ನವದೆಹಲಿ:ದೇಶಾದ್ಯಂತ ವಿವಿಧ ರಾಷ್ಟ್ರ ನಿರ್ಮಾಣ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಯುವಕರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೇರಾ ಯುವ ಭಾರತ ವೇದಿಕೆ ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ಮೋದಿ ಭಾನುವಾರ ತಿಳಿಸಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದ 106ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 31 ಬಹಳ ವಿಶೇಷ ದಿನ. ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನವಾಗಿದ್ದು, ಅವರ ಜನ್ಮ ವಾರ್ಷಿಕೋತ್ಸವದಂದು ದೊಡ್ಡ ರಾಷ್ಟ್ರವ್ಯಾಪಿ ಸಂಘಟನೆಗೆ ಅಡಿಪಾಯ ಹಾಕಲಾಗುತ್ತಿದೆ. ಈ ಸಂಘಟನೆಯ ಹೆಸರು ಮೇರಾ ಯುವ ಭಾರತ್, ಅಂದರೆ ಮೈ ಭಾರತ್ ಸಂಸ್ಥೆ ಎಂದು ಹೆಸರಿಸಲಾಗುವುದು. ಅಭಿವೃದ್ಧಿ ಹೊಂದಿದ ಭಾರತ ನಿರ್ವಿುಸುವಲ್ಲಿ ಯುವಶಕ್ತಿಯನ್ನು ಸಂಯೋಜಿಸುವ ವಿಶಿಷ್ಟ ಪ್ರಯತ್ನ ಇದಾಗಿದ್ದು, Mಢಆಜಚ್ಟಚಠಿ.ಜಟಡ.ಜ್ಞಿ ನಲ್ಲಿ ನೋಂದಾಯಿಸಿಕೊಂಡು ವಿವಿಧ ಕಾರ್ಯಕ್ರಮಗಳಿಗೆ ಸೈನ್​ಅಪ್ ಮಾಡಿ ಎಂದು ಯುವಕರಿಗ ಕರೆ ನೀಡಿದರು. ಇಡೀ ದೇಶದಲ್ಲಿ ಹಬ್ಬಗಳ ಸಂಭ್ರಮವಿದೆ. ಈ ಬಾರಿ ಹಬ್ಬಗಳ ಆರಂಭಕ್ಕೂ ಮುನ್ನವೇ ಮಾರುಕಟ್ಟೆಗಳು ಲವಲವಿಕೆಯಿಂದ ಕೂಡಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ಹಬ್ಬ ಹರಿದಿನಗಳಲ್ಲಿ ಸ್ಥಳೀಯರಿಗೆ ಧ್ವನಿ ಎಂಬುದಕ್ಕೆ ಆದ್ಯತೆ ನೀಡಬೇಕು ಎಂದು ಜನರಿಗೆ ಮನವಿ ಮಾಡಿದರು.
ಖಾದಿ ದಾಖಲೆ ಮಾರಾಟ:ದೆಹಲಿಯ ಕನ್ನಾಟ್ ಪ್ಲೇಸ್​ನಲ್ಲಿರುವ ಮಳಿಗೆಯೊಂದರಲ್ಲಿ ಒಂದೇ ದಿನದಲ್ಲಿ 1.25 ಕೋಟಿ ರೂ. ಖಾದಿ ಉತ್ಪನ್ನಗಳ ಮಾರಾಟವಾಗಿದೆ. ಈ ಹಿಂದೆ ಕೇವಲ 30,000 ಕೋಟಿ ರೂ.ಗೆ ಮಾರಾಟವಾಗುತಿತ್ತು. ಈ ತಿಂಗಳು ನಡೆಯುತ್ತಿರುವ ಖಾದಿ ಮಹೋತ್ಸವವು ತನ್ನ ಹಳೆಯ ಮಾರಾಟ ದಾಖಲೆಗಳನ್ನೆಲ್ಲ ಮುರಿದಿದೆ. ಖಾದಿ ಮಾರಾಟವು ನಗರಗಳಿಗೆ ಮಾತ್ರವಲ್ಲದೆ ಹಳ್ಳಿಗಳಿಗೂ ಸಹಾಯವಾಗಲಿದೆ. ನೇಕಾರರು, ಕರಕುಶಲ ಕುಶಲಕರ್ವಿುಗಳು, ರೈತರಿಗೆ ಲಾಭ ಆಗಲಿದೆ ಎಂದು ಪ್ರಧಾನಿ ಹೇಳಿದರು.
ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರ:ಭಾರತವು ಇಂದು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ. ಅನೇಕ ದೊಡ್ಡ ಬ್ರಾ್ಯಂಡ್​ಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ತಯಾರಿಸುತ್ತಿವೆ. ಆ ಉತ್ಪನ್ನಗಳನ್ನು ನಾವು ಅಳವಡಿಸಿಕೊಂಡರೆ ಮೇಕ್ ಇನ್ ಇಂಡಿಯಾ ಪ್ರಚಾರ ಪಡೆಯುತ್ತದೆ. ಉತ್ಪನ್ನವನ್ನು ಖರೀದಿಸುವಾಗ ಯುಪಿಐ ಬಳಸಿ ಎಂದು ಪ್ರಧಾನಿ ಸಲಹೆ ನೀಡಿದರು.
ನ.15 ಜನಜಾತಿಯ ಗೌರವ್ ದಿವಸ್:ಬುಡಕಟ್ಟು ವ್ಯಕ್ತಿ ಲಾರ್ಡ್ ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವದ ದಿನವಾದ ನ.15ರಂದು ಇಡೀ ದೇಶವು ಬುಡಕಟ್ಟು ಹೆಮ್ಮೆಯ ದಿನವನ್ನು ಆಚರಿಸುತ್ತದೆ. ನಿಜವಾದ ಧೈರ್ಯ ಏನು ಮತ್ತು ಒಬ್ಬರ ಸಂಕಲ್ಪದಲ್ಲಿ ದೃಢವಾಗಿ ನಿಲ್ಲುವುದರ ಅರ್ಥವೇನೆಂದು ಅವರ ಜೀವನದಿಂದ ಕಲಿಯಬಹುದು ಎಂದರು.
ವೇಸ್ಟ್ ಟು ವೆಲ್ತ್ ಅಭಿಯಾನಕ್ಕೆ ಪ್ರೇರಣೆ:ಗುಜರಾತಿನ ಅಂಬಾ ಜಿ ಮಂದಿರಕ್ಕೆ ಹೋಗುವ ದಾರಿಯಲ್ಲಿ ನೋಡಬಹುದಾದ ಸ್ಕ್ರಾ್ಯಪ್​ನಿಂದ ಮಾಡಿದ ಶಿಲ್ಪಗಳನ್ನು ಉಲ್ಲೇಖಿಸಿ, ಗುಜರಾತ್ ಸರ್ಕಾರವು ಸ್ಪರ್ಧೆ ಪ್ರಾರಂಭಿಸಿ ತ್ಯಾಜ್ಯದಿಂದ ಕಲಾಕೃತಿ ತಯಾರಿಸುವ ಪ್ರವೀಣರನ್ನು ಆಹ್ವಾನಿಸಬೇಕು ಎಂದು ಸೂಚಿಸಿದರು.
ಅಮೃತ್ ವಾಟಿಕಾ ನಿರ್ಮಾಣ:ದೇಶದ ಪ್ರತಿಯೊಂದು ಹಳ್ಳಿ ಮತ್ತು ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಲು ಇತ್ತೀಚೆಗೆ ವಿನಂತಿಸಲಾಗಿತ್ತು. ಪ್ರತಿ ಮನೆಯಿಂದ ಮಣ್ಣನ್ನು ಸಂಗ್ರಹಿಸಿ ನಂತರ ಕಲಶದಲ್ಲಿ ಇರಿಸಿ ಈ ಅಮೃತ ಕಲಶ ಯಾತ್ರೆಗಳನ್ನು ಹೊರತರಲಾಯಿತು. ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಿದ ಈ ಮಣ್ಣು, ಸಾವಿರಾರು ಅಮೃತ ಕಲಶ ಯಾತ್ರೆಗಳು ದೆಹಲಿ ತಲುಪುತ್ತಿವೆ. ದೆಹಲಿಯಲ್ಲಿ ಆ ಮಣ್ಣನ್ನು ಬೃಹತ್ ಭಾರತ ಕಲಶಕ್ಕೆ ಹಾಕಲಾಗುವುದು ಎಂದರು.
ಕ್ರೀಡಾ ಸಾಧಕರಿಗೆ ಅಭಿನಂದನೆ:ದೇಶದಲ್ಲಿ ಕ್ರೀಡೆಯ ಧ್ವಜ ಹಾರಾಡುತ್ತಿದೆ. ಇತ್ತೀಚೆಗೆ ಏಷ್ಯನ್ ಗೇಮ್ಸ್ ನಂತರ ಭಾರತದ ಆಟಗಾರರು ಪ್ಯಾರಾ ಏಷ್ಯನ್ ಗೇಮ್ಸ್​ನಲ್ಲಿಯೂ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ. ಭಾರತ 111 ಪದಕ ಗೆದ್ದು ಹೊಸ ಇತಿಹಾಸ ನಿರ್ವಿುಸಿದೆ. ಕ್ರೀಡಾಕೂಟದಲ್ಲಿ ಭಾಗವಸಿದ ಎಲ್ಲ ಆಟಗಾರರಿಗೆ ಅಭಿನಂದನೆಗಳು ಎಂದು ಪ್ರಧಾನಿ ಹೇಳಿದ್ದಾರೆ.
ವಾರಕ್ಕೆ 55 ಗಂಟೆ ಅಥವಾ ಅದಕ್ಕೂ ಹೆಚ್ಚು ಕೆಲಸ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ: ಅಧ್ಯಯನದ ವಿವರ ಇಲ್ಲಿದೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nineteen =
Remember me
