ಮುಂಬೈ:ದೇಶದಲ್ಲಿ ಕರೊನಾ ವೈರಸ್​ನ ಕಾಟ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ವೈರಸ್​ ದಾಳಿಗೆ ತತ್ತರಿಸಿದ್ದು, ಅಲ್ಲಿನ ಸರ್ಕಾರ ವೈರಸ್​ ಹರಡುವಿಕೆಯನ್ನು ತಡೆಯುವ ಸಲುವಾಗಿ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮುನ್ನೆಚ್ಚರಿಕೆಯ ಒಂದು ಭಾಗವಾಗಿ ಮುಂಬೈನ ಲೋಕಲ್​ ಟ್ರೈನ್​ಗಳು ಮತ್ತು ಮೆಟ್ರೋ ರೈಲುಗಳನ್ನು ಸ್ಥಗಿತಗೊಳಿಸುವ ಚಿಂತನೆ ನಡೆಸಲಾಗುತ್ತಿದೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವ ಹಿನ್ನೆಲೆ ಮೆಟ್ರೋ ರೈಲುಗಳು ಮತ್ತು ಲೋಕಲ್​ ರೈಲುಗಳನ್ನು ಸ್ಥಗಿತಗೊಳಿಸುವ ಚಿಂತನೆ ನಡೆಸಲಾಗುತ್ತಿದೆ. ಬೋಗಿಗಳಿಗೆ ನಿಯಮಿತ ಪ್ರಯಾಣಿಕರಿಗೆ ಮಾತ್ರ ಹತ್ತುವುದಕ್ಕೆ ಅವಕಾಶ ಮಾಡಿಕೊಡುವುದು, ರೈಲುಗಳಲ್ಲಿ ಆಗಾಗ ರೋಗನಿರೋಧಕವನ್ನು ಸಿಂಪಡಿಸುತ್ತಿರುವುದು ಹೀಗೆ ಅನೇಕ ರೀತಿಯ ಪರ್ಯಾಯ ಮಾರ್ಗಗಳೂ ಸಹ ಇದೆ. ಇವುಗಳೆಲ್ಲದರ ಕುರಿತಾಗಿ ಇಂದು ವಿಧಾನಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್​ ಟೋಪೆ ತಿಳಿಸಿದ್ದಾರೆ.
ಇದುವರೆಗೆ ದೇಶದಲ್ಲಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ. 38 ಜನರಲ್ಲಿ ಕರೊನಾ ಪತ್ತೆಯಾಗಿದ್ದು ಇಂದು ಒಬ್ಬ ಮೃತನಾಗಿದ್ದಾನೆ. 63 ವರ್ಷದ ವೃದ್ಧ ಕರೊನಾದಿಂದಾಗಿ ತೀರಿಕೊಂಡಿದ್ದು ಇದು ದೇಶದ ಮೂರನೇ ಮತ್ತು ರಾಜ್ಯದ ಮೊದಲನೇ ಸಾವಾಗಿದೆ.(ಏಜೆನ್ಸೀಸ್​)
ದೇಶದಲ್ಲಿ ಕರೊನಾ ತಡೆ ಸುಲಭವಲ್ಲ; ಸರ್ಕಾರದ ಮುಂದಿದೆ ಸಾಲು ಸಾಲು ಸವಾಲು

ತೆಲಂಗಾಣದಿಂದ ಬಂತೊಂದು ಹಾರರ್​ ಸುದ್ದಿ: ಹೈದರಾಬಾದ್​ನ ಸುರಂಗ ಮಾರ್ಗದೊಳಗೆ ಪತ್ತೆಯಾಯಿತು ಮಹಿಳೆಯೊಬ್ಬರ ವಿಕಾರಗೊಂಡಿರುವ ಬೆತ್ತಲೆ ಮೃತದೇಹ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
