ಐಜ್ವಾಲ್​: ಮಿಜೋರಾಂನ ಶಾಸಕ ಝೆಡ್ ಆರ್​ ತಾಯಿಂಸಾಂಗ ಅವರು ಚಂಪಾಯಿ ಜಿಲ್ಲೆಯ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ವೈದ್ಯರಿಲ್ಲದ ಕಾರಣ ಗರ್ಭಿಣಿಯೊಬ್ಬರ ಹೆರಿಗೆ ಮಾಡಿಸಿದ್ದರು. ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಶಾಸಕರ ಈ ಕಾರ್ಯವೀಗ ದೇಶದ ಗಮನಸೆಳೆದಿದೆ.
ತಾಯಿಂಸಾಂಗ ಅವರು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು, ಒಬೆಸ್ಟೆಟ್ರಿಕ್ಸ್​ ಮತ್ತು ಗೈನಕಾಲಜಿಯಲ್ಲಿ ಪರಿಣತರು. ಹಿಂದುಳಿದ ಪ್ರದೇಶಕ್ಕೆ ತೆರಳಿದಾಗ ವೈದ್ಯಕೀಯ ತುರ್ತು ಇದ್ದರೆ ಕೂಡಲೇ ಅವರು ಶಾಸಕರೆನ್ನುವುದನ್ನು ಮರೆತು ಡಾಕ್ಟರ್ ಆಗಿ ಕರ್ತವ್ಯಕ್ಕೆ ಇಳಿದುಬಿಡುತ್ತಾರೆ. ಮ್ಯಾನ್ಮಾರ್​ ಗಡಿ ಪ್ರದೇಶಕ್ಕೆ ಸಮೀಪ ಇರುವ ಚಂಪಾಯಿ ನಾರ್ತ್​ನಲ್ಲಿ ಇರುವ ತನ್ನ ವಿಧಾನಸಭಾ ಕ್ಷೇತ್ರ ಭೇಟಿ ವೇಳೆ ಅವರು ಈ ಹೆರಿಗೆ ಮಾಡಿಸಿದ್ದಾರೆ.
ಇದನ್ನೂ ಓದಿ:ಬ್ಯಾಂಕ್​ ದರೋಡೆಗಿಳಿದವನಿಗೆ ಕಾದು ಕುಳಿತಿತ್ತು ವಿಲಕ್ಷಣ ಸಾವು!
ನಾಗೂರ್ ಗ್ರಾಮದ ಸಿ ಲಾಲ್ಹ್​ಮಾಂಗಾಯಿಸಂಗಿ (38) ಅವರ ಎರಡನೇ ಮಗುವಿನ ಹೆರಿಗೆಯನ್ನೇ ತಾಯಿಂಸಾಂಗ ಮಾಡಿಸಿದ್ದು. ಚಂಪಾಯಿ ಹಾಸ್ಪಿಟಲ್​ನ ವೈದ್ಯಕೀಯ ಅಧಿಕಾರಿ ರಜೆಯಲ್ಲಿ ಹೋಗಿದ್ದಾರೆ. ಮಹಿಳೆಯ ಆರೋಗ್ಯ ಪರಿಸ್ಥಿತಿ ಹದಗೆಟ್ಟಿರುವ ಕಾರಣ 200 ಕಿ.ಮೀ. ದೂರದ ಐಜ್ವಾಲ್​ನ ಆಸ್ಪತ್ರೆಗೆ ಹೋಗುವಷ್ಟು ವ್ಯವಧಾನವಿರಲಿಲ್ಲ. ಹೀಗಾಗಿ ಡಾಕ್ಟರ್ ಆಗಿ ನನ್ನ ಕರ್ತವ್ಯವನ್ನು ನಿರ್ವಹಿಸಿದೆ ಎಂದು ತಾಯಿಂಸಾಂಗ ತಿಳಿಸಿದ್ದಾರೆ. (ಏಜೆನ್ಸೀಸ್)
ಅವಿವಾಹಿತೆ ತಾಯಿಯಾದಳು: ಶಿಶುವನ್ನು ಆರನೇ ಮಹಡಿಯಿಂದ ಕೆಳಕ್ಕೆ ಎಸೆದ್ಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
