ಬೆಂಗಳೂರು:ಬಿಜೆಪಿಯಲ್ಲಿದ್ದುಕೊಂಡು ಸಮಯ ಸಿಕ್ಕಾಗ ತಪ್ಪದೇ ಬಿಜೆಪಿ ಮುಖಂಡರ ಕಾಲೆಳೆಯುವುದರಲ್ಲಿ ಸಿದ್ದಹಸ್ತರಾಗಿರುವ ಸುಬ್ರಮಣಿಯನ್ ಸ್ವಾಮಿ ಅವರೆಂದರೆ ಬಿಜೆಪಿಗರಿಗೆ ಒಂದು ರೀತಿ ಅಷ್ಟಕಷ್ಟೇ. ಅವರ ಹರಿತ ಚುಚ್ಚು ಮಾತುಗಳನ್ನು ಬಿಜೆಪಿಗರಿಗೆ ಅರಗಿಸಿಕೊಳ್ಳುವುದು ಕಷ್ಟವೇ.
ಇದೀಗ ಮತ್ತೆ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡಿರುವ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರ ಸರ್ಕಾರ ತನ್ನ ಧೋರಣೆಗಳಿಂದ ವಿಶ್ವಮಟ್ಟದಲ್ಲಿ ಇತರ ದೇಶಗಳಿಂದ ದೂರವಾಗುತ್ತಿದೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.
Modi's govt should write a book a global best seller: "How to lose friends and encourage enemies" to counter Dale Carnegie's "How to win friends and influence the people". We have lost Nepal, Bhutan, Sri Lanka and encouraged China[Depsang] and Pakistan[Army joint exercise]
— Subramanian Swamy (@Swamy39)March 23, 2021

ಇದನ್ನೂ ಓದಿ:ನೀವು ಸಿಎಂ ಆಗೋದಾದ್ರೆ ಜೆಡಿಎಸ್‌ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್‌.ಡಿ. ರೇವಣ್ಣ ಕೊಟ್ರು ಆಫರ್‌
ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಅವರು, ‘ಕೇಂದ್ರ ಸರ್ಕಾರ ಸ್ನೇಹಿತರನ್ನು ಹೇಗೆ ಕಳೆದುಕೊಳ್ಳುವುದು ಮತ್ತು ಶತ್ರುಗಳನ್ನು ಸೃಷ್ಟಿಸಿಕೊಳ್ಳುವುದು ಹೇಗೆ ಎಂಬ ಒಂದು ಪುಸ್ತಕ ಬರೆದರೆ ಅದು ಜಗತ್ತಿನಲ್ಲೇ ಅತಿ ಹೆಚ್ಚು ಮಾರಾಟವಾಗುವ ಪುಸ್ತಕವಾಗಬಹುದು ಎಂದು ಕಾಲೆಳದಿದ್ದಾರೆ. ಡೆಲ್​ ಕಾರ್ನೆಗಿ ಅವರ ಹೇಗೆ ಸ್ನೇಹಿತರನ್ನು ಗೆಲ್ಲುವುದು ಮತ್ತು ಜನರ ಮೇಲೆ ಪರಿಣಾಮ ಬೀರುವುದು ಎಂಬ ಪುಸ್ತಕಕ್ಕೆ ವಿರುದ್ಧವಾಗಿ ಅವರು ಬರೆಯಬಹುದು ಎಂದಿದ್ದಾರೆ. ನಾವು ನೇಪಾಳ, ಭೂತಾನ್, ಶ್ರೀಲಂಕಾ ಕಳೆದುಕೊಂಡೆವು. ಚೀನಾ, ಪಾಕಿಸ್ತಾನದ ಜೊತೆ ದಿನನಿತ್ಯ ವಿವಾದ ನಡೆದಿದೆ’ ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ತನ್ನ ಆಕ್ರಮಣಕಾರಿ ನೀತಿಯಿಂದ ನಾವು ನೆರೆಹೊರೆಯ ರಾಷ್ಟ್ರಗಳ ಸ್ನೇಹವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಅವರು ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಮಾವೋವಾದಿಗಳಿಂದ ಐಇಡಿ ಸ್ಪೋಟ: ಮೂವರು ಪೊಲೀಸ್ ಸಿಬ್ಬಂದಿ ಸಾವು

ಮದುವೆ ಖರ್ಚು ಉಳಿಸಿ, ಮನೆ ಖರೀದಿಸಿದ ಜೋಡಿ! ಮದುವೆಯಲ್ಲಿ ಇದ್ದಿದ್ದು ಮೂರೇ ಅತಿಥಿಗಳು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
