ನವದೆಹಲಿ: ಭಾರತಕ್ಕೆ ಬೇಕಾಗಿರುವ ಉಗ್ರ ಹಫೀಜ್ ಸಯೀದ್ ನಾಯಕತ್ವದ ಲಷ್ಕರ್​ ಏ ತೊಯ್ಬಾ(ಎಲ್​ಇಟಿ) ಸಂಘಟನೆ ಇದೀಗ ಹೊಸ ಹೆಸರಿನೊಂದಿಗೆ ಹೊಸ ಅವತಾರವನ್ನು ಎತ್ತಿದೆ. ಪ್ಯಾರಿಸ್ ಮೂಲದ ಫೈನಾನ್ಶಿಯಲ್ ಆ್ಯಕ್ಷನ್​ ಟಾಸ್ಕ್​ ಫೋರ್ಸ್​ (ಎಫ್​ಎಟಿಎಫ್​​) ನಿರ್ಬಂಧದಿಂದ ಪಾರಾಗುವುದಕ್ಕೆ ಪಾಕಿಸ್ತಾನಕ್ಕೆ ಇದ್ದುದು ಇದೊಂದೇ ದಾರಿ!
ಜಾಗತಿಕವಾಗಿ COVID19 ಪರಿಸ್ಥಿತಿಯ ತೀವ್ರತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅದನ್ನು ತಡೆಯುವುದಕ್ಕೆ ಬೇಕಾದ ಅನೇಕ ಮುಂಜಾಗ್ರತಾ ಕ್ರಮಗಳನ್ನು ರಾಷ್ಟ್ರಗಳು ತೆಗೆದುಕೊಂಡಿವೆ. ಇದರಲ್ಲಿ ದಿಗ್ಬಂಧನ, ಪ್ರಯಾನ ನಿರ್ಬಂಧ, ನಿಗದಿತ ಭೌಗೋಳಿಕ ವ್ಯಾಪ್ತಿಯನ್ನೆ ಸೀಲ್​ಡೌನ್ ಮಾಡುವ ಕೆಲಸಗಳೂ ಆಗಿವೆ. ಈ ಹಿನ್ನೆಲೆಯಲ್ಲಿ ಹೈ ರಿಸ್ಕ್​ ಪ್ರದೇಶಗಳಲ್ಲಿನ ಪರಾಮರ್ಶೆಯನ್ನು ನಾಲ್ಕು ತಿಂಗಳ ಮಟ್ಟಿಗೆ ಮುಂದೂಡಲಾಗುತ್ತಿದೆ. ಹೀಗಾಗಿ ಜೂನ್​ ತಿಂಗಳಲ್ಲಿ ನಿಗದಿತ ಪರಾಮರ್ಶೆಗಳು ನಡೆಯಲ್ಲ ಎಂದು ಎಫ್​ಎಟಿಎಫ್​ ಪ್ರಕಟಿಸಿದೆ.
ಇದನ್ನೂ ಓದಿ:ಬೂದು ಪಟ್ಟಿಯಲ್ಲೇ ಪಾಕ್​ ಮುಂದುವರಿಕೆ: ಎಫ್​ಎಟಿಎಫ್​ನಿಂದ ಶುಕ್ರವಾರ ಅಂತಿಮ ನಿರ್ಧಾರ
ಇದೇ ವೇಳೆ ಪಾಕಿಸ್ತಾನಕ್ಕೂ ಎಫ್​ಎಟಿಎಫ್ ಪರಾಮರ್ಶೆಯಿಂದ ವಿನಾಯಿತಿ ಸಿಕ್ಕಿದೆ. ಆದಾಗ್ಯೂ, ಅದಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆಯನ್ನು ಪಾಕಿಸ್ತಾನ ಸೆಪ್ಟೆಂಬರ್ ತಿಂಗಳ ಒಳಗೆ ಪೂರೈಸಬೇಕಾಗಿದೆ. ಪಾಕಿಸ್ತಾನಕ್ಕೆ ನೀಡಲಾಗಿದ್ದ 27 ಅಂಶಗಳ ಕ್ರಿಯಾ ಯೋಜನೆಯ ಡೆಡ್​ಲೈನ್ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಕೊನೆಗೊಂಡಿದೆ.
ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಕ್ರಿಯಾ ಯೋಜನೆ ಜಾರಿಗೊಳಿಸುವುದಕ್ಕೆ ಮತ್ತೆ ಅವಕಾಶ ಸಿಕ್ಕಿತ್ತು. ಆದರೆ, ಬೂದುಪಟ್ಟಿಯಿಂದ ಕಪ್ಪು ಪಟ್ಟಿಗೆ ಸೇರಿಸುವ ಷರತ್ತಿನ ಎಚ್ಚರಿಕೆಯೂ ಅಲ್ಲಿತ್ತು. ಪಾಕಿಸ್ತಾನ ಎಫ್​ಎಟಿಎಫ್​ನ ಬೂದು ಪಟ್ಟಿಗೆ ಸೇರಿದ್ದರ ಪರಿಣಾಮ ಇಸ್ಲಾಮಾಬಾದ್​ಗೆ 10 ಶತಕೋಟಿ ಡಾಲರ್​ ನಷ್ಟ ಉಂಟಾಗಿದೆ. ಒಂದೊಮ್ಮೆ ಕ್ರಿಯಾ ಯೋಜನೆ ಜಾರಿಗೊಳಿಸುವಲ್ಲಿ ವಿಫಲವಾದರೆ ಕಪ್ಪುಪಟ್ಟಿಗೆ ಸೇರಲಿದೆ.
ಇದನ್ನೂ ಓದಿ:ಉಗ್ರರಿಗೆ ಹಣಕಾಸು ನೆರವು ಸಿಗದಂತೆ ಕ್ರಮ ತೆಗೆದುಕೊಳ್ಳಲು ಪಾಕ್​ ವಿಫಲ: ಎಚ್ಚರಿಕೆ ನೀಡಿದ ಎಫ್​ಎಟಿಎಫ್​
ಎಫ್​ಎಟಿಎಫ್​ನ ನಿಬಂಧನೆಗಳನ್ನು ಪೂರೈಸುವುದಕ್ಕಾಗಿ ಪಾಕಿಸ್ತಾನ ಈಗ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಹೆಸರು ಬದಲಾಯಿಸುವ ಕೆಲಸಕ್ಕೆ ಮುಂದಾಗಿದೆ. ಇದರಂತೆ ಉಗ್ರ ಹಫೀಜ್ ಸಂಸ್ಥಾಪಕನಾಗಿರುವ ಎಲ್​ಇಟಿ ಇನ್ನು ದ ರೆಸಿಸ್ಟೆನ್ಸ್​ ಫ್ರಂಟ್​(ಟಿಆರ್​ಎಫ್​) ಎಂದು ಗುರುತಿಸಿಕೊಳ್ಳಲಿದೆ. ಈ ಉಗ್ರ ಸಂಘಟನೆ ಜಮ್ಮು-ಕಾಶ್ಮೀರದಲ್ಲಿ ಅನೇಕ ಉಗ್ರ ದಾಳಿಗಳಿಗೆ ಹೊಣೆಗಾರನಾಗಿದೆ. ಲಷ್ಕರ್​ ಏ ತೊಯ್ಬಾ ಅಥವಾ ಎಲ್​ಇಟಿ ವಿಶ್ವಸಂಸ್ಥೆಯಿಂದ ನಿಷೇಧ ಎದುರಿಸುತ್ತಿದ್ದರೆ, ಅದರ ಹೆಸರು ಬದಲಾಯಿಸಿದರೆ ಅಂತಹ ನಿಷೇಧ ಯಾವುದೂ ಲಾಗೂ ಆಗಲ್ಲ ಎಂಬುದು ಪಾಕಿಸ್ತಾನದ ಲೆಕ್ಕಾಚಾರ.
ಈಗ ಪಾಕಿಸ್ತಾನ ಇದೇ ಉಗ್ರರನ್ನು ಕಾಶ್ಮೀರದ ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ಕಳುಹಿಸುವುದಕ್ಕೆ ಪ್ರಯತ್ನಿಸುತ್ತಿರುವುದು. ಹಾಗಾಗಿಯೇ ಆ ಭಾಗದಲ್ಲಿ ಪದೇಪದೆ ಕದನ ವಿರಾಮ ಉಲ್ಲಂಘನೆ, ಅಪ್ರಚೋದಿತ ಗುಂಡಿನ ದಾಳಿ ನಡೆಯುತ್ತಿರುವುದು. ಮೊಟ್ಟ ಮೊದಲ ಬಾರಿಗೆ ಟಿಆರ್​ಎಫ್​ ದಾಳಿ ಕಳೆದ ವರ್ಷ ಆಗಸ್ಟ್ 5ರಂದು ಆಗಿತ್ತು. ಅಂದು ಅನುಚ್ಚೇಧ 370 ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಇದು ನಡೆದಿತ್ತು ಎಂಬುದನ್ನು ಸೇನಾ ಮೂಲಗಳು ಉಲ್ಲೇಖಿಸಿವೆ. (ಏಜೆನ್ಸೀಸ್​)
https://www.vijayavani.net/over-8500-suspicious-transactions-fatf-warns-pakistan-on-terror-funding/
ವೈರಲ್ ಆಯ್ತು ರಿಷಿ ಕಪೂರ್ ಮತ್ತು ಇರ್ಫಾನ್​ ಖಾನ್​ ಜತೆಗೆ ಇರುವ ಒಂದು ಫೋಟೊ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 14 =
Remember me
