ಹೈದರಾಬಾದ್​:ಸದಾ ಸುದ್ದಿಯಲ್ಲಿರುವ ಕಾಲಿವುಡ್ ಸ್ಟಾರ್ ಹೀರೋ ವಿಶಾಲ್, ಸದ್ಯ ಸಿಂಗಂ ಸರಣಿಯ ನಿರ್ದೇಶಕ ಹರಿ ನಿರ್ದೇಶನದ ‘ರತ್ನಂ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣ ಮುಗಿದು ಸದ್ಯದಲ್ಲೇ ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ ವಿಶಾಲ್ ಮತ್ತು ಚಿತ್ರತಂಡ ಇದರ ಪ್ರಚಾರ ಕಾರ್ಯ ಆರಂಭಿಸಿದೆ. ಇದೇ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಈ ಹೀರೋ ಭಾಗವಹಿಸಿದ್ದು, ತನ್ನ ಮದುವೆಯ ಬಗ್ಗೆ ಆಸಕ್ತಿದಾಯಕ ಕಾಮೆಂಟ್​ ಗಳನ್ನು ಮಾಡಿದ್ದಾರೆ. ಇಂಡಸ್ಟ್ರಿಯಲ್ಲಿ ಆ ಹೀರೋಗೆ ಮೊದಲ ವೆಡ್ಡಿಂಗ್ ಕಾರ್ಡ್ ನೀಡುವುದಾಗಿಯೂ ಹೇಳಿದ್ದಾರೆ.
ಇದನ್ನೂ ಓದಿ:ಆ ಚಿತ್ರಕ್ಕೆ ಶ್ರೀಲೀಲಾ ಬದಲಿಗೆ ರಾಶಿ ಖನ್ನಾ! ಕಾರಣ ಇದೇ ನೋಡಿ…
‘ರತ್ನಂ’ ಸಿನಿಮಾ ಕುರಿತು ವಿಶಾಲ್ ನಗುಮೊಗದಿಂದಲೇ ಉತ್ತರಿಸಿದರು. ಪ್ರಭಾಸ್ ಮದುವೆಯಾದಾಗ ಖಂಡಿತಾ ನಾನೂ ಮದುವೆಯಾಗುತ್ತೇನೆ. ಅಲ್ಲದೇ ನನ್ನ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ಪ್ರಭಾಸ್ ಗೇ ನೀಡುವುದಾಗಿ ಹೇಳಿದರು.
ಇದೆಲ್ಲದರ ನಡುವೆ ತಮಿಳು ನಿರ್ಮಾಪಕರ ನಾಡಿಗರ ಸಂಗಮ್ ನಿರ್ಮಾಣದ ಕಟ್ಟಡ ಕಾಮಗಾರಿ ಮುಗಿದ ನಂತರ ಮದುವೆಯಾಗುವುದಾಗಿ ವಿಶಾಲ್ ಈ ಹಿಂದೆ ಹೇಳಿದ್ದರು. ಆದರೆ ಇತ್ತೀಚೆಗೆ ಅವರ ಮದುವೆಯ ಪ್ರಸ್ತಾಪ ಬಂದಾಗ ಪ್ರಭಾಸ್​ ಮದುವೆ ನಂತರ ತನ್ನ ಮದುವೆ ಎಂದು ವಿಶಾಲ್ ಹೇಳಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ರತ್ನಂ ಸಿನಿಮಾ ಇದೇ ಏ.26ಕ್ಕೆ ಥಿಯೇಟರ್‌ಗೆ ಬರಲು ರೆಡಿಯಾಗಿದೆ.
ಪಶ್ಚಿಮ ಬಂಗಾಳದಲ್ಲಿ ರಾಮ ನವಮಿ ಮೆರವಣಿಗೆ ಮೇಲೆ ಬಾಂಬ್​ ದಾಳಿ: ಮೂವರ ಸ್ಥಿತಿ ಗಂಭೀರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 2 =
Remember me
