯಂಟೆಡ್ ಬಿಸಿನೆಸ್​ ತರ ಆಯ್ತು. ಬಿಜೆಪಿ ಪಾರ್ಟಿ ಒಬ್ಬ ಸಾಮಾನ್ಯ ಮನುಷ್ಯರದ್ದು. ನಮಗೇನೂ ದುಡ್ಡಿಲ್ಲ, ನಾವು ರಾಜಕೀಯ ಮಾಡಲು, ತಮಿಳುನಾಡಿನಲ್ಲಿ ಒಳ್ಳೆಯ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿಯೇ ಸೂಕ್ತ ಎನ್ನುವ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸುವ ಬಗ್ಗೆ ಸುಳಿವು ನೀಡಿದರು.
ನಾನು ಉಡುಪಿ, ಮಂಗಳೂರು ಎಲ್ಲ ಕಡೆಯೂ ಕೆಲಸ ಮಾಡಿದ್ದೇನೆ. ನನಗೆ ತುಂಬಾ ಜನ ಮುಸ್ಲಿಂ, ಕ್ರಿಶ್ಚಿಯನ್, ಹಿಂದು ಸ್ನೇಹಿತರಿದ್ದಾರೆ. ಬಿಜೆಪಿ ಎಂಬುದು ಎಲ್ಲ ಸಮುದಾಯಕ್ಕೂ ಸೇರಿದ್ದು. ನಾನು ಪೊಲೀಸ್​ ಕೆಲಸದಲ್ಲಿ ಇದ್ದಾಗ ಯೂನಿಫಾರಂಗೆ ಮರ್ಯಾದೆ ಕೊಟ್ಟು ಆ ಧರ್ಮಕ್ಕೆ ಕೆಲಸ ಮಾಡಿದ್ದೇನೆ. ಈಗ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡ್ತೀನಿ ಎಂದು ಹೇಳಿದರು.ನಾನು ಕರ್ನಾಟಕದಲ್ಲಿ ಐಪಿಎಸ್​ ಅಧಿಕಾರಿಯಾಗಿ 9 ವರ್ಷ ಕೆಲಸ ಮಾಡಿದ್ದೇನೆ. ರಾಜೀನಾಮೆ ಕೊಟ್ಟ ಬಳಿಕ ಒಂದು ಫೌಂಡೇಶನ್​ ಅನ್ನು ಬೆಳೆಸಿದ್ದೇನೆ. ಸಾಮಾಜಿಕ ಬದಲಾವಣೆ ಹೇಗೆ ಮುಖ್ಯವೋ ಹಾಗೆ ರಾಜಕೀಯದಲ್ಲೂ ಬದಲಾವಣೆ ಅಗತ್ಯ ಎಂಬುದು ಗೊತ್ತಾಯ್ತು. ತಮಿಳುನಾಡಿನಲ್ಲಿ ಬದಲಾವಣೆ ಆಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಇನ್ಮುಂದೆಯೂ ನನ್ನ ಸೇವೆ ಸಮಾಜಕ್ಕಾಗಿಯೇ ಇರಲಿದೆ ಎಂದು ಅಣ್ಣಾಮಲೈ, ಕರ್ನಾಟಕದ ಜನತೆಗೆ ನಾನು ಬಹಳ ಅಭಾರಿಯಾಗಿದ್ದೇನೆ ಎಂದರು.
ಕರ್ನಾಟಕ ಕೇಡರ್‌ನಲ್ಲಿ ಐಪಿಎಸ್‌ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ, ರಾಜ್ಯದ ಹಲವೆಡೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಯುವಜನಾಂಗದ ರೋಲ್​ ಮಾಡೆಲ್​ ಆಗಿದ್ದರು. ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದಿದ್ದ ಅವರು ಇದೀಗ ರಾಜಕೀಯದಲ್ಲಿ ಸೇವೆ ಸಲ್ಲಿಸಲಿದ್ದಾರೆ.
https://www.facebook.com/DighvijayNews/videos/1029791217451840
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − eight =
Remember me
