ಡೆಹ್ರಾಡೂನ್​:ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಭಕ್ತನೋರ್ವ ಸುಮ್ಮನೆ ಬರದೇ ಮಾಡಿದ ಕೆಲಸಕ್ಕೆ ದೇವಾಲಯದ ಆಡಳಿತ ಮಂಡಳಿ ಸರಿಯಾದ ಪಾಠ ಕಲಿಸಿದೆ.
ಚಾರ್​ಧಾಮ್​ ಯಾತ್ರೆಗಳಲ್ಲಿ ಒಂದಾಗ ಕೇದಾರನಾಥ ದೇವಾಲಯಕ್ಕೆ ತನ್ನ ನಾಯಿಯೊಂದಿಗೆ ತೆರಳಿದ ದೆಹಲಿ ನಿವಾಸಿಯೊಬ್ಬ ನಾಯಿಗೆ ತಿಲಕವಿಟ್ಟು ಫೋಟೋ ತೆಗೆದಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಕೂಡ ಆಯ್ತು. ಅರೆ… ಏನಿದು ನಾಯಿ ಫೋಟೋ ತೆಗೆದಿದ್ದಕ್ಕೆ ಈತನ ವಿರುದ್ಧ ಅಂತಹ ಕ್ರಮ ಏನು ಕೈಗೊಂಡರು ಎಂಬ ಪ್ರಶ್ನೆ ಮೂಡಬಹುದು.
ಹೌದು.. ತ್ಯಾಗಿ ಎಂಬ ವ್ಯಕ್ತಿ ತನ್ನ ನಾಲ್ಕೂವರೆ ವರ್ಷದ ನಾಯಿಯ ಫೋಟೋ ತೆಗೆದಿದಕ್ಕೆ ಯಾರಿಗೂ ಬೇಸರವಿಲ್ಲ. ಆದರೆ ಈತ ದೇವಾಲಯದ ಆವರಣದಲ್ಲಿರುವ ನಂದಿ ವಿಗ್ರಹಕ್ಕೆ ನಾಯಿಯ ಬಾಲ ಅಂಟಿಕೊಂಡಂತಿರುವ ಫೋಟೋ ತೆಗೆದಿರುವುದು ಆಡಳಿತ ಮಂಡಳಿಯ ಕೋಪಕ್ಕೆ ಕಾರಣವಾಗಿದೆ.
ಪವಿತ್ರ ದೇವಾಲಯದಲ್ಲಿ ಈ ರೀತಿ ಮಾಡಿರುವ ಈತನ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಪವಿತ್ರ ಸ್ಥಳಗಳಲ್ಲಿ ಈ ರೀತಿಯ ವರ್ತನೆ ಮಾಡಿರುವುದು ಸರಿಯಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.
ನಾಯಿಯೊಂದಿಗೆ ನಾನು ಕೇದಾರನಾಥಕ್ಕೆ ಭೇಟಿ ನೀಡಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ ಈತನಿಗೆ ಈಗ ಆಡಳಿತ ಮಂಡಳಿ ಪ್ರಕರಣ ದಾಖಲಿಸುವ ಮೂಲಕ ಬಿಗ್​ ಶಾಕ್​ ನೀಡಿದೆ.
ಕೋಟ್ಯಾಂತರ ಜನರು ಬಾಬಾ ಕೇದಾರನಾಥನಲ್ಲಿ ನಂಬಿಕೆ ಇಟ್ಟಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆಯಾಗುವಂತೆ ಈ ವ್ಯಕ್ತಿ ನಡೆದುಕೊಂಡಿದ್ದಾನೆ. ಬಾಲಿವುಡ್​ ಹಾಡುಗಳನ್ನು ಹಾಕಿ ನಾಯಿಯ ಬಾಲವನ್ನು ದೇವಾಲಯಕ್ಕೆ ಸ್ಪರ್ಶಿಸುವ ಮೂಲಕ ಭಕ್ತರ ಭಾವನೆಗಳೊಂದಿಗೆ ಆಟವಾಡಿರುವುದರಿಂದ ಈತನ ವಿರುದ್ಧ ದೂರು ನೀಡಲಾಗಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಅಜೇಂದ್ರ ಅಜಯ್​ ಹೇಳಿದ್ದಾರೆ.(ಏಜೆನ್ಸೀಸ್​)
ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧುಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 2 =
Remember me
