ಅಹಮದಾಬಾದ್​:ತನ್ನ ಪತ್ನಿ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರೆ ಅಂಥ ಪತಿಗೆ ಸ್ವರ್ಗ ಮೂರೇ ಗೇಣು. ಆದರೆ, ಇಲ್ಲಿ ತನ್ನ ತಾಯಿಯ ಆರೈಕೆ ಮಾಡಿದ ಪತ್ನಿಗೆ ಪತಿಯೊಬ್ಬ ವಿಚ್ಛೇದನದ ಬಳುವಳಿ ಕೊಟ್ಟು ಆಕೆಯ ಪಾಲಿಗೆ ಖಳನಾಯಕನಾಗಿದ್ದಾನೆ.
ವಡೋದರ ಮೂಲದ ರಿಯಾಲ್ಟಿ ಡೆವೆಲಪರ್​ ಈ ಕೃತ್ಯ ಎಸಗಿದವನು. ಇದೀಗ ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಬೀದಿಗೆ ಬರುವಂತಾಗಿದೆ.ರಿಯಾಲ್ಟಿ ಡೆವೆಲಪರ್​ನ ತಾಯಿ ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಾಗಿದ್ದರು. ಈತನ ಪತ್ನಿ ದಿನವೂ ಆಸ್ಪತ್ರೆಗೆ ಹೋಗಿ ಅತ್ತೆಯ ಆರೈಕೆ ಮಾಡುತ್ತಿದ್ದಳು. ಆತನ ತಾಯಿ ಚೇತರಿಸಿಕೊಂಡ ಬಳಿಕ ಅವರನ್ನು ಮನೆಗೆ ಕರೆತರಲಾಗಿತ್ತು. ಅವರ ಜತೆಗೆ ಈತನ ಪತ್ನಿ ಮತ್ತು ಮಕ್ಕಳೂ ಮನೆಗೆ ಮರಳಿದ್ದರು.
ಇದನ್ನೂ ಓದಿ:ಧಾರಾಕಾರ ಮಳೆಯಲ್ಲೂ ಪೇದೆ ಮಾಡಿದ ಕೆಲಸಕ್ಕೆ ಸಿಕ್ತು ಭರ್ಜರಿ ಮೆಚ್ಚುಗೆ!
ತಾಯಿಯನ್ನು ಮಾತ್ರ ಒಳಗೆ ಕರೆದುಕೊಂಡ ಆತ, ಜ್ವರದಿಂದ ಬಳಲುತ್ತಿರುವೆ. ನಿನಗೆ ಕರೊನಾ ಸೋಂಕು ತಗುಲಿರಬಹುದು. ಹೋಗಿ ಚಿಕಿತ್ಸೆ ಪಡೆದುಕೊಂಡ ನಂತರ ಮನೆಗೆ ಬಾ ಎಂದು ಒತ್ತಾಯಿಸಲಾರಂಭಿಸಿದ. ಆದರೆ ಆಕೆ ಇದಕ್ಕೆ ಒಪ್ಪದೇ ಹೋದಾಗ ಆಕೆಯನ್ನು ಚೆನ್ನಾಗಿ ಥಳಿಸಿ, ಇಬ್ಬರು ಮಕ್ಕಳೊಂದಿಗೆ ಆಕೆಯನ್ನು ಮನೆಯಿಂದ ಹೊರದೂಡಿದ್ದ.
ಅಹಮದಾಬಾದ್​ನಲ್ಲಿ ಇದ್ದ ತಮ್ಮ ಇನ್ನೊಂದು ಫ್ಲ್ಯಾಟ್​ನಲ್ಲಿ ಮಕ್ಕಳೊಂದಿಗೆ ಇದ್ದ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಳು. ಈ ವಿಷಯ ತಿಳಿದು ಅಲ್ಲಿಗೆ ತೆರಳಿದ ಮಹಾಶಯ, ನೀನು ಏಕೆ ಇಲ್ಲಿದ್ದೀಯಾ? ಇಲ್ಲಿ ಇರಲು ನಿನಗೆ ಹೇಳಿದ್ದು ಯಾರು ಎಂದು ದಬಾಯಿಸಿ, ಕತ್ತು ಹಿಡಿದು ಮನೆಯಿಂದ ಹೊರದೂಡಿದ್ದಾನೆ. ಅಲ್ಲದೆ, ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇದರಿಂದ ಎಚ್ಚೆತ್ತುಕೊಂಡ ಆಕೆ, ಪೊಲೀಸ್​ ಠಾಣೆಗೆ ಹೋಗಿ ತನ್ನ ಪತಿಯ ದೌರ್ಜನ್ಯವನ್ನು ವಿವರಿಸಿ, ದೂರು ದಾಖಲಿಸಿದ್ದಾಳೆ.
ಉದ್ಯೋಗ ಕೊಡಿಸುವ ನೆಪದಲ್ಲಿ ಯುವತಿಯರನ್ನು ಕರೆತಂದು ಅಲ್ಲಿ ಮಾಡುತ್ತಿದ್ದುದೇನು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + two =
Remember me
