ನವದೆಹಲಿ: ಮುಂಗಾರು ಮಳೆ ಮಾರುತಗಳು ಜೂನ್​ 1 ರಂದು ಕೇರಳ ಪ್ರವೇಶ ಮಾಡಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿಸಮುದ್ರದ ಅಗ್ನೇಯ ಮತ್ತು ಪೂರ್ವ ಮಧ್ಯ ಭಾಗದಲ್ಲಿ ಮೇ 31ರಿಂದ ಜೂನ್​ 4ರವರೆಗೆ ಕಡಿಮೆ ಒತ್ತಡದ ವಾತಾವರಣ ರೂಪುಗೊಳ್ಳುತ್ತದೆ. ಈ ವಾತಾವರಣ ಮುಂಗಾರು ಮಳೆ ಮಾರುತಗಳು ಕೇರಳ ಪ್ರವೇಶಕ್ಕೆ ಅನುಕೂಲವಾಗಿದ್ದು ಜೂನ್​ 1ರಂದು ಕೇರಳಕ್ಕೆ ಪ್ರವೇಶ ಪಡೆಯಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿಹತ್ತೇ ನಿಮಿಷಗಳಲ್ಲಿ ಸಿಗುತ್ತೆ ಉಚಿತ ಪ್ಯಾನ್ ಕಾರ್ಡ್!
ಕರ್ನಾಟಕ್ಕೆ ಜೂನ್​ ಮೊದಲ ವಾರದಲ್ಲಿ ಮಾರುತಗಳು ಪ್ರವೇಶ ಮಾಡಲಿವೆ. ಮುಂಗಾರು ಮಳೆ ಮಾಲ್ಡಿವ್ಸ್​, ಅಂಡಮಾನ್​ ಮತ್ತು ನಿಕೋಬರ್​, ದಕ್ಷಿಣ ಬಂಗಾಳ ಕೊಲ್ಲಿಯನ್ನು ಆವರಿಸಲಿದೆ. ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಒಮಾನ್​ ಕರಾವಳಿಯತ್ತ ಸಾಗಲಿದೆ. ಅಲ್ಲದೆ ಮುಂದಿನ 48 ಗಂಟೆಗಳಲ್ಲಿ ಮುಂಗಾರು ಮಳೆ ಮಾಲ್ಡೀವ್ಸ್​ ಪ್ರವೇಶ ಮಾಡಲಿದೆ.
ಕೇರಳದ ಕರಾವಳಿ ಪ್ರದೇಶದ ಮೀನುಗಾರರಿಗೆ ಮೇ 29ರಿಂದ ಜೂ. 4ರವರೆಗೆ ಮೀನು ಹಿಡಿಯಲು ಸಮುದ್ರಕ್ಕೆ ತೆರಳದಂತೆ ಇಲಾಖೆ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)
ಕರೊನಾ ಅಂತ್ಯಗೊಳಿಸಲು ಭಕ್ತನ ಶಿರಚ್ಛೇದ ಮಾಡಿದ ಅರ್ಚಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 3 =
Remember me
