ನವದೆಹಲಿ:ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದು ವರ್ಷವಿಲ್ಲ. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ರಾಜಕೀಯ ರಂಗೇರಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಬೆಳವಣಿಗೆಗಳು ಬದಲಾಗುತ್ತಿವೆ. ಕೇಂದ್ರ ಸಚಿವ ಹಾಗೂ ನಿಶಾದ್ ಪಕ್ಷದ ಅಧ್ಯಕ್ಷರು ಆಗಿರುವ ಸಿ ಡಾ. ಸಂಜಯ್​​ ನಿಶಾದ್ ಸಮುದಾಯದ ಸಬಲೀಕರಣಕ್ಕಾಗಿ ಹಾಗೂ ಮೀಸಲಾತಿಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ನಿಮ್ಮಿಷ್ಟದ ಪಿಜ್ಜಾ ಇನ್ಮುಂದೆ 49 ರೂ.ಗೆ ಸಿಗಲಿದೆ…
ಬಳಿಕ ಪ್ರತಿಕ್ರಿಯಿಸಿದ ಅವರು, ನನ್ನ ಇಡೀ ಜೀವನ ನಿಶಾದ್‌ಗೆ ಮೀಸಲಾಗಿದೆ. ಕೆಲವು ಹಾವುಗಳು ಸಮಾಜವನ್ನು ದಾರಿ ತಪ್ಪಿಸುತ್ತಿವೆ. ವಿರೋಧ ಪಕ್ಷಗಳು ನಮ್ಮ ವಿರುದ್ಧ ಷಡ್ಯಂತ್ರ ರೂಪಿಸುತ್ತಿವೆ ಎಂದಿದ್ದಾರೆ.
ಇಂತಹ ಪತ್ರ ಬರೆಯುವುದು ಹೊಸದೇನಲ್ಲ. ಈ ಹಿಂದೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನವೇ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದರು.
डॉक्टर संजय निषाद ने खून से लिखा पत्र
निषाद पार्टी के राष्ट्री अध्यक्ष ने पीएम मोदी को खून से लिखा पत्र
समाज को एक जुट करने के लिए लिखा खून से पत्रpic.twitter.com/ebuDAs9Kls
— Sumit Shrivastav (@Shivmay05)July 21, 2023

ಆ ಪತ್ರದಲ್ಲಿ ಸಂಜಯ್ ನಿಶಾದ್ ಅವರು ಎಸ್‌ಸಿ ವರ್ಗದಲ್ಲಿ ಮೀನುಗಾರರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅವರು ತಮ್ಮ ಪಕ್ಷವಾದ ನಿಶಾದ್ ಪಕ್ಷದ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಗೋರಖ್‌ಪುರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಎಸ್‌ಸಿ ವರ್ಗದ ಮೀನುಗಾರರಿಗೆ ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಿದರು. ಸಂಜಯ್ ನಿಶಾದ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ರಾಷ್ಟ್ರಪತಿ, ಪ್ರಧಾನಿ ಮತ್ತು ಯುಪಿ ಮುಖ್ಯಮಂತ್ರಿಗಳಿಗೆ ರಕ್ತದಲ್ಲಿ ಪತ್ರ ಬರೆದಿದ್ದರು.
ಒಳ ಉಡುಪು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ರಿಲಯನ್ಸ್ ರಿಟೇಲ್; 85 ರೂ.ನಿಂದ ಬೆಲೆ ಪ್ರಾರಂಭ…

Sign in to your account
Please enter an answer in digits:16 + eight =
Remember me
