ಮುಂಬೈ:ತಾಯಿ ಮಗಳಿಬ್ಬರು ಕಾಡಿಗೆ ತೆರಳಿದ್ದ ವೇಳೆ ಚಿರತೆಯೊಂದು ಬಾಲಕಿಯ ಮೇಲೆ ಎರಗಿದ್ದು, ಬಾಲಕಿಯ ತಾಯಿ ಚಿರತೆಯೊಂದಿಗೆ ಹೋರಾಡಿ ಮಗಳನ್ನು ರಕ್ಷಿಸಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಚಂದ್ರಪುರ ನಗರದ ಬಳಿ ಇರುವ ಜುನೋನಾ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ತಾಯಿ ಅರ್ಚನಾ ತಮ್ಮ 5 ವರ್ಷದ ಮಗಳು ಪ್ರಜಕ್ತಾಳೊಂದಿಗೆ ಕಾಡಿಗೆ ತೆರಳಿದ್ದಳು. ಅಡುಗೆ ಮಾಡಲು ಏನಾದರೂ ಗೆಡ್ಡೆ ಗೆಣಸು ಸಿಗುತ್ತದೆಯೇ ಎಂದು ಹುಡುಕಲು ಅವರಿಬ್ಬರು ಕಾಡಿಗೆ ಹೋಗಿದ್ದರಂತೆ. ಈ ವೇಳೆ ಚಿರತೆಯೊಂದು ಪ್ರಜಕ್ತಾಳ ಮೇಲೆ ಎರಗಿದೆ. ಚಿರತೆ ತನ್ನ ಬಾಯಿಯನ್ನ ನೇರವಾಗಿ ಬಾಲಕಿಯ ತಲೆಗೆ ಹಾಕಿದೆ.
ತಕ್ಷಣ ಎಚ್ಚೆತ್ತುಕೊಂಡ ಅರ್ಚನಾ ಚಿರತೆಯನ್ನು ಓಡಿಸಲು ಪ್ರಯತ್ನಿಸಿದ್ದಾಳೆ. ಆಗ ಬಾಲಕಿಯನ್ನು ಬಿಟ್ಟ ಚಿರತೆ ಅರ್ಚನಾಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ಅದರೊಂದಿಗೆ ಆಕೆ ಕಷ್ಟಪಟ್ಟು ಹೋರಾಡಿದ್ದಾಳೆ. ಮತ್ತೆ ಆಕೆಯನ್ನು ಬಿಟ್ಟ ಚಿರತೆ ಬಾಲಕಿಯ ತಲೆಗೆ ಬಾಯಿ ಹಾಕಿದೆ. ಆಗ ಅಲ್ಲಿದ್ದ ಕೋಲನ್ನು ತೆಗೆದುಕೊಂಡ ಅರ್ಚನಾ ಚಿರತೆಗೆ ಹೊಡೆಯಲಾರಂಭಿಸಿದ್ದಾಳೆ. ಕೆಲ ಕ್ಷಣಗಳಾದ ಮೇಲೆ ಬಾಲಕಿಯನ್ನು ಅಲ್ಲೇ ಬಿಟ್ಟ ಚಿರತೆ ವಾಪಸು ಹೋಗಿದೆ. ತಾಯಿಯ ಪ್ರೀತಿಯ ಮುಂದೆ ಚಿರತೆ ಸೋತಿದೆ.
ಚಿರತೆ ಬಾಯಿಗೆ ಸಿಕ್ಕಿದ್ದ ಬಾಲಕಿ ಗಂಭೀರ ಗಾಯಾಳುವಾಗಿದ್ದಾಳೆ. ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್)
ಕಾಶ್ಮೀರದ ಜನರಿಗೆ ನಾನೇ ಬ್ರಾಂಡ್ ಅಂಬಾಸಿಡರ್! ಆರ್​ಎಸ್​ಎಸ್ ಮತ್ತು ಮೋದಿ ವಿರುದ್ಧ ಗುಡುಗಿದ ಇಮ್ರಾನ್ ಖಾನ್

ಬ್ರಾಹ್ಮಣರಿಗಾಗಿ ಅಭಿಯಾನ ಆರಂಭಿಸಲಿದೆ ಬಿಎಸ್​ಪಿ! ಬಿಜೆಪಿಗೆ ಬೇಡ, ನಮಗೇ ಮತ ನೀಡಿ ಎಂದ ಮಾಯಾವತಿ!

ಕರೊನಾ ಗೆದ್ದ ಚೀನಾದಲ್ಲಿ ಮಂಕಿ ಬಿ ವೈರಸ್ ಪತ್ತೆ! ಶೇ. 70ಕ್ಕೂ ಹೆಚ್ಚಿದೆ ಈ ಸೋಂಕಿನ ಮರಣ ಪ್ರಮಾಣ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + 4 =
Remember me
