ಘಾಜಿಯಾಬಾದ್​:ಇಲ್ಲೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಕೊನೆಗೂ ಬದುಕುಳಿದಿದ್ದಾನೆ. ಈತನ ಆತ್ಮಹತ್ಯೆಯ ಯತ್ನದ ವೇಳೆಯ ಫೇಸ್​ಬುಕ್​ ಲೈವ್​ನಿಂದಾಗಿ ಜೀವ ಉಳಿದಿದೆ. ಪೊಲೀಸ್ ಅಧಿಕಾರಿಯೊಬ್ಬರು ಈತನ ಆತ್ಮಹತ್ಯೆ ಯತ್ನ ಯಶಸ್ವಿ ಆಗದಂತೆ ತಡೆಯುವ ಮೂಲಕ ಪ್ರಾಣ ಉಳಿಸಿದ್ದಾರೆ.
ಉತ್ತರಪ್ರದೇಶದ ಘಾಜಿಯಾಬಾದ್​ನಲ್ಲಿ ಈ ಪ್ರಕರಣ ನಡೆದಿದೆ. ಅಭಯ್ ಶುಕ್ಲಾ ಎಂಬ 23 ವರ್ಷದ ವ್ಯಕ್ತಿ ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಮಾತ್ರವಲ್ಲ, ತನ್ನ ಆತ್ಮಹತ್ಯೆ ಪ್ರಯತ್ನವನ್ನು ಫೇಸ್​​ಬುಕ್​ನಲ್ಲಿ ಲೈವ್ ಇರಿಸಿದ್ದ.
ಆದರೆ ಘಾಜಿಯಾಬಾದ್ ಠಾಣೆಯ ಪೊಲೀಸ್ ಅಧಿಕಾರಿ ಅನಿತಾ ಚೌಹಾಣ್​ ಅವರು ಅಭಯ್ ಶುಕ್ಲಾ ಜೀವವನ್ನು ಉಳಿಸಿದ್ದಾರೆ. 90 ಸಾವಿರ ರೂ. ನಷ್ಟದ ಹಿನ್ನೆಲೆಯಲ್ಲಿ ಈತ ಆತ್ಮಹತ್ಯೆಗೆ ಮುಂದಾಗುತ್ತಿರುವುದಾಗಿ ಗುರುವಾರ ರಾತ್ರಿ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡಿದ್ದ. ಇವೆಲ್ಲವೂ ಫೇಸ್​ಬುಕ್​ನಲ್ಲಿ ಲೈವ್ ಆಗುವಂತೆ ಈತ ಮೊಬೈಲ್​ಫೋನ್​ ಇರಿಸಿದ್ದ.
ಈ ಲೈವ್​ಗೆ ಸಂಬಂಧಿಸಿದಂತೆ ಫೇಸ್​ಬುಕ್ ಮಾತೃಸಂಸ್ಥೆ ಮೆಟಾದ ಯುಎಸ್ ಕಚೇರಿಯಿಂದ ಸ್ಥಳೀಯ ಡಿಸಿಪಿ ನಿಪುಣ್ ಅಗರ್​ವಾಲ್ ಅವರಿಗೆ ಅಲರ್ಟ್ ಬಂದಿತ್ತು. ಅವರು ಈ ಕುರಿತು ಅನಿತಾಗೆ ಮಾಹಿತಿ ನೀಡಿದ್ದು, ಈಕೆ ತನ್ನ ತಕ್ಷಣದ ಸ್ಪಂದನೆ ಹಾಗೂ ಸಂವಹನ ಶಕ್ತಿ ಮೂಲಕ ಅಭಯ್ ಪ್ರಾಣ ಉಳಿಸಿದ್ದಾರೆ.
‘ಉತ್ತಮ ವಿಲನ್’​: ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ; ಸಾಕುತಂದೆಯ ಕುತ್ತಿಗೆಗೇ ಲಾಂಗ್ ಇಟ್ಟು ಬೆದರಿಸಿದ್ದ!

ವಿವಾಹಿತೆಯನ್ನೇ ಅಪಹರಿಸಿ ಇನ್ನೊಬ್ಬರಿಗೆ ಮಾರಿ ಮದುವೆ ಮಾಡಿಸಿದ ಸೋಷಿಯಲ್ ಮೀಡಿಯಾ ಫ್ರೆಂಡ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
