ನವದೆಹಲಿ:ಮಣಿಪುರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಐದನೇ ಸೆಮಿಸ್ಟರ್ ಕಂಪ್ಯೂಟರ್ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಆಲ್ಬರ್ಟ್ ಸಾರಂಗ್ಥೆಮ್, ವಿಂಟೇಜ್ ಬಜಾಜ್-150 ಸ್ಕೂಟರ್ ಅನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವೆಹಿಕಲ್ (EV) ಆಗಿ ‘Samadon EV II’ ಎಂದು ಪರಿವರ್ತಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಇದೇ ರೀತಿಯಲ್ಲಿ ಬೈಕನ್ನು ಮಾರ್ಪಡಿಸಿದ ಆಲ್ಬರ್ಟ್. ಪುರಾಣದ ದೈವಿಕ ಹಾರುವ ಕುದುರೆಯಿಂದ ಪ್ರೇರಿತರಾಗಿ ತನ್ನ ಎರಡೂ ಇ-ವಾಹನಗಳಿಗೆ ‘ಸಮಾಡಾನ್’ ಎಂದು ನಾಮಕರಣ ಮಾಡಿದ್ದಾನೆ.
ಪರಿಸರ ಸ್ನೇಹಿ ಎಲೆಕ್ಟ್ರಿಕ್ ವೆಹಿಕಲ್ ವಿಶೇಷತೆ:ಒಂದೇ ಎಲೆಕ್ಟ್ರಿಕ್ ಚಾರ್ಜ್‌ನಲ್ಲಿ 50 ಕಿ.ಮೀ ವರೆಗೆ ಚಲಿಸುವ ಇ-ಸ್ಕೂಟರ್ ಪೂರ್ಣ ಚಾರ್ಜ್‌ಗೆ ಸುಮಾರು 2.5 ಗಂಟೆಗಳ ಅಗತ್ಯವಿದೆ.
ಐದು ದಶಕಗಳ ಹಿಂದೆ ಆಲ್ಬರ್ಟ್‌ನ ದಿವಂಗತ ತಾಯಿಯ ಅಜ್ಜನ ಮಾಲೀಕತ್ವದಲ್ಲಿ, ಬಜಾಜ್-150 ಸ್ಕೂಟರ್ ಇತ್ತು. ಸಂಬಂಧಿಕರ ಮನೆಯಲ್ಲಿ ತುಕ್ಕು ಹಿಡಿದಿತ್ತು. ಆಲ್ಬರ್ಟ್ ಸ್ಕೂಟರ್​ಗೆ ಮೇಕ್ ಓವರ್ ಮಾಡಬೇಕು ಎಂದು ನಿರ್ಧರಿಸಿದನು. ಆಲ್ಬರ್ಟ್, ಇಂಫಾಲ್‌ನಲ್ಲಿ ಇಂಟರ್ನೆಟ್ ಸಂಪನ್ಮೂಲಗಳು ಮತ್ತು ಕಾರ್ಯಾಗಾರಗಳ ಮೂಲಕ ತಮ್ಮ ಕೌಶಲ್ಯಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಂಡನು. ಅಲ್ಲಿ ಅವರು ಇ-ರಿಕ್ಷಾಗಳ ಕಾರ್ಯವಿಧಾನವನ್ನು ವೀಕ್ಷಿಸಿ ಟೆಕ್ನಾಲಜಿಯ ಕುರಿತಾಗಿ ತಿಳಿದುಕೊಂಡನು.
ಇಂಧನ ಚಾಲನೆಯಲ್ಲಿರುವ ವಾಹನವನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು, ಆಲ್ಬರ್ಟ್ ಎಂಜಿನ್, ಕಾರ್ಬ್ಯುರೇಟರ್ ಮತ್ತು ಸಂಬಂಧಿತ ಭಾಗಗಳಂತಹ ಘಟಕಗಳನ್ನು ತೆಗೆದುಹಾಕಿದನು. ಅವುಗಳನ್ನು ಮೋಟಾರ್, ವೇಗ ನಿಯಂತ್ರಕ, ಬ್ಯಾಟರಿ ಮತ್ತು ಇತರ ಅಗತ್ಯ ಘಟಕಗಳೊಂದಿಗೆ ಬದಲಾಯಿಸಿದ. ಆಲ್ಬರ್ಟ್ಗೆ ಅವರ ಅನ್ವೇಷಣೆಗೆ ಬೇಕಾದ ಪ್ರಮುಖ ಭಾಗಗಳು, ಯಾಂತ್ರಿಕ ಉಪಕರಣಗಳ ಇಂಫಾಲ್ ಮಾರುಕಟ್ಟೆಯಲ್ಲಿ ಸಿಗುತ್ತಿರಲಿಲ್ಲ. ಹೀಗಾಗಿ ಮೇಕ್ ಓವರ್ ಪ್ರಕ್ರಿಯೆಯನ್ನು ಎಂಟು ತಿಂಗಳವರೆಗೆ ನಡೆಯಿತ್ತು. ಆಲ್ಬರ್ಟ್ ಮೋಟಾರ್, ಬ್ಯಾಟರಿ ಮತ್ತು ವೇಗ ನಿಯಂತ್ರಕದಂತಹ ಪ್ರಮುಖ ಗಾಡಿ ಭಾಗಗಳನ್ನು ಖರೀದಿಸಿದ. ಆಲ್ಬರ್ಟ್‌ನ ಎಲೆಕ್ಟ್ರಿಕ್ ವಾಹನ ಉದ್ಯಮವು 2021 ರಲ್ಲಿ ‘Samadon EV I.’ ಮೂಲಕ ಯಶಸ್ವಿಯಾಗಿ ಮುಗಿಯಿತ್ತು.
ಆಲ್ಬರ್ಟ್ ಯಾಂತ್ರಿಕ ಪ್ರತಿಭೆಯನ್ನು ಗುರುತಿಸಿ, ಸಾರಿಗೆ ಸಚಿವ ಖಾಶಿಮ್ ವಶುಮ್ ಅವರು ಆಲ್ಬರ್ಟ್‌ಗೆ ಬಹುಮಾನ ನೀಡಿದರು ಮತ್ತು ಅವರು 2022 ರಲ್ಲಿ ಅವರ ಇಂಜಿನಿಯರಿಂಗ್ ಸಂಸ್ಥೆಯಿಂದ ಮೆಚ್ಚುಗೆಯ ಪ್ರಮಾಣಪತ್ರವನ್ನು ಪಡೆದರು.
ಮಣಿಪುರ ಸಾರಿಗೆ ಇಲಾಖೆಯ ಅಧಿಕಾರಿಗಳು ವ್ಯಕ್ತಿಗಳು ‘ಟೈಪ್ ಅನುಮೋದನೆ’ ಪಡೆದ ನಂತರ ಅಂತಹ ವಾಹನ ರೂಪಾಂತರಗಳನ್ನು ಕೈಗೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ.  ಆಲ್ಬರ್ಟ್ ಕಥೆಯು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಜಾಣ್ಮೆ ಮತ್ತು ನಾವೀನ್ಯತೆಗೆ ಸಾಕ್ಷಿಯಾಗಿದೆ.
KGF ಮ್ಯೂಸಿಕ್ ಡೈರೆಕ್ಟರ್ ‘ರವಿ ಬಸ್ರೂರ್​ ‘ ನಿಜವಾದ ಹೆಸರೇನು ಗೊತ್ತಾ?; ಇನ್ನೊಬ್ಬರ ಐಡೆಂಟಿನೆ ಇವರ ಹೆಸರು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 5 =
Remember me
