ತಿರುವನಂತಪುರಂ:ಕೇರಳದಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಲಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿ ಜವರಾಯನ ಅಟ್ಟಹಾಸ ಮೆರೆದಿದೆ. ಅಕಾಲಿಕವಾಗಿ ಸಾವು ಕಣ್ಮುಂದೆ ಬಂದ ಸಂತ್ರಸ್ತ ಜನರ ಸ್ಥಿತಿಯನ್ನು ಊಹಿಸಿಕೊಂಡರೇ ಭಯವಾಗುತ್ತದೆ. ಈ ಪ್ರದೇಶಗಳಲ್ಲಿ ಬದುಕುಳಿದವರ ಶೋಧ ಕಾರ್ಯ ನಡೆಸುತ್ತಿರುವ ರಕ್ಷಣಾ ತಂಡಗಳಿಗೆ ಹಲವು ಮನ ಕಲಕುವ ಅನುಭವಗಳಾಗಿವೆ.
ಕೇರಳದ ಇದುಕ್ಕಿ ಜಿಲ್ಲೆಯ ಕೊಕ್ಕಯಾರ್ ಗ್ರಾಮದಲ್ಲಿ ನಿನ್ನೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ತಂಡವು, ಕೆಸರು ತುಂಬಿದ ಕಟ್ಟಡದ ಅವಶೇಷಗಳನ್ನು ಕೆದಕಿದಾಗ, ಒಬ್ಬರನ್ನೊಬ್ಬರು ಅಪ್ಪಿಕೊಂಡು ಸಾವಪ್ಪಿದ್ದ ತಾಯಿ-ಮಗನ ಶರೀರಗಳು ಸಿಕ್ಕಿವೆ. ಮೃತರನ್ನು 28 ವರ್ಷದ ಫೌಜಿಯಾ ಮತ್ತು 10 ವರ್ಷದ ಅಮೀನ್ ಎಂದು ಗುರುತಿಸಲಾಗಿದೆ. ಸನಿಹದಲ್ಲೇ ಪರಸ್ಪರ ತಬ್ಬಿಕೊಂಡು ಸಾವನ್ನು ಎದುರಿಸಿದ್ದ ಇನ್ನೂ ಮೂವರು ಮಕ್ಕಳ ಮೃತದೇಹಗಳು ಲಭಿಸಿವೆ. ಈ ಮಕ್ಕಳನ್ನು 7 ವರ್ಷದ ಆಮ್ನಾ, 8 ವರ್ಷದ ಅಫ್ಸಾನ್ ಮತ್ತು 4 ವರ್ಷದ ಅಹಿಯಾನ್​ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಕಾಲೇಜು ಹಾಸ್ಟೆಲ್​ನಲ್ಲೇ ಎಂಬಿಬಿಎಸ್​ ವಿದ್ಯಾರ್ಥಿ ಆತ್ಮಹತ್ಯೆ
ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಫೌಜಿಯಾ ಕಂಜಿರಾಪಲ್ಲಿ ಗ್ರಾಮದ ಸಿಯಾದ್​​ ಎಂಬುವರ ಪತ್ನಿ ಎನ್ನಲಾಗಿದೆ. ವಿವಾಹ ಸಮಾರಂಭವೊಂದಕ್ಕಾಗಿ ಕೊಕ್ಕಯಾರ್​ನ ತವರು ಮನೆಗೆ ಫೌಜಿಯಾ ತನ್ನ ಮಕ್ಕಳಾದ ಅಮೀನ್ ಮತ್ತು ಆಮ್ನಾರನ್ನು ಕರೆದುಕೊಂಡು ಬಂದಿದ್ದರು. ಮೃತ ಅಫ್ಸಾನ್​ ಮತ್ತು ಅಹಿಯಾನ್​ ಫೌಜಿಯಾ ಸೋದರ ಫೈಜಲ್​ರ ಮಕ್ಕಳಾಗಿದ್ದರು ಎನ್ನಲಾಗಿದೆ.
ಅದೇ ಗ್ರಾಮದಲ್ಲಿ ಮತ್ತೊಂದೆಡೆ, ತೊಟ್ಟಿಲಿನಲ್ಲಿದ್ದ ಮಗುವಿನ ಶವ ಕೂಡ ಸಿಕ್ಕಿದೆ. ಮಳೆಯ ಅನಾಹುತದ ನಂತರ ಈ ಪ್ರಾಂತ್ಯದಲ್ಲಿ 11 ಜನರು ಕಾಣೆಯಾಗಿದ್ದಾರೆಂದು ವರದಿಯಾಗಿತ್ತು. ಭಾನುವಾರ ಸಂಜೆಯ ವೇಳೆಗೆ 55 ವರ್ಷ ವಯಸ್ಸಿನ ಶಾಜಿ ಎಂಬುವರ ಮೃತದೇಹ ಸೇರಿದಂತೆ 6 ಮೃತದೇಹಗಳು ಸಿಕ್ಕವು. ಇವರೆಲ್ಲರ ಶವಗಳನ್ನು ಕೊಟ್ಟಾಯಂನ ಮೆಡಿಕಲ್​ ಕಾಲೇಜ್ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ವರದಿ ತಿಳಿಸಿದೆ.(ಏಜೆನ್ಸೀಸ್)
ಪಾಪ ಪಾಂಡು ಖ್ಯಾತಿಯ ಹಿರಿಯ ಕಲಾವಿದ ಶಂಕರ್ ರಾವ್​ ಇನ್ನಿಲ್ಲ

VIDEO| ಸ್ಕೂಟರಲ್ಲಿ ಹೋಗುತ್ತಿದ್ದ ಹುಡುಗಿಯನ್ನು ನಿಲ್ಲಿಸಿ ಬುರ್ಖಾ ತೆಗೆಸಿದರು! ವೈರಲ್​ ಆಯ್ತು ವಿಡಿಯೋ

ಪ್ರೀತಿಸಿ ಮದುವೆಯಾದವಳ ಮೇಲೇ ಸಂಶಯ; ನಡೆದೇ ಹೋಯ್ತು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
