ನವದೆಹಲಿ: ವಿದೇಶದಿಂದ ಭಾರತಕ್ಕೆ ಬರುವವರಿಗೆ ಗಿಫ್ಟ್ ಬೇಕು ಎಂದು ನಮಗೆ ಇಷ್ಟವಾದದ್ದನ್ನು ಹೇಳುತ್ತೇವೆ.. ಆದರೆ ತಾಯಿಯೊಬ್ಬರು ಮಗಳಿಗೆ ಅಲ್ಲಿಂದ 10 ಕೆಜಿ ಟೊಮ್ಯಾಟೋ ಉಡುಗೊರೆಯಾಗಿ ತರುವಂತೆ ಹೇಳಿದ್ದಾರೆ. ಭಾರತದಲ್ಲಿ ಟೊಮ್ಯಾಟೋ ದರ ಏರಿಕೆಯ ಪರಿಣಾಮವಾಗಿ ತಾಯಿ ಕೇಳಿದ ಈ ಗಿಫ್ಟ್​​ ಸಖತ್​ ಸುದ್ದಿಯಲ್ಲಿದೆ.

ಇದನ್ನೂ ಓದಿ:VIDEO | ಮಮ್ಮಿ..ಮಮ್ಮಿ.. ಮಗುವಿನ ಕೂಗು ತಾಯಿಗೆ ಕೇಳಿಸಲಿಲ್ಲ; ಪತಿಯೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಮಹಿಳೆ ಸಾವು!
ಭಾರತದಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಭಾರೀ ಏರಿಕೆಯಾದ ನಂತರ ವಿಚಿತ್ರ ಕಥೆಗಳು ವೈರಲ್ ಆಗುತ್ತಿವೆ. ಟೊಮ್ಯಾಟೋ ಕಳ್ಳತನ, ಉಡುಗೊರೆಯಾಗಿ ನೀಡುವುದು ಹೀಗೆ ವಿಚಿತ್ರ ಕಥೆಗಳನ್ನು ಕೇಳಿದ್ದೇವೆ. ಆದರೆ ದುಬೈನಲ್ಲಿ ನೆಲೆಸಿರುವ ಯುವತಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಕೆಯ ತಾಯಿ ಕೇಳಿದ ವಿಚಿತ್ರ ಉಡುಗೊರೆಯ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?
‘ನನ್ನ ತಂಗಿ ತನ್ನ ಮಕ್ಕಳ ಬೇಸಿಗೆ ರಜೆಗೆ ದುಬೈನಿಂದ ಭಾರತಕ್ಕೆ ಬರುತ್ತಿದ್ದಾಳೆ.. ದುಬೈನಿಂದ ಏನಾದರೂ ಬೇಕಾ? ಅಮ್ಮನನ್ನು ಕೇಳಿದಾಗ 10 ಕೆಜಿ ಟೊಮ್ಯಾಟೋ ತರಲು ಹೇಳಿದರು. ಅವಳು ನಿಜವಾಗಿ 10 ಕೆಜಿ ಟೊಮ್ಯಾಟೋ ಗಳನ್ನು ಪ್ಯಾಕ್ ಮಾಡಿ ಕಳುಹಿಸಿದ್ದಾಳೆ ಎಂದು ಟ್ವೀಟ್​​ ಮಾಡಿದ್ದಾರೆ. ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್​​ ಮಾಡುತ್ತಿದ್ದಾರೆ.
ಇದನ್ನೂ ಓದಿ:ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಬಾಲಿವುಡ್​​ ನಟ ಅಭಿಷೇಕ್ ಬಚ್ಚನ್ !
ಕೆಲವು ದಿನಗಳ ಹಿಂದೆ ಕೆಜಿಗೆ ರೂ.20ರಷ್ಟಿದ್ದ ಟೊಮ್ಯಾಟೋ ಬೆಲೆ ರೂ.250ಕ್ಕೆ ತಲುಪಿದೆ. ಭಾರತೀಯರು ವಿದೇಶದಲ್ಲಿರುವ ತಮ್ಮ ಸಂಬಂಧಿಕರಿಗೆ ಟೊಮ್ಯಾಟೋ ಉಡುಗೊರೆಯಾಗಿ ತರುವಂತೆ ಕೇಳುವ ಹಂತಕ್ಕೆ ಟೊಮ್ಯಾಟೋ ಬೆಲೆ ತಲುಪಿದೆ.
My sister is coming to India from Dubai for her children's summer holidays and she asked my mum if she wanted anything from Dubai and my mother said bring 10 kilos of tomatoes. 😑😑 And so now she has packed 10kg tomatoes in a suitcase and sent it.I mean…….
— Revs. (@Full_Meals)July 18, 2023

ಇದನ್ನೂ ಓದಿ:ಪರ್ಮಿಶನ್ ಇಲ್ದೆ ಟೊಮ್ಯಾಟೋ ಅಡುಗೆಗೆ ಹಾಕಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ; ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!
ಪುಣೆಯಲ್ಲಿ ಟೊಮ್ಯಾಟೋ ಬೆಳೆದ ರೈತನೊಬ್ಬ ತಿಂಗಳಿನಲ್ಲಿ 3 ಕೋಟಿ ರೂಪಾಯಿ ಮೌಲ್ಯದ ಬೆಳೆಯನ್ನು ಮಾರಾಟ ಮಾಡಿ ಕೋಟ್ಯಾಧಿಪತಿಯಾದರು. ದಿನೇ ದಿನೇ ಏರುತ್ತಿರುವ ಟೊಮೆಟೊ ಬೆಲೆಯಿಂದ ಜನಸಾಮಾನ್ಯರು ಬೇಸತ್ತಿದ್ದಾರೆ.
ಬಿರಿಯಾನಿ ತಿಂದ ನಂತರ ನಿಮಗೆ ಬಾಯಾರಿಕೆಯಾಗಲು ಕಾರಣವೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
