ಭುವನೇಶ್ವರ:ಲವ್​ ಈಸ್​ ಬ್ಲೈಂಡ್​ (ಪ್ರೀತಿ ಕುರುಡು) ಎನ್ನೋದು ಬಹಳ ಹಿಂದಿನ ಗಾದೆ. ಪ್ರೀತಿಗಾಗಿ ಹುಚ್ಚು ಸಾಹಸಕ್ಕೆ ಕೈಹಾಕುವವರನ್ನು ಅರಿತೇ ಇಂಥದ್ದೊಂದು ಗಾದೆ ಸೃಷ್ಟಿಯಾಗಿರುವುದು. ಆದರೆ ಬೆಂಗಳೂರಿನಲ್ಲಿ ನೆಲೆಸಿರುವ ಯುವಕನೊಬ್ಬ ಮಾಡಿರುವುದು ಅಂತಿಂಥ ಸಾಹಸವಲ್ಲ, ಅದೇನು ನೀವೇ ನೋಡಿ.
ಒಡಿಶಾದ ಬೊಗರೈ ಬ್ಲಾಕ್​ನ ಪಲಸಿಯಾ ಗ್ರಾಮದ 27 ವರ್ಷದ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಇವನಿಗೆ ಸಾಮಾಜಿಕ ಜಾಲತಾಣದಲ್ಲಿ ಪಶ್ಚಿಮ ಬಂಗಾಳದ ಪೂರ್ವ ಮೇದಿನೀಪುರ ಜಿಲ್ಲೆಯ ಯುವತಿಯ ಜತೆ ಕೆಲ ತಿಂಗಳ ಹಿಂದೆ ಪ್ರೀತಿ ಅಂಕುರಿಸಿದೆ.
ಇದನ್ನೂ ಓದಿ:ಜೀವಕ್ಕೆ ದುಬಾರಿಯಾಗುತ್ತಿದೆ ದುಬೈ ಸಹವಾಸ- ಪರ ಊರಿಂದ ಬಂದ ಓರ್ವನ ಬಲಿ: ಹೆಚ್ಚುತ್ತಿದೆ ಸಾವಿನ ಸಂಖ್ಯೆ!
ಸರಿ, ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಏ.17 ಮುಹೂರ್ತವೂ ಫಿಕ್ಸ್​ ಆಯಿತು. ಆದರೆ ಅವರ ಗ್ರಹಚಾರ ಕೆಟ್ಟಿತ್ತು. ಮಧ್ಯ ಲಾಕ್​ಡೌನ್​ ಜಾರಿಯಾಗಿಬಿಟ್ಟಿತು. ಆದರೆ ನಾನೊಂದು ತೀರ… ನೀನೊಂದು ತೀರ… ಎನ್ನುತ್ತಿದ್ದ ಈ ಯುವಜೋಡಿ ಹೇಗಾದರೂ ಸೈ ಮದುವೆಯಾಗಿಯೇ ಬಿಡೋಣ ಎಂಬ ನಿರ್ಧಾರಕ್ಕೆ ಬಂದರು.
ಹೇಳಿಕೇಳಿ ಮೇದಿನೀಪುರ ಕರೊನಾದ ಹಾಟ್​ಸ್ಪಾಟ್​ ಆಗಿದೆ. ಆದರೆ ವಿರಹವೇದನೆಯಲ್ಲಿದ್ದ ಈ ಯುವಕನಿಗೆ ಅದ್ಯಾವುದೂ ಲೆಕ್ಕಕ್ಕೆ ಬರಲೇ ಇಲ್ಲ. ಇವನು ಮಾಡಿದ ಸಾಹಸ ಇಷ್ಟಕ್ಕೇ ಮುಗಿಯಲಿಲ್ಲ.
ಇದನ್ನೂ ಓದಿ:‘ನನ್ನ ಮಗನೊಬ್ಬನ ಬಿಡುಗಡೆ ಬೇಡವೇ ಬೇಡ, ಎಲ್ಲ ಸೈನಿಕರು ನನ್ನ ಮಕ್ಕಳಿದ್ದಂತೆ’ ಎಂದು ಪಾಕ್​ಗೆ ಖಂಡತುಂಡವಾಗಿ ಹೇಳಿದ್ದ ಜನರಲ್ ಕಾರ್ಯಪ್ಪ..
ಧೂಮ್​ಧಾಮ್​ ಮದುವೆಗೆ ಸರ್ಕಾರ ಬ್ರೇಕ್​ ಹಾಕಿತ್ತು. ಸಂಚಾರವನ್ನೂ ಮಾಡುವಂತಿರಲಿಲ್ಲ. ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದ ಈ ಯುವಕ 16 ಬೈಕ್​ಗಳಲ್ಲಿ ತನ್ನ ಸ್ನೇಹಿತರನ್ನು ಕರೆದುಕೊಂಡು ಪೊಲೀಸರ ಕಣ್ಣು ತಪ್ಪಿಸಿ ಹುಡುಗಿಯ ಮನೆಗೆ ಹೋಗುವಲ್ಲಿ ಸಕ್ಸಸ್​ ಆಗಿಬಿಟ್ಟ. ಅವನ ಮನೆಯಿಂದ ಅವಳ ಮನೆ ಇದ್ದುದು 9 ಕಿ.ಮೀ ದೂರದಲ್ಲಿ. ಸ್ಥಳೀಯ ಆರೋಗ್ಯ ಕಾರ್ಯಕರ್ತರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿಯನ್ನೂ ನೀಡಿರಲಿಲ್ಲ.
ಇನ್ನೇನು ಮದುವೆಯೂ ಆಯಿತು. ಮದುವೆಯಾದ ನಂತರ ಪತ್ನಿ ಮತ್ತು ನಾದಿನಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಮೂರು ವಾರ ನೆಮ್ಮದಿಯಾಗಿದ್ದ.
ಇದನ್ನೂ ಓದಿ:ಕರೊನಾಕ್ಕೆ ಕಣ್ಮುಂದೆಯೇ ಬಲಿಯಾದ ಅಪ್ಪ, ಅಮ್ಮ ಕ್ವಾರಂಟೈನ್​ಗೆ- ಒಂಟಿ ಬಾಲಕನ ಮನಕಲಕುವ ಕಥೆ
ಸುಖವಾಗಿ ಸಂಸಾರ ಮಾಡಿಕೊಂಡು ಇರೋಣ ಎಂದು ಕನಸು ಕಾಣುತ್ತಿದ್ದ ಯುವಕನಿಗೆ ಬರಸಿಡಿಲು ಬಡಿದದ್ದು ಆಶಾ ಕಾರ್ಯಕರ್ತೆಯರು ಮನೆಯ ಬಾಗಿಲಿಗೆ ಬಂದಾಗ! ಮದುವೆಯಾಗಿ ಮನೆಗೆ ಬಂದ ನಂತರ ನೆರೆಹೊರೆಯವರು ಆಶಾ ಕಾರ್ಯಕರ್ತರಿಗೆ ತಿಳಿಸಿದ್ದರು. ಪ್ರಯಾಣ ಮಾಡಿದ್ದರಿಂದ ಆರೋಗ್ಯ ಕಾರ್ಯಕರ್ತರು ದಂಪತಿ ಹಾಗೂ ಕುಟುಂಬದವರ ಗಂಟಲು ದ್ರವ ಪರೀಕ್ಷೆ ಮಾಡಿದ್ದರು.
ಈ ಯುವಕನಿಗೆ ಈಗ ಕರೊನಾ ಸೋಂಕು ಇರುವುದು ಪತ್ತೆಯಾಗಿದೆ. ಆದರೆ ಪತ್ನಿ ಮತ್ತು ನಾದಿನಿ ಸೇರಿದಂತೆ ಕುಟುಂಬದವರಿಗೆ ನೆಗೆಟಿವ್ ವರದಿ ಬಂದಿದೆ. ಅಪ್ಪ-ಅಮ್ಮನ ವರದಿ ಇನ್ನೂ ಬಂದಿಲ್ಲ. ಮದುವೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರಲ್ಲಿ ಭೀತಿ ಶುರುವಾಗಿದ್ದು, ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.(ಏಜೆನ್ಸೀಸ್​)
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:7 − five =
Remember me
