ಉತ್ತರಪ್ರದೇಶ:ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐವರು ನೌಕರರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗೌರವ್ ಗುಪ್ತಾನನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್ ಗುಪ್ತಾನನ್ನು ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಬಂಧಿಸಲಾಗಿದೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಅಡಗಿಸಿಡಲು ಕೆಲವರು ಸಹಾಯ ಮಾಡಿದ್ದರು. ಪ್ಲಾಸ್ಟಿಕ್ ಫ್ಯಾಕ್ಟರಿ ನೆಪದಲ್ಲಿ ಮಕ್ಕಳ ಆಟಿಕೆ ಬಂದೂಕುಗಳಲ್ಲಿ ಸಿಡಿಸಲು ಪಟಾಕಿ ಮತ್ತಿತರ ಸ್ಫೋಟಕಗಳನ್ನು ಗೌರವ್ ತಯಾರಿಸುತ್ತಿದ್ದ ಎಂಬುದು ಬಯಲಾಗಿದೆ.
ಮೀರತ್ ಪೊಲೀಸರು ಮತ್ತು ಎಸ್‌ಒ ಜಿ ತಂಡ ಲೋಹಿಯಾ ನಗರ ಸ್ಫೋಟದ ಪ್ರಮುಖ ಆರೋಪಿ, ಜಾಗೃತಿ ವಿಹಾರ್ ನಿವಾಸಿ ಗೌರವ್ ಗುಪ್ತಾನನ್ನು ಗುರುವಾರ ರಾತ್ರಿ ಬಂಧಿಸಿದೆ. ಅರೋಪಿ ಗೌರವ್ ದೆಹಲಿಗೆ ಹೋಗಿ ತಲೆಮರೆಸಿಕೊಂಡಿದ್ದ. ಪೊಲೀಸರು ಗೌರವ್ ಮತ್ತು ಅವರ ಕೆಲವು ಹತ್ತಿರದ ಸಂಬಂಧಿಕರನ್ನು ನಿರಂತರವಾಗಿ ಹಿಂಬಾಲಿಸಿದರು. ನಂತರ ಅವರನ್ನು ಗುರುವಾರ ರಾತ್ರಿ ಬಂಧಿಸಲಾಯಿತು.
ವಿಚಾರಣೆ ವೇಳೆ ಗೌರವ್ ಗುಪ್ತಾ ಪೊಲೀಸರಿಗೆ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾನೆ. ಎರಡನೇ ಮಹಡಿಯಲ್ಲಿರುವ ಗೌರವ್ ಗುಪ್ತಾ ಅವರ ಕಾರ್ಖಾನೆಯಲ್ಲಿ ಇರಿಸಲಾಗಿದ್ದ ಸ್ಫೋಟಕ ಮತ್ತು ದಹಿಸುವ ವಸ್ತುಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಗೌರವ್ ಗುಪ್ತಾ ತಮ್ಮ ಪ್ಲಾಸ್ಟಿಕ್ ಪೈಪ್ ತಯಾರಿಸುವ ಕಾರ್ಖಾನೆಯ ಕೆಲಸ ಸ್ವಲ್ಪ ನಿಧಾನವಾಗಿ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳಿಗೆ ಬಹಿರಂಗಪಡಿಸಿದ್ದು, ದೀಪಾವಳಿ ಸಮೀಪದಲ್ಲಿ ಮಕ್ಕಳ ಆಟಿಕೆ ಬಂದೂಕುಗಳಲ್ಲಿ ಬಳಸುವ ಕಾರ್ಟ್ರಿಜ್​​​​ಗಳನ್ನು ತಯಾರಿಸುವ ಕೆಲಸ ಪ್ರಾರಂಭ ಮಾಡಲಾಯಿತು. ಕಾರ್ಟ್ರಿಜ್​​​​ಗಳನ್ನು ಮಾಡಿದ ನಂತರ, ಪೊಟ್ಯಾಶಿಯಂ ಕ್ಲೋರೇಟ್ ಅನ್ನು ಸಿಂಪಡಿಸುವ ಮೂಲಕ ಅವುಗಳನ್ನು ಪ್ಯಾಕ್ ಮಾಡಲಾಯಿತು.ಸಹರಾನ್‌ಪುರ ಮತ್ತು ಪಂಜಾಬ್‌ನಲ್ಲಿ ಸರಕುಗಳನ್ನು ಸರಬರಾಜು ಮಾಡಬೇಕಾಗಿತ್ತು. ಸರಕುಗಳನ್ನು ಸಿದ್ಧಪಡಿಸಿದ ನಂತರ, ಅವುಗಳನ್ನು ಪ್ಯಾಕ್ ಮಾಡಿ ಸಹರಾನ್‌ಪುರ ಮತ್ತು ಪಂಜಾಬ್‌ನ ಕೆಲವು ವಿತರಕರಿಗೆ ಸರಬರಾಜು ಮಾಡಬೇಕೆಂದು ಗೌರವ್ ಗುಪ್ತಾ ತಿಳಿಸಿದ್ದಾನೆ. ಆದರೆ ಸಂಪೂರ್ಣ ಸ್ಟಾಕ್​​​​ ಸಿದ್ಧವಾಗುವ ಮುನ್ನವೇ ಸ್ಫೋಟಗೊಂಡಿದೆ. ವಸ್ತುಗಳನ್ನು ಖರೀದಿಸಿದವರ ಸಂಪೂರ್ಣ ವಿವರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ವಿಚಾರಣೆ ವೇಳೆ ಗೌರವ್ ಖೇರ್ ನಗರದಿಂದ ಮೂರು ಗೋಣಿಚೀಲಗಳಲ್ಲಿ ಪೊಟಾಷಿಯಂ ಕ್ಲೋರೇಟ್ ಖರೀದಿಸಿದ್ದನ್ನು ಬಹಿರಂಗಪಡಿಸಿದ್ದಾನೆ. ಈ ಚೀಲಗಳಲ್ಲಿ ಒಂದನ್ನು ಆಟಿಕೆ ಗನ್ ಕಾರ್ಟ್ರಿಜ್​​​​ಗಳನ್ನು ತಯಾರಿಸಲು ಬಳಸಲಾಗುತ್ತಿತ್ತು. ಉಳಿದ ಸರಕುಗಳನ್ನು ಕಾರ್ಖಾನೆಯಲ್ಲಿಯೇ ಇರಿಸಲಾಗಿತ್ತು. ಖೇರ್ ನಗರದಿಂದ ಮಾಲು ಮಾರಾಟ ಮಾಡುತ್ತಿದ್ದ ಅಂಗಡಿಯವರ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನೂ ಪೊಲೀಸರು ಪಡೆದುಕೊಂಡಿದ್ದು, ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ.
ಗೌರವನನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಪೊಲೀಸರು ಸ್ಫೋಟದ ಬಗ್ಗೆ ಕೆಲವು ಉಹಾಪೋಹಗಳನ್ನು ಮಾಡಿದ್ದಾರೆ. ಕಾರ್ಖಾನೆಯಲ್ಲಿ ವಾಸಿಸುವ ಬಿಹಾರದ ಕಾರ್ಮಿಕರು ಬೆಳಗ್ಗೆ ಚಹಾ ಮತ್ತು ಉಪಹಾರ ಮಾಡಲು ಗ್ಯಾಸ್ ಹಚ್ಚಿರಬಹುದು ಎಂದು ನಂಬಲಾಗಿದೆ. ಈ ಸಮಯದಲ್ಲಿ ಬೆಂಕಿ ದಹಿಸುವ ವಸ್ತು ಪೊಟ್ಯಾಸಿಯಮ್ ಕ್ಲೋರೈಡ್‌ನೊಂದಿಗೆ ಸಂಪರ್ಕಕ್ಕೆ ಬಂದಿರಬಹುದು. ಇದರ ಪ್ರತಿಕ್ರಿಯೆಯಿಂದ ಬೃಹತ್ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದಾಗಿ, ಈಥೈಲ್ ಅಸಿಟೇಟ್‌ನ ಡ್ರಮ್ ಕೂಡ ಒಡೆದಿರಬಹುದು ಮತ್ತು ಭಾರಿ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಕಟ್ಟಡವು ಚದುರಿದೆ.
ದೆಹಲಿ ಮಾಲಿನ್ಯ: ಇಂದಿನಿಂದ ಏರಿಕೆಯಾಗುವ ನಿರೀಕ್ಷೆ, ಮತ್ತೊಮ್ಮೆ ಅಪ್ಪಳಿಸಲಿದೆ ವಿಷಪೂರಿತ ಗಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
