ಬೆಳಗಾವಿ:ಮಹಾರಾಷ್ಟ್ರದ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ಕನ್ನಡ ಭಾಷೆಯಲ್ಲಿ ನೀಡಿರುವ ವರ್ಗಾವಣೆ ಪ್ರಮಾಣ ಪತ್ರ (ಟಿಸಿ) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದನ್ನೂ ಓದಿ:ಪೊಲೀಸ್​ ಎದುರೇ ಹಲ್ಲೆ ಮಾಡಲು ಮುಂದಾದ ವಿದ್ಯಾರ್ಥಿಗಳು! ದ.ಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಗೂಂಡಾಗಿರಿ…ಸಾಂಗ್ಲಿ ಜಿಲ್ಲೆಯ ಜತ್​ ತಾಲೂಕಿನ ಗುಗವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಈ ಟಿಸಿ ನೀಡಲಾಗಿದ್ದು, ಮರಾಠಿಯಲ್ಲಿರುವ ಫಾರ್ಮ್​ನ್ನು ಮುಖ್ಯೋಪಾಧ್ಯಾಯರು ಕನ್ನಡದಲ್ಲಿ ತುಂಬಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಮುಖ್ಯೋಪಾಧ್ಯಾಯರು ಈ ಟಿಸಿ ಫಾರ್ಮ್​ನಲ್ಲಿ ‘ಕರ್ನಾಟಕ’ ರಾಜ್ಯ ಎಂದು ನಮೂದಿಸಿದ್ದಾರೆ. ಈ ಕುರಿತು ಕೆಲವರು ಆಕ್ಷೇಪವನ್ನು ವ್ಯಕ್ತಪಡಿಸಿದರೆ ಇನ್ನು ಕೆಲವರು ಮುಖ್ಯೋಪಾಧ್ಯಾಯರ ಕನ್ನಡ ಪ್ರೇಮವನ್ನು ಮೆಚ್ಚಿ ಹಾಡಿ ಹೊಗಳಿದ್ದಾರೆ.ಮಹಾರಾಷ್ಟ್ರದ ಶಾಲೆಯೊಂದು ಕನ್ನಡ ಭಾಷೆಯಲ್ಲಿಯೇ ಶಾಲಾ ಟಿಸಿ ನೀಡಿರುವುದು ಜತ್ತ ತಾಲೂಕಿನ ಜನತೆ ಕರ್ನಾಟಕದಲ್ಲಿ ವಿಲೀನವಾಗಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಇಲ್ಲಿನ ಶಾಲೆಗಳು ಸೇರಿದಂತೆ ಗ್ರಾಮಗಳು ಹಲವಾರು ಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ಈ ಹಿಂದೆಯು ಗೋವಾ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶ ಗಡಿಭಾಗಗಳಲ್ಲಿ ಇಂತಹ ಘಟನೆಗಳು ನಡೆದಿದ್ದವು.ಕೆಲ ತಿಂಗಳುಗಳ ಹಿಂದೆ ಕೆಲವು ತಿಂಗಳ ಹಿಂದೆ, ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸುವಂತೆ ಒತ್ತಾಯಿಸಿ ಜತ್ ತಾಲೂಕಿನ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − one =
Remember me
