ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಣಿಪುರ ವಾಟರ್ ಸಪ್ಲೈ ಪ್ರಾಜೆಕ್ಟ್​ ಗೆ ಶಂಕುಸ್ಥಾಪನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮಣಿಪುರದ ರಾಜ್ಯಪಾಲ, ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟ ಸಹೋದ್ಯೋಗಿಗಳು, ಶಾಸಕರು, ಸಂಸದರು ಈ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದ ನೇರ ಪ್ರಸಾರದ ವಿಡಿಯೋ ಮೇಲಿದೆ.
ಇದನ್ನೂ ಓದಿ:ಸಹಾಯವಾಣಿಗೆ ಕರೆ ಬಂದರೆ ಕೂಡಲೇ ಸ್ಪಂದಿಸಿ- ಅಧಿಕಾರಿಗಳಿಗೆ ಸಿಎಂ ತಾಕೀತು
ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಶುದ್ಧ ಮತ್ತು ಸುರಕ್ಷಿತವಾದ ಕುಡಿಯುವ ನೀರನ್ನು ಬೇಕಾದಷ್ಟು ಪ್ರಮಾಣದಲ್ಲಿ ಪೂರೈಸುವ ಭಾರತ ಸರ್ಕಾರದ ಜಲ ಜೀವನ್ ಮಿಷನ್​ ಯೋಜನೆ ಪ್ರಕಾರ, ಈ ಯೋಜನೆಯನ್ನು ರೂಪಿಸಲಾಗುತ್ತಿದೆ.ಜಲ ಜೀವನ್ ಮಿಷನ್ ಎಂಬುದು ಸಮುದಾಯ ಕೇಂದ್ರಿತ ಯೋಜನೆಯಾಗಿದ್ದು, ಇದರಲ್ಲಿ ಜನರಿಗೆ ಮಾಹಿತಿ ಒದಗಿಸುವುದು, ತಿಳಿವಳಿಕೆ ಮೂಡಿಸುವುದು ಮತ್ತು ಸಂವಹನಗಳ ಮೂಲಕ ಅವರನ್ನು ಜಾಗೃತರನ್ನಾಗಿಸುವುದು ಕೂಡ ಈ ಯೋಜನೆಯ ಉದ್ದೇಶ. ನೀರಿಗಾಗಿ ಜನ ಆಂದೋಲವನ್ನು ರೂಪಿಸುವ ಉದ್ದೇಶ ಸರ್ಕಾರದ್ದು.
ಇದನ್ನೂ ಓದಿ:‘ರಬ್ಬರ್ ಸ್ಟ್ಯಾಂಪ್ ಸಿಎಂ’ ಆಗಿದ್ದೆ ಕಾಂಗ್ರೆಸ್ ಜತೆಗಿನ ಮೈತ್ರಿ ಸರ್ಕಾರದಲ್ಲಿ: ಎಚ್​.ಡಿ.ಕುಮಾರಸ್ವಾಮಿ ಹೇಳಿಕೆ!
ಮಣಿಪುರದ 1,185 ವಸತಿ ಪ್ರದೇಶಗಳ 1,42, 749 ಮನೆಗಳಿಗೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಪೂರೈಸುವುದಕ್ಕಾಗಿ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಮೂಲಕ ಹಣಕಾಸಿನ ನೆರವನ್ನು ಮಣಿಪುರಕ್ಕೆ ನೀಡುತ್ತಿದೆ. ಮಣಿಪುರ ಸರ್ಕಾರವೂ ಹೆಚ್ಚುವರಿಯಾಗಿ ಹಣಕಾಸಿನ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಇನ್ನುಳಿದಿರುವ ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಪೂರೈಸುವ ಕೆಲಸವನ್ನು ಮಾಡಲಿದೆ. (ಏಜೆನ್ಸೀಸ್)
ಹಾಲುಣಿಸಿದರೆ ಸೋಂಕು ಹರಡಲ್ಲ: ಸರ್ಕಾರಿ ಡೆಲಿವರಿ ಆಸ್ಪತ್ರೆಗೆ ಹೆಚ್ಚಾಗಿದೆ ಬೇಡಿಕೆ!

Sign in to your account
Please enter an answer in digits:eighteen + 12 =
Remember me
